ಒಂದಿಷ್ಟು ಹನಿಗಳು...

ಒಂದಿಷ್ಟು ಹನಿಗಳು...

ಕವನ

ಎಚ್ಚರಾ...

ಕಾಶ್ಮೀರ ರಾಷ್ಟ್ರೀಯ

ಜಲ ವಿದ್ಯುತ್

ಉತ್ಪಾದನಾ

ಘಟಕಕ್ಕೆ

ದೊಡ್ಡ ಗೌಡರ

ಭೇಟಿ ಏಕೇ...?

 

ರಾಜ್ಯದ-

ಯಾರ ಬುಡಕ್ಕೋ

ಕರೆಂಟ್ ಶಾಕ್

ಕೊಡುವ ಸಿದ್ಧತೆ

ಇರಬಹುದು

ಜೋಕೇ!

***

ಹಗರಣದ ಹಾವು...

ಅವರದ್ದನ್ನು

ನೀವು;

ನಿಮ್ಮದ್ದನ್ನು

ಅವರು-

ಸದಾ

ಕೆದಕಿಬಿಡಿ.....

 

ಅದೆಷ್ಟು ತರತರ

ಹಗರಣದ

ಹಾವುಗಳಿವೆಯೋ

ಅವುಗಳೆನ್ನೆಲ್ಲಾ

ಹೊರಗೆಳೆದು

ತೋರಿಸಿಬಿಡಿ!

***

ಲಡ್ಡು ಉಂಡೆ? 

ಸಿದ್ದರಾಮಯ್ಯ

ಅನುಮತಿ

ಕೊಟ್ರೆ

ನಾನೇ ಸಿಎಂ

ಆಗುವೆ-

ದೇಶಪಾಂಡೆ....

 

ಅನುಮತಿಯ

ಅಗತ್ಯವೇ ಇಲ್ಲ

ಮಾಡಿ ಬಿಡಿ 

ಪ್ರಯತ್ನ-

ಸಿಗುವುದೇ

ಲಡ್ಡು ಉಂಡೆ?

***

ಅಡ್ವಾನ್ಸ್ ಟವೆಲ್ 

ಜಮೀರ್

ಅಹ್ಮದ್-

ಐದು ವರ್ಷ

ಕಾಲ

ಸಿ ಎಂ ಕುರ್ಚಿ

ಖಾಲಿ ಇಲ್ಲಾ...

 

ಆದರೆ

ಅಡ್ವಾನ್ಸ್

ಟವೆಲ್

ಹಾಕಲು

ಯಾರಿಗೂ

ಅಡ್ಡೀ ಇಲ್ಲಾ !

***

ಟೆಂಪಲ್ ರನ್ 

ಈ ರಾಜಕಾರಣಿಗಳು

ಅಧಿಕಾರ

ನಡೆಯುವಾಗ-

ತಿಂದುಬಿಡುವರು

ತರಹೇವಾರೀ

ಬನ್...

 

ಅದನ್ನು

ಜೀರ್ಣಿಸಿಕೊಳ್ಳಲು

ಮಾಡುವರು

ಮುಂದೆ- 

ವಿವಿಧ ಟೆಂಪಲ್

ರನ್!

***

ಚಂದನವನದಲ್ಲೂ ಬೆಂಕಿ?

ಚಂದನವನದ

ಕಾಡಿನಲ್ಲೂ

ಉರಿದು

ಹೋಯಿತೇ

ಶ್ರೀಗಂಧದ

ಕಾಡ್ಗಿಚ್ಚು...?

 

ಆದರೂ

ಅಲ್ಲಿಂದ

ಸುಗಂಧ ವಾಸನೆ 

ಬರದೆ ಹೊಮ್ಮಿತೇ

ಕಾಮದ 

ಕಮುಟ್ಟು!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್