ಒಂದಿಷ್ಟು ಹನಿಗಳು !
ಕಿತ್ತ್ಹೋಯ್ತು ಅರ್ಹತೆ!
ಕನ್ನಡ ಮತ್ತು ಸಂಸ್ಕೃತಿ
ಇಲಾಖೆ ಸಚಿವರಿಗೆ
ಕನ್ನಡ-
ಬರೆಯೊಕೆ ಬರಲ್ಲ
ಶಿಕ್ಷಣ ಮಂತ್ರಿಗೆ;
ಓದೋಕ್ ಬರಲ್ಲ...
ಅಯ್ಯೋ ಹುಚ್ಚಾ-
ಅವರಿಬ್ರಿಗೂ
ಇವೆರೆಡೂ ಬಂದಿದ್ರೇ-
ಅವರಿಬ್ರೂ
ಮಂತ್ರಿಗಳೇ
ಆಗ್ತಿರ್ಲಿಲ್ಲ!
***
ದೀಪ ಮತ್ತು ಕಗ್ಗತ್ತಲು!
ಗೊಂದಲ
ಆತಂಕಗಳಿಂದ
ಬೇಸತ್ತ ರಾಜ್ಯ
ನಾಗರೀಕ
ಸೇವಾಕಾಂಕ್ಷಿಗಳು-
ಕೆ ಪಿ ಎಸ್ ಸಿ ಮತ್ತೆ ಫೇಲ್....
ಅಯ್ಯೋ
ಉರಿಯುವ
ದೀಪದಡಿಯಲಿ
ಕತ್ತಲಿರುವಂತೆ-
ಬೆಳಕ ಕೊಡಬೇಕಾದ
ಸಂಸ್ಥೆ ಕಗ್ಗತ್ತಲಿನೋಳ್!
***
ಬೆಳ್ಳಿ-ಬಂಗಾರ
ಮಾತು
ಬೆಳ್ಳಿ-
ಒಂದೇ
ಉತ್ತರವ
ಕೊಡಲು
ಶಕ್ತ...
ಮೌನ
ಬಂಗಾರ-
ನೂರಾರು
ಉತ್ತರ
ಕೊಡಲು
ಮುಕ್ತ
***
ಓ ನನ್ನ ಸರ್ಕಾರ್ ಪೊಲೀಸ್
ಎನಗೆ ಪುಕ್ಕಟೆ
ಹಣವ ನೀಡಿ-
ರಾಷ್ಟ್ರದ
ಸೋಮಾರಿ
ಪ್ರಜೆಯನ್ನಾಗಿ
ಎಂದೂ ಮಾಡದಿರಿ....
ನಾನು
ಸ್ವಾಭಿಮಾನಿಯಾಗಿ
ಸೆಟೆದು ನಿಂತು-
ದುಡಿದು ತಿನ್ನುವ
ದೇಶದ ಪ್ರಗತಿಶೀಲ
ನಾಗರೀಕನನ್ನಾಗಿ ಮಾಡಿ!
***
ಬೇಕೂಫ್
ಸಿದ್ದರಾಮಯ್ಯ
ಯಡಿಯೂರಪ್ಪಂಗೆ
ಹೈ ರಿಲೀಫ್-
ಪಕ್ಷ
ಯಾವುದೇ ಇರಲಿ
ಅವರಿಗಿಲ್ಲ ತಕಲೀಫ್....
ನಮ್ಮಂಥ
ಶ್ರೀಸಾಮಾನ್ಯನಿಗೆ
ಇದು ಏಕಿಲ್ಲ?...
ಎಂದು ತಲೆಯೊಳಗೆ
ಹುಳಬಿಟ್ಟುಕೊಂಡು-
ಆದನವ ಬೇಕೂಫ್!
***
ಕೇಸರೀ ಬಾತ್
ದೆಹಲಿಯಲ್ಲಿ
ಆಮ್ ಆದ್ಮಿ
ಪಾರ್ಟಿಗೆ
ಸೋಲು-
ಕೇಸರಿ
ಹ್ಯಾಟ್ಸಾಫ್...
ಇನ್ನು ಮುಂದೆ
ದೆಹಲಿ
ಜನತೆ
ತಿನ್ನಬಹುದು
ಇಂಟರ್ನ್ಯಾಷನಲ್
ಕೇಸರೀಬಾತ್!
-ಕೆ. ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
![](https://saaranga-aws.s3.ap-south-1.amazonaws.com/s3fs-public/%E0%B2%95%E0%B3%87%E0%B2%B8%E0%B2%B0%E0%B2%BF.jpeg)