ಒಂದಿಷ್ಟು ಹನಿಗಳು !
ಯಥಾ ದುಡಿಮೆ ತಥಾ ಫಲಮೇ...
ಈ ದೊಡ್ಡ ದೊಡ್ಡ
ಸೆಲೆಬ್ರಿಟಿಗಳೆಲ್ಲಾ-
ಮಟ್ಕಾ, ಜೂಜು
ಗುಟ್ಕಾಗಳಿಗೇ
ಜಾಹೀರಾತುಗಳ
ನೀಡುವರಲ್ಲಾ...?
ಈ ರೀತಿ
ತಿಂದ ಹಣ
ಜೀರ್ಣವಾಗದೆ-
ತೊಂದರೆಗಳಲೇ
ಬಳಲಿ;ಕೊರಗಿ
ನಿರ್ಗಮಿಸುವರಲ್ಲ!
***
ಮರೆಯಾದ ದೇಶಪ್ರೇಮಿ ನಟ ಮನೋಜ್...
ದೇಶಭಕ್ತಿ
ಸಿನಿಮಾಗಳನು
ಭಾರತೀಯ
ಚಿತ್ರರಂಗಕೆ
ನೀಡಿ ಮೆರೆದ-
ಮನೋಜ್ ಕುಮಾರ್...
ಮತ್ತೊಮ್ಮೆ ಹುಟ್ಟಿ-
ಇಂದಿನ ಯುವಕರ
ಎದೆಯೊಳಗೆ
ದೇಶಭಕ್ತಿಯ
ಕಿಚ್ಚನೆಬ್ಬಿಸು
ಓ ಭಾರತ್ ಕುಮಾರ್!
***
ತಾಯಿ ಮತ್ತು ಹೆಂಡತಿ
ತಾಯಿಯನು
ಶೇಕಡಾ
ತೊಂಭತ್ತರಷ್ಟು
ಅರ್ಥ ಮಾಡಿಕೊಂಡ
ತಿಮ್ಮ-
ಬಹು ಆನಂದಪಟ್ಟ...
ಹೆಂಡತಿಯನು
ಹತ್ತು ಪರ್ಸೆಂಟೂ
ಅರ್ಥಮಾಡಿ
ಕೊಳ್ಳಲಾರದೆ-
ಜೀವನದಲಿ
ಬಹಳ ಸಂಕಟಪಟ್ಟ!
***
ಪರಿಶ್ರಮ ಮತ್ತು ಫಲ...
ಪಕ್ಷದ ಸ್ಥಾಪನಾ
ದಿನಾಚರಣೆಯಲ್ಲಿ
ವಿಜಯೇಂದ್ರ ಹೇಳಿಕೆ-
ಪರಿಶ್ರಮದಿಂದ
ಬಿಜೆಪಿ
ಉದಯ...
ಸತ್ಯವಾದ ಮಾತು
ವಿಜಯೇಂದ್ರ-
ನೂರಕ್ಕೆ ನೂರು ಸತ್ಯಾ...
ಆದರೆ-
ಪರಿಶ್ರಮ ಪಟ್ಟವರು
ಮಾತ್ರ ನೀವಲ್ಲ!
***
ಸಂಕೀರ್ಣ ಬದುಕು!
ಈ ಸಂಕೀರ್ಣ
ಬದುಕಿನ
ಫಲಿತಾಂಶಗಳು
ನಿನ್ನ
ಕೈಲಿಲ್ಲವೋ
ಮೂಢಾ...
ಪ್ರಯತ್ನವಷ್ಟೇ
ನಿನ್ನ
ಕೆಲಸ...
ಉಳಿದ ವ್ಯರ್ಥ
ಆಲಾಪಗಳೇಕೋ
ದಡ್ಡಾ!
***
ರಾಜಕೀಯ ಜಗಳ
ಧರ್ಮಸ್ಥಳಕ್ಕೆ
ಹೋಗೋಣ;
ಆಣೆ ಮಾಡೋಣ-
ರಾಜಕೀಯ
ನಾಯಕರ ಜುಜುಬಿ
ಜುಗಲ್ಬಂದಿ ಜಗಳದ ಸೋನೆ...
ದೇವಸ್ಥಾನಕೆ ಹೋಗಿ
ಅಪವಿತ್ರ ಮಾಡುವ ಬದಲು-
ಜಂಗೀ ಕುಸ್ತಿಯಾದ್ರೂ
ಆಡೀ ಮತ್ತೇ
ಜನಗಳಿಗೆ ಸಿಕ್ಕೀತು
ಪುಕ್ಕಟೆ ಮನರಂಜನೆ!
***
ಮೂರ್ಖ ಸಿದ್ಧಾಂತಿಗಳು
ಸರ್ಕಾರ-
ಜಾತಿ ಗಣತಿ ಜಾರಿಗೆ ಸೈ...
ಜಾತಿ ಜಾತಿಯೆಂದೇಕೆ
ಕುಣಿಯುತಿರುವಿರಿ
ಕೋತಿಯಂತಾಡುವ
ರಾಜಕಾರಣಿಗಳೇ...
ಜಾತಿಯೆಂಬುದು
ಓಟನು
ಕೀಳುವ
ಪ್ರಭಲ ಅಸ್ತ್ರವೆಂದು
ತಿಳಿದಿರುವಿರಾ
ಮೂರ್ಖ ಸಿದ್ಧಾಂತಿಗಳೇ?
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
