ಒಂದಿಷ್ಟು ಹನಿಗಳು !

ಒಂದಿಷ್ಟು ಹನಿಗಳು !

ಕವನ

ಅಭಿನಂದನೆಗಳು ಬಾನು ಮುಷ್ತಾಕ್...

ಕನ್ನಡದ

ಬಾನು

ಬೆಳಗಿದ

ಚೊಚ್ಚಲ

ಬೂಕರ್

ದೀಪ...

 

ಕನ್ನಡ ಸಾಹಿತ್ಯ

ಭೂಗರ್ಭದಲಿ

ಇನ್ನೂ ಎಷ್ಟು 

ಇವೆಯೋ ಇಂತಹ

ಮಹಾನ್

ಸಾಹಿತ್ಯ ಸ್ತೂಪ!

***

ಭಾರತೀಯ ಪರಂಪರೆ 

ನಾವು- 

ಸಭೆ ಸಮಾರಂಭಗಳ

ಏರ್ಪಡಿಸಿ

ಜನರ ಸೇರಿಸಲು

ಮಾಡುತಿಹೆವು 

ಹರಸಾಹಸ...

 

ಬನ್ನಿ-

ಊರ ಜಾತ್ರೆ

ನಾಡ ಹಬ್ಬಗಳ

ನೋಡಬನ್ನಿ...

ಅಲ್ಲಿ ಜನಸಾಗರ ಸೇರಿ

ಹರಿವುದು ಭಕ್ತಿರಸ!

***

ಜಾತಿ ಜಾತಿ ಎನ್ನುವ ಕೋತಿ..

ಜಾತಿಯೇ

ಈ ಓಟಿನ

ಕೋಟೆಯೆಂದು

ಭ್ರಮಿಸಿ-

ಆಟವಾಡುತಿಹುದು

ರಾಜಕೀಯ ಕೋತಿ...

 

ಈ ಜಾತಿ-

ನಿಜಕೂ ಒಂದು

ಭೂತವೆಂದರಿಯದೆ

ತಟ್ಟಿಸಿಕೊಳ್ಳುವುದು

ಒಂದು ದಿನ

ಅದರ ಮೂತಿ!

***

ದೊಡ್ಡಣ್ಣನ ಬೆದರಿಕೆ 

ಭಾರತದಲ್ಲಿ

ಐ ಫೋನ್

ತಯಾರಿಸಿದರೆ

ಶೇಕಡಾ ಇಪ್ಪತ್ತೈದು ತೆರಿಗೆ-

ಆಪಲ್ ಗೆ ಟ್ರಂಪ್

ಬೆದರಿಕೆ...

 

ಅಯ್ಯಾ ತೆರಿಗೆ

ವಾಲಾ ದೊಡ್ಡಣ್ಣ-

ಕಾಲ ಬಂದರೆ

ಹುಲ್ಲುಕಡ್ಡಿಯೂ

ಹಾವಾದೀತು

ಎಚ್ಚರಿಕೆ!

***

ಸಭೆಗೆ ಸಿ ಎಂ ಗೈರು 

ನೀತಿ 

ಆಯೋಗದ

ಸಭೆಗೆ

ಸಿ ಎಂ 

ಸಿದ್ದರಾಮಯ್ಯ

ಗೈರು...

 

ನಮ್ಮ ರಾಜ್ಯ ನೀತಿಗೇ

ಬೇಕಾದಷ್ಟು

ಕೆಲಸಗಳಿರೋವಾಗ-

ಅದ್ಯಾವುದ್ರಿ

ಈ ಕೇಂದ್ರದ ನೀತಿ?-

ಸಿ ಎಂ ಸಿದ್ದರಾಮಯ್ಯ!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್