ಒಂದಿಷ್ಟು ಹನಿಗಳು !

ಒಂದಿಷ್ಟು ಹನಿಗಳು !

ಕವನ

ಬೆನ್ನಿಗೂ ಬಂತೇ ಆಭರಣ.....

ಕತ್ತಿನಿಂದ

ಬೆನ್ನಿನತ್ತ

ತಿರುಗಿದ

ಆಭರಣ-

ಸ್ಫರ್ಧೆಯೇ ಆರಂಭ

ಹೊಸ ವಿನ್ಯಾಸಕೆ...

 

ವಿಶಾಲವಾಗುತಿರುವ

ಬೆನ್ನ ನೋಡಿ

ಮರುಕ ಬಂತೇ-

ನಮ್ಮೀ

ಚೆಲುವ

ಆಭರಣಕೆ!

***

ಪ್ರತಿಷ್ಠೆ.....

ನನಗೆ ನನ್ನ  ತಾಯ್

ದೊಡ್ಡವಳ್;

ನಿನಗೆ ನಿನ್ನ ತಾಯ್...

ಕಂಡವರಾರ್

ಸಾವಿರಾರು

ವರ್ಷಗಳ ಇತಿಹಾಸವನ್?

 

ಇಲ್ಲಿ ಪ್ರತಿಷ್ಠೆಗಾಗಿ

ಹೋಲಿಕೆ ಏಕೆ....?

ಸೋದರರೆಲ್ಲಾ

ಸಮಕಾಲೀನರ್...

ಸುಮ್ಮನೆ ಪ್ರಹಸನವೇಕೆ

ಓ ಕಮಲಹಾಸನ್?

***

ಸರ್ಜಿಕಲ್ ಧಾಳಿ...! 

ಸರ್ಜಿಕಲ್

ಸ್ಟ್ರೈಕ್

ಮೊದಲು

ನಡೆಸಿದ್ದು

ನಾವು-

ಕಾಂಗ್ರೆಸ್...

 

ಧಾಳಿ ಇಬ್ಬರಿಂದ

ನಡೆದಿರುವುದಂತೂ

ನಿಜ-

ಅದರೆ ಅದು

ಒಳಗೋ ಹೊರಗೋ

ಎನ್ನುವುದೇ ಮುಖ್ಯ!

***

ಕನ್ನಡದ ಕೆಲಸ 

ಕನ್ನಡ ಸಾಹಿತ್ಯ

ಪರಿಷತ್ ಅಧ್ಯಕ್ಷ

ಮಹೇಶ್ ಜೋಷಿಗೆ-

ಸಚಿವಸ್ಥಾನ ಮಾನದಿಂದ

ರಾಜ್ಯ ಸರ್ಕಾರ

ಕೊಕ್...

 

ಸಚಿವ ಸ್ಥಾನಮಾನ

ಇರದಿದ್ದರೂ

ಕನ್ನಡದ ಕೆಲಸವನು

ದಂಡಿಯಾಗೇ

ಮಾಡಬಹುದು...

ಕಳೆದುಕೊಂಡಿರಾ ಲಕ್!

***

ಜೀವನ ಜಗತ್ತು 

ಈ ಜಗತ್ತು

ಎಷ್ಟು 

ಜನಸಂಖ್ಯೆಯನ್ನು

ಕಂಡಿದೆಯೋ ಅಷ್ಟೇ

ಜೀವನ ಮುಖಗಳ

ನಾ ಕಂಡೆ....

 

ನನ್ನದೊಂದೇ

ಮುಖದಿಂದ

ನಾ ಜರ್ಝರಿತ...

ಇನ್ನು ಹೇಗೆ ಅರಿಯಲಿ

ಈ ಜೀವನದ

ಆಳ-ಅಂತರಾಳವನೆಂದೆ?

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್