ಒಂದಿಷ್ಟು ಹನಿಗಳು...

ಒಂದಿಷ್ಟು ಹನಿಗಳು...

ಕವನ

ಈ ಪ್ರಪಂಚದಲ್ಲಿ” ಮೌನ “

ಜನರಿಗೆ ಎವರೆಸ್ಟ್ ಶಿಖರ ಏರಿದ

ಅನುಭವದ ಖುಷಿಯ ಕೊಟ್ಟರೆ

ಮರುಕ್ಷಣವೆ  ಸಪ್ತ 

ಸಾಗರದಾಳದಲ್ಲಿ ಮುಳುಗಿದಾಗಿನ 

ಉಸಿರುಗಟ್ಟಿದ 

ಅನುಭವಗಳನ್ನೂ ನೀಡುತ್ತದೆ  !

***

ಬಾಳು ಕತ್ತಲೊಳಗೆಯಿರಲು

ಅಹಂಕಾರ ಜೊತೆಗೆ ಬರಲು

ಬೆಳಕು ಸಿಗದದು ನೋಡಿರೊ

ಅವನತಿ ಮೆಟ್ಟಿಲು ತೋರಲು

***

ಪ್ರೀತಿಯ ಹೃದಯದಾಳದಿ ಇರಲಿ ಸಂಭಾಷಣೆ

ಸವಿ ಸವಿಯೊಳು ಹಿಡಿಯಲಿ ಪ್ರೇರಣೆ

ಪ್ರೇಮ ತುಂಬಿದ ಬದುಕು ಹೀಗೆಯೇ ಸಾಗಲಿ

ಒಡಲೊಳಗಿನ ಜೀವನದಲ್ಲಿರಲಿ ಪೋಷಣೆ

***

ಮುಕ್ತಕ

ಸಾಲವದು ಶೂಲವೇ ತೀರಿಸುವ ಕೈಗಳಿರೆ

ಮೂಲವದು ದೊರಕುತಲೆ ಕೊಡುವನೈ ಮನುಜ|

ಬಾಲವಿರದಿಹ ಜನರು ದೂಷಣೆಯ ಮಾಡಿದರೆ

ಕಾಲಕಸವದುಯೆನ್ನು -- ಛಲವಾದಿಯೆ

***

ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್