ಒಂದು ಒಳ್ಳೆಯ ನುಡಿ (242) - ಬೀಚಿಯವರ ನುಡಿಗಳು
ಶ್ರೀ ಬೀ.ಚಿ.ಯವರ ಶುಚಿಯಾದ ನುಡಿಗಳು.
* ದುಡಿಯದೇ ಇರುವ ಪ್ರತಿಯೊಬ್ಬ ಶ್ರೀಮಂತನೂ ಭಿಕ್ಷುಕನೆ....
* ಗೆಳೆಯನನ್ನು ಉಪ್ಪಿನಂತೆ ಬಳಸಬೇಕೇ ವಿನಃ ಸಕ್ಕರೆಯಂತೆ ಸುರಿದುಕೂಳ್ಳಬಾರದು .
* ಶ್ರೀಮಂತನ "ಕ್ಷಯ"ವೇ ಡಾಕ್ಟರ್ ನ "ಆಕ್ಷಯ" ಪಾತ್ರೆ.
* ವರ್ಷಕ್ಕೊಮ್ಮೆ ಸಾವಿನ ಬಗ್ಗೆ ಎಚ್ಚರಿಸಲು ಕಾಲರಾಯನು ಗಂಟೆ ಬಾರಿಸುವ ದಿನವೇ ಜನ್ಮ ದಿನ.
* ಬಾಳಿನ ವ್ಯಾಕರಣ.
ಹೆಣ್ಣು--ಪದ್ಯ
ಗಂಡು--ಗದ್ಯ.
ಮಕ್ಕಳು--ವ್ಯಾಕರಣ.
* ತಾಳಿ ಕದ್ದವನಿಗೆ ಕಠಿಣ ಶಿಕ್ಷೆ, ತಾಳಿ ಕಟ್ಟಿದವನಿಗೆ ಜೀವಾವಧಿ ಶಿಕ್ಷೆ.
* ಮನೆ ನಿಂತಿರುವುದು
ಮಡದಿಯಿಂದ. ಅದು ಬಿದ್ದರೆ
ಗಂಡನ ತಲೆಮೇಲೆ.
* ವಾರದಲ್ಲಿ ಮೂರು ದಿನ-
ವಾದರೂ ನಗುತ್ತಿರಬೇಕು..
ನಿನ್ನೆ, ಇಂದು, ನಾಳೆ
(ಸಂಗ್ರಹ) ಪ್ರಭಾಕರ ಅಡಿಗ, ಉಡುಪಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ