ಒಂದು ಒಳ್ಳೆಯ ನುಡಿ - 88

ಒಂದು ಒಳ್ಳೆಯ ನುಡಿ - 88

ನಾವು ಈ ಹಿಂದೆ ಆಗಿ ಹೋದ ಯಾವುದೇ ವಿಷಯವನ್ನು ಗ್ರಹಿಸಿ ಚಿಂತಿಸಬಾರದು. ಚಿಂತೆ ಎನ್ನುವುದು ನಮ್ಮನ್ನು ಪೂರ್ತಿ ಆವರಿಸಿ ಚಿತೆಯತ್ತ ಒಯ್ಯಬಹುದು. ಅದನ್ನೇ ಯೋಚಿಸುತ್ತಾ ಕುಳಿತರೆ, ಮುಂಬರುವ ಒಳ್ಳೆಯ ದಿನಗಳನ್ನು ನಾವೇ ಕೈಯಾರೆ ಹೊಸಕಿ ಹಾಕಿದಂತೆ. ಆದದ್ದು ಆಗಿ ಹೋಯಿತು, ನಮಗದು ಬೇಡ. ಆಗಿದ್ದು ಆಗಲಿ, ಮುಂದೆ ನೋಡೋಣ ಎಂಬ ದೃಢತೆಯಿರಲಿ. ‘ವರ್ತಮಾನದ ಬದುಕು ನಮ್ಮನ್ನು ಕೈಬೀಸಿ ಕರೆಯುತ್ತಿದೆ’  ಅದಕ್ಕಾಗಿ ಯೋಚಿಸೋಣ. ಇಂದಿನ ದಿನ ನಮ್ಮದು, ನಾಳೆ ಏನಾಗುವುದೋ ಅದರ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ಬಂದದ್ದನ್ನು ಇದ್ದ ಹಾಗೆಯೇ ಸ್ವೀಕರಿಸುವ, ಸವಾಲುಗಳಿಗೆ ಎದೆಯೊಡ್ಡುವ ಚಾಕಚಕ್ಯತೆ ನಮ್ಮಲ್ಲಿರಲಿ. ಜೀವನ ಹೇಗೆ ಹೋಗುವುದೋ ಹಾಗೆ ಹೋಗಲು ಪ್ರಯತ್ನಿಸಬೇಕು. ಅದನ್ನು ತೆಗೆದುಕೊಂಡು ಹೋಗುವ ಜಾಣ್ಮೆ, ಬುದ್ಧಿವಂತಿಕೆ ನಮ್ಮಲ್ಲೇ ಇದೆ. ಆದರೆ ಹೇಗೆ, ಎಷ್ಟು, ಯಾವ ರೀತಿ, ಎಲ್ಲಿ ಬಳಸಬೇಕೆಂಬ ಪ್ರಜ್ಞೆ ಬೇಕಷ್ಟೆ.

*ಗತೇ ಶೋಕೋ ನ ಕರ್ತವ್ಯೋ* *ಭವಿಷ್ಯಂ ನೈವ ಚಿಂತಯೇತ್|*

*ವರ್ತಮಾನೇನ ಕಾಲೇನ* *ವರ್ತಯಂತಿ ವಿಚಕ್ಷಣಾಃ*||

ವರ್ತಮಾನದ ವ್ಯವಹಾರಗಳನ್ನು ಗಮನಿಸಿ ಮುಂದೆ ಸಾಗುವವರೇ ಜಾಣರು, ಬುದ್ಧಿವಂತರು.

ಸುಭಾಷಿತ:ಸು.ರತ್ನ ಮಾಲಿಕಾ

-ಸಂಗ್ರಹ:ರತ್ನಾ ಭಟ್ ತಲಂಜೇರಿ 

ಚಿತ್ರ ಕೃಪೆ: ಇಂಟರ್ನೆಟ್