ಒಂದು ಗಝಲ್
ಕವನ
ಮೊರೆವ ಕಡಲಿನಂತೆ ನೀನು ಆಗಬೇಡ ಜಾಣೆಯೆ
ತೀರಕೆರಗಿ ಬರುವ ನೀರ ಸೇರಬೇಡ ಜಾಣೆಯೆ
ಮೌನ ಮಾತು ನೆಗೆದು ಹೋಗೆ ಪ್ರೀತಿ ಈಗ ಎಲ್ಲಿದೆ
ಜೀವ ಭಾವ ಬೆರೆತ ಸಮಯ ಬಾಡಬೇಡ ಜಾಣೆಯೆ
ಮುತ್ತು ರತ್ನ ಹವಳ ಬೇಡ ಒಲುಮೆಯೊಂದೆ ಸೇರಲಿ
ಬತ್ತದಿರುವ ಕನಸ ಒಳಗೆ ಸಾಗಬೇಡ ಜಾಣೆಯೆ
ಕರೆಯದಿರಲು ನೋವು ಸಹಜ ಯಾತ್ರೆ ಪಯಣವೆಂದಿಗು
ನಡೆಯುತಿರಲು ವೇಷ ದ್ವೇಷ ಕೂಡಬೇಡ ಜಾಣೆಯೆ
ವಿಷದ ಮುಳ್ಳ ಸನಿಹ ಇಂದು ಕುಳಿತೆ ಏಕೆ ಈಶನೆ
ಕಸದ ರೀತಿ ನೋಡುತಿರಲು ಹೋಗಬೇಡ ಜಾಣೆಯೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
