ಒಪ್ಪಂದದ ಸಂಬಂಧ

ಒಪ್ಪಂದದ ಸಂಬಂಧ

ಕವನ

ಅವರೊಳಗೆ ನಡೆದಿದ್ದ ಆ ಒಂದು ಒಪ್ಪಂದ

ಈತನಕ ಉಳಿದಿತ್ತು ಈರ್ವರಲಿ ಸಂಭಂದ

ಅದು ಈಗ ಹಳತಾಯ್ತು, ಅನುಬಂಧ ಹಳಸಿತ್ತು

ಬೇರ್ಪಡುವ ಕಾಲವದು ಬಳಿಗೆ ಬಂದಾಯ್ತು

 

ಒಲವಿದ್ದ ಆ ದಿನದೆ ಮೈಮರೆತು ಜೊತೆಯಾಗಿ

ಉದರದಲಿ ಚಿಗುರೊಡೆದು ಒಂದಾದ ಫಲವಾಗಿ

ಇಬ್ಬರಿಗು ಬೇಕಿಲ್ಲ,ಯಾರೀಗ ಹೊರಬೇಕು

ಪಾಲನೆಯ ಹೊಣೆ ಹೊರಲು ಮನವಿರಲು ಬೇಕು

 

ದಾಹವನು ತೀರಿಸಲು ಬೇಕಿತ್ತು ಜೊತೆಯೊಂದು

ಉತ್ಸಾಹ ಇಳಿದಾಗ ನಡುವಲ್ಲಿ ಬಿರುಕೊಂದು

ಉತ್ತರಕೆ,ದಕ್ಷಿಣಕೆ ಮುಖಮಾಡಿ ನಿಂತಿರಲು

ಹಡೆದಿರುವ ಕುಡಿಯಿರಲು ಯಾರೀಗ ದಿಕ್ಕು||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ್