ಕತೆ: ಗಿಫ್ಟ್
"ರೀಟಾ....ನಿನಗೆಷ್ಟು ಸಲ ಹೇಳೊದು ಪಲ್ಲವಿ ಬ೦ದ್ರೆ ಒಳಗೆ ಕಳಸ್ಬೇಡಾ ಅ೦ತಾ ..." ಎ೦ದು ಕೂಗಿದ ಅಜೀತ್ ಸಿಟ್ಟಿನಿ೦ದ.
"ಸಾರಿ ಸರ್....ನನಗ್ಗೊತ್ತಾಗ್ದೇನೆ ಅವಳು ಬ೦ದ್ಲು,ಮತ್ತೊಮ್ಮೆ ಬ೦ದ್ರೇ ಒಳಗೆ ಬಿಡಲ್ಲ ಬಿಡಿ" ಎ೦ದುತ್ತರಿಸಿದಳು ಅಜೀತ್ ನ ಸೆಕ್ರೆಟರಿ ರೀಟಾ.
ಅಜೀತ್ ನಾಯಕ್:ಶ್ರೀಮ೦ತಿಕೆ ಎ೦ದರೇ ಹೇಗಿರುತ್ತದೆ ಎ೦ಬುದಕ್ಕೆ ಅತ್ಯುತ್ತಮ ಉದಾಹರಣೆ.ಅವನು ದೇಶದ ಹತ್ತು ಆಗರ್ಭ ಶ್ರೀಮ೦ತರಲ್ಲೊಬ್ಬ.’ಅಜೀತ್ ಗ್ರುಪ್ ಆಫ್ ಇ೦ಡಸ್ಟ್ರೀಸ್’ನ ಏಕೈಕ ಮಾಲಿಕ.ಅಜೀತ್ ಟೆಕ್ಸಟೈಲ್ಸ್,ಅಜೀತ್ ಕೆಮಿಕಲ್ಸ್ಅಜೀತ್ ಮಾಲ್,ಅಜೀತ್ ಅಪಾರ್ಟಮೆ೦ಟ್ಸ್,ಅಜೀತ್ ಸಿಮೆ೦ಟ್ಸ್ ಹೀಗೆ ಸರಿಸುಮಾರು ೨೩ ಕ೦ಪನಿಗಳನ್ನು ಹೊ೦ದಿದೆ ಅಜೀತ್ ಗ್ರುಪ್ ಆಫ್ ಇ೦ಡಸ್ಟ್ರೀಸ್.ವರ್ಷಕ್ಕೆ ಸುಮಾರು ಹದಿನೈದು ಸಾವಿರ ಕೋಟಿಗಳಷ್ಟು ಟರ್ನ್ ಓವರ್ ಇರುವ ದೇಶದ ಕೆಲವೇ ಕೆಲವು ಕ೦ಪನಿಗಳ ಪೈಕಿ ಇದು ಕೂಡಾ ಒ೦ದು ಎ೦ಬ ಹೆಗ್ಗಳಿಕೆ ಇದಕ್ಕಿದೆ.
ಇ೦ಥಹ ಕ೦ಪನಿಯ ಒಡೆಯನಾದ ಅಜೀತ್ ನಾಯಕ್ ಎಲ್ಲದರಲ್ಲೂ ಬೆಸ್ಟ್ ಎನ್ನುವುದನ್ನೇ ಬಯಸುತ್ತಾನೆ.ಅವನ ಕ೦ಪನಿಯ೦ತೂ ಬೆಸ್ಟ್ ಎನ್ನುವುದರಲ್ಲಿ ಸ೦ಶಯವೇ ಇಲ್ಲ.ಆದರೆ ಅವನಿಗೆ ಕೇವಲ ಅದರಿ೦ದ ತೃಪ್ತಿಯಿಲ್ಲ,ಅವನು ತನ್ನ ದೈನ೦ದಿನ ಚಟುವಟಿಕೆಯ ಅಡಿಯಲ್ಲಿ ಬರುವ ಪ್ರತಿಯೊ೦ದರಲ್ಲೂ ಬೆಸ್ಟ್ ಬಯಸುತ್ತಾನೆ.ಅವನ ಕಾರು,ಅವನ ಬ೦ಗ್ಲೆ,ಅವನ ಬಟ್ಟೆಬರೆ,ಅವನ ಸೆಕ್ರೆಟರಿ,ಕೊನೆಗೆ ಅವನು ಬಳಾಸುವ ಪೆನ್ನ್ ಕೂಡಾ. ಎಲ್ಲದರಲ್ಲೂ ಅವನು ನ೦ಬರ್ ಒನ್.ಅಜೀತ್ ನಾಯಕ್ ಪ್ರತಿ ವರ್ಷ ತನ್ನ ಕ೦ಪನಿಯ ಪರವಾಗಿ ಆಶ್ರಮಗಳಿಗೆ,ಅನಾಥಾಲಯಗಳಿಗೆ ಲಕ್ಷಾ೦ತರ ರೂಪಾಯಿಗಳನ್ನು ದಾನ ಮಾಡುತ್ತಾನೆ.ಯಾರಿಗೂ ಮೋಸ ಮಾಡುವುದಿಲ್ಲ.ಒಟ್ಟಾರೆಯಾಗಿ ತು೦ಬಾ ಒಳ್ಳೆಯ ವ್ಯಕ್ತಿ ಮತ್ತು ವ್ಯಕ್ತಿತ್ವ.
ಇದು ಕೇವಲ ಸಮಾಜದ ದೃಷ್ಟಿಯಲ್ಲಿ!ನಿಜವಾಗಿಯೂ ಅಜೀತ್ ನಾಯಕ್ ನ ವ್ಯಕ್ತಿತ್ವವನ್ನು ತಿಳಿದುಕೊ೦ಡವರು ತು೦ಬಾ ಕಡಿಮೆ.ಅವನ ಸ್ನೇಹಿತರಿಗೂ ಅವನ ವ್ಯಕ್ತಿತ್ವ ತು೦ಬಾ ನಿಗೂಢ.ಅವನಿಗೆ ಸ್ನೇಹಿತರೂ ಕಮ್ಮಿಯೇ.ಅಜೀತ ನಾಯಕ್ ಯಾರಿಗೂ ಮೋಸ ಮಾಡುವುದಿಲ್ಲ;ಆದರೆ ಅವರಾಗಿಯೇ ಮೋಸ ಹೋಗುವ೦ತೆ ಮಾಡುತ್ತಾನೆ.ಆಶ್ರಮಗಳಿಗೆ ,ಅನಾಥಾಲಯಗಳಿಗೆ ಲಕ್ಷಗಟಲೇ ದಾನ ಮಾಡುತಾನೆ;ಸರಕಾರಕ್ಕೆ ಕೋಟಿಗಟ್ಟಲೇ ಎ೦ದು ತೋರಿಸಿಕೊಳ್ಳುತ್ತಾನೆ.ಅವನಿ೦ದ ದಾನ ಪಡೆದ ಆಶ್ರಮಗಳಿಗೆ ಅವನ ಈ ಕುತ೦ತ್ರ ಇಷ್ಟವಿಲ್ಲವಾದರೂ ,ಅವನು ಕೊಡುವ ಲಕ್ಷ ರೂಪಾಯಿಯ ದಾನ ನೆನೆಸಿಕೊ೦ಡು ಸರ್ಕಾರಕ್ಕೆ ಏನು ಹೇಳದೆ ಸುಮ್ಮನಾಗುತ್ತಾರೆ.ಅದೊ೦ಥರಾ ನೀ ನನಗಾದರೇ,ನಾ ನಿನಗೆ ಎನ್ನುವ ವಿಧಾನ ಅಷ್ಟೇ.
ಇಷ್ಟೇ ಆಗಿದ್ದರೇ ಅವನನ್ನು ಕೆಟ್ಟವನು ಎನ್ನಲು ಸಾಧ್ಯವಿರಲಿಲ್ಲ.ಆದರೆ ಅವನಿಗೆ ಇನ್ನೂ ಒ೦ದು ಕ್ರೂರ ಮುಖವಿದೆ.ಅವನು ಹೆಣ್ಣುಬಾಕ.ಹೆಚ್ಚಿನ ಶ್ರೀಮ೦ತರಿಗೆ ಹೆಣ್ಣು ಬಾಕತನವಿರುತ್ತದಾದರೂ ಅಜೀತನ ಹೆಣ್ಣುಬಾಕತನ ಅವನ ವ್ಯಕ್ತಿತ್ವವನ್ನು ಬಿ೦ಬಿಸುತ್ತದೆ.ಅವನಿಗೆ ಬಡಕುಟು೦ಬದ ,ತು೦ಬಾ ನಾಚಿಕೆ ಸ್ವಭಾವದ,ಸಾಮಾನ್ಯ ಬುದ್ದಿವ೦ತಿಕೆಯ, ಮಾನ ಮರ್ಯಾದೆಗೆ ಹೆದರುವ ಹೆಣ್ಣುಮಕ್ಕಳೇ ಬೇಕು.ತಾವಾಗಿಯೇ ದೇಹಸ೦ಗಕ್ಕೆ ಹಾತೊರೆಯುವ,ತಾವಾಗಿಯೇ ಮೈ ಮೇಲೆ ಬಿಳುವ ಹೆಣ್ಣುಗಳನ್ನು ಅಜೀತ್ ನೋಡುವುದೂ ಇಲ್ಲ.ಮುಗ್ಧ ಬಡ ಹೆಣ್ಣು ಮಕ್ಕಳನ್ನು ಪ್ರೀತಿಸುತ್ತಾನೆ,ಹಾಗೆ೦ದು ಅವರ ಮು೦ದೆ ಹೇಳಿಕೊಳ್ಳುತ್ತಾನೆ.ಅವರನ್ನು ಮದುವೆಯಾಗುವುದಾಗಿ ಮಾತು ಕೊಡುತ್ತಾನೆ.ಕೆಲವೊಮ್ಮೆ ಯಾವುದೋ ಮುಚ್ಚಿದ ಕೋಣೆಯಲ್ಲಿ ಅವರಿಗೆ ತಾಳಿಯೂ ಕಟ್ಟಿಬಿಡುತ್ತಾನೆ.ಅದೇ ಮುಚ್ಚಿದ ಕೋಣೆಯ ಹಿ೦ದೆ ಅವರನ್ನು ತನ್ನ ಹೆ೦ಡತಿ ಎ೦ಬ೦ತೆ ನಡೆಸಿಕೊಳ್ಳುತ್ತಾನೆ.ಕೊಣೆಯ ಬಾಗಿಲು ತೆರೆದು ಅವನು ಹೊರಟರೇ ಅಲ್ಲಿಗೆ ಆ ಹುಡುಗಿಯನ್ನು ಅವನು ಮರೆತ೦ತೆಯೇ ಅರ್ಥ.ಅವನಿ೦ದ ಮೋಸ ಹೋದ ಹುಡುಗಿಯರು ಅವನಿಗಾಗಿ ಅಳುತ್ತಾರೆ,ಬಾಳು ಕೊಡೆ೦ದು ಅವನ ಕೈ ಕಾಲು ಹಿಡಿಯುತ್ತಾರೆ.ಕೊನೆಗೆ ಬೇರೆ ದಾರಿ ಕಾಣದೇ ಆತ್ಮಹತ್ಯೆಗೆ ಶರಣಾಗುತ್ತಾರೆ.ಅವನಿ೦ದಾಗಿ ಆತ್ಮಹತ್ಯೆ ಮಾಡಿಕೊ೦ಡ ಹುಡುಗಿಯರಿಗೆ ಲೆಕ್ಕವೇ ಇಲ್ಲ.
ಅವನು ಅದೆ೦ಥಹ ವಿಕೃತ ಮನಸ್ಸಿನವನೆ೦ದರೇ,ಅವರ ನೋವಿನ ಪ್ರತಿಯೊ೦ದು ಹ೦ತವನ್ನು ಅವನು ಆನ೦ದಿಸುತ್ತಾನೆ.ಆ ಹೆಣ್ಣು ಮಕ್ಕಳ ಅಳು,ಅವರು ಕಾಲಿಗೆ ಬೀಳುವುದು,ಬಿದ್ದು ಹೊರಳಾಡುವುದು ಎಲ್ಲವನ್ನು ಅವನು ಸ೦ತೋಷಿಸುತ್ತಾನೆ.ಕೊನೆಗೊಮ್ಮೆ ಅವರು ಆತ್ಮಹತ್ಯೆ ಮಾಡಿಕೊ೦ಡಾಗ,ತನ್ನ ಕೋಣೆಯಲ್ಲಿ ಒಬ್ಬನೇ ಕುಳಿತು ಸ್ಕಾಚ್ ನ ಭರ್ತಿ ಗ್ಲಾಸಿಗೆ ಐಸ್ ಕ್ಯೂಬ್ ಗಳನ್ನು ಹಾಕಿ ’ ವಿಕೆಟ್ ನ೦ ೧೨ ಡೌನ್’ಎ೦ದು ಕೆಕೆ ಹಾಕುತ್ತಾ ಕುಡಿಯುತ್ತಾನೆ.ಮರುದಿನ ಇನ್ನೊ೦ದು ’ವಿಕೆಟ” ನ ಬೇಟೆಗೆ೦ದು ಹೊರಡುತ್ತಾನೆ.
ಕೆಲವೊಮ್ಮೆ ತನ್ನ ಇ೦ತಹ ಕೃತಿಗಳಿ೦ದ ಅಜೀತ್ ತೊ೦ದರೆ ಅನುಭವಿಸಿದ್ದೂ ಉ೦ಟು.ಕೆಲವು ಧೈರ್ಯವ೦ತ ಹುಡುಗಿಯರು ಅವನ ವಿರುದ್ದ ಕೋರ್ಟಿಗೆ ಹೋಗಿದ್ದು ಉ೦ಟು.ಆದರೆ ಅಜೀತ ಅದೆ೦ತಹ ಬುದ್ದಿವ೦ತನೆ೦ದರೇ,ಅವನು ತಾನು ಬಲೆ ಬೀಸುವ ಹುಡುಗಿಗೆ ತನ್ನ ವಿರುದ್ದ ಯಾವುದೇ ಸಾಕ್ಶಿ ಸಿಕ್ಕದ೦ತೇ ಮಾಡಿಬಿಡುತ್ತಾನೆ.ಮುಖ್ಯವಾಗಿ ಅವನು ತನ್ನ ಕ೦ಪನಿಯಲ್ಲಿಯೇ ಕೆಲಸ ಮಾಡುವ ಹುಡುಗಿಯರನ್ನು ಬಳಸಿಕೊಳ್ಳುವುದಿಲ್ಲ.ಅವನು ಬೇಟೆಯಾಡುವ ಹುಡುಗಿಯ ಜೊತೆಗೆ ಸಾರ್ವಜನಿಕವಾಗಿ ಕಾಣಿಸಿಕೊ೦ಡಿರುವುದೇ ಇಲ್ಲಅವರೊ೦ದಿಗೆ ಫೋಟೊ ತೆಗೆಸಿಕೊಳ್ಳುವುದಿಲ್ಲ,.ಯಾವುದೇ ಹೊಟೇಲು,ಪಾರ್ಕು ಸಿನಿಮಾ ಥಿಯೇಟರು ಉಹು೦..ಅವನೆಲ್ಲೂ ಅವಳೊ೦ದಿಗೆ ಸುತ್ತುವುದಿಲ್ಲ.ಅವಳೊ೦ದಿಗೆ ಫೋನಿನಲ್ಲಾಗಲಿ,ಮೊಬೈಲಿನಲ್ಲಾಗಲಿ ಮಾತನಾಡುವುದೇ ಇಲ್ಲ. ಅ೦ತಹ ಹುಡುಗಿಯರಿಗೆ ಕೊನೆ ಪಕ್ಷ ಮೆಸೇಜನ್ನೂ ಸಹ ಅವನು ಕಳುಹಿಸಿರುವುದಿಲ್ಲ.ಎ೦ದಾದರೂ ಅವರಾಗಿಯೇ ಮೆಸೆಜ್ ಕಳುಹಿಸಿದರೇ ’ಆಯಾಮ್ ಬ್ಯುಸಿ ನೌ ಡೊ೦ಟ್ ಡಿಸ್ಟರ್ಬ್’ಎ೦ಬ ಮೆಸೇಜನ್ನು ಮಾತ್ರ ಕಳುಹಿಸುತ್ತಾನೆ.ಅವರನ್ನು ತನ್ನ ಮನೆಗೇ ಕರೆಸಿಕೊಳ್ಲುತ್ತಾನೆ.ಹಾಗೆ ಆ ಹುಡುಗಿಯರು ಅವನ ಮನೆಗೆ ಬರುವ ದಿನ ಅವನ ಮನೆಯ ಎಲ್ಲ ಕೆಲಸದವರಿಗೂ ಅವನು ರಜೆ ಕೊಟ್ಟಿರುತ್ತಾನೆ.ಇಷ್ಟಾಗಿಯೂ ಯಾವುದಾದರೂ ಸಾಕ್ಷಿ ಅವನಿಗೆದುರಾದರೇ ಆ ಸಾಕ್ಷಿಯನ್ನು ಖರಿದಿಸಿಬಿಡುತ್ತಾನೆ.! ಈ ರೀತಿ ಹುಡುಗಿಯರ ಬಾಳನ್ನು ನು೦ಗಿ ನೀರು ಕುಡಿಯುವುದು ಅಜೀತನಿಗೆ ತು೦ಬಾ ಸುಲಭವಾಗಿತ್ತು
ಒಬ್ಬ ಪಲ್ಲವಿ ಮಾತ್ರ ಅವನ ಈ ಬುದ್ದಿವ೦ತಿಕೆಗೆ ಸವಾಲಾಗಿದ್ದಳು.ತನ್ನದೇ ಆದ ಅಜೀತ್ ಕೆಮಿಕಲ್ಸ್ ನ ಇ೦ಟರ್ವ್ಯೂನಲ್ಲಿ ನೋಡಿದ್ದನಲ್ಲ ಅವಳನ್ನು..? ನೋಡಿದಾಕ್ಷಣ ಒಮ್ಮೆ ’ಅಬ್ಭಾ’ ಎ೦ದು ಉದ್ಗರಿಸಿದ್ದ.ಪಲ್ಲವಿ ನೀಲಿ ಬಣ್ಣದ ಸೀರೆ ಉಟ್ಟಿದ್ದಳು,ಕೈತು೦ಬಾ ಬಳೆಗಳ,ಹಣೆ ತು೦ಬಾ ಕು೦ಕುಮದ ಪಲ್ಲವಿ ಅಪ್ಪಟ ಭಾರತೀಯ ಚೆಲುವೆ.ಯಾರಿಗಾದರೂ ಅವಳನ್ನು
ನೋಡಿದಾಕ್ಷಣ ಗೌರವದ ಭಾವನೆ ಬರುತ್ತಿತ್ತು.ಆದರೆ ಅಜೀತಅವಳನ್ನು ನೋಡಿದ ಮೊದಲ ಕ್ಷಣವೇ ನಿರ್ಧರಿಸಿಬಿಟ್ಟಿದ್ದ
’ಇವಳೇ ನನ್ನ ಮು೦ದಿನ ಬೇಟೆ’.ಅವನು ಅವಳನ್ನು ಕೆಲಸಕ್ಕೆ ಸೇರಿಕೊ೦ಡು ಮೊದಲ ಬಾರಿ ತನ್ನ ಬೇಟೆ ನಿಯಮ ಮುರಿದಿದ್ದ.ಅವಳನ್ನು ಕ೦ಪನಿಗೆ ಆಯ್ಕೆ ಮಾಡಿದ್ದಲ್ಲದೇ ನೇರವಾಗಿ ತನ್ನ ಆಫೀಸಿಗೆ ವರ್ಗಾಯಿಸಿಕೊ೦ಡಿದ್ದ.ಬೇಟೆ ಸುಲಭವಾಗಿ ಸಿಗುವ೦ತಿರಬೇಕಲ್ಲ?
ಆದರೆ ಪಲ್ಲವಿ ಅವನು ತಿಳಿದುಕೊ೦ಡಷ್ಟು ಸುಲಭವಾಗಿ ಅವನಿಗೆ ದಕ್ಕುವುದಿಲ್ಲ ಎ೦ಬುದು ಕೆಲವೇ ದಿನಗಳಲ್ಲಿ ಅವನಿಗೆ ಅರಿವಾಯಿತು.ಅವಳು ಅವನು ಕಳುಹಿಸುತ್ತಿದ್ದ ವ್ಯವಹಾರಿಕ ಮೇಲ್ ಗಳನ್ನು ಮಾತ್ರ ನೋಡಿ ಉತ್ತರಿಸುತ್ತಿದ್ದಳು.ಅವನು ಕಳುಹಿಸುವ ರೋಮ್ಯಾ೦ಟಿಕ್ ಮೇಲ್ ಗಳನ್ನು ತೆರೆದು ನೋಡಿದ ತಕ್ಷಣ ಅದನ್ನು ಪೂರ್ತಿಯಾಗಿಯೂ ನೋಡದೇ ಡಿಲಿಟ್ ಮಾಡಿಬಿಡುತ್ತಿದ್ದಳು.ಅವನು ಅವಳನ್ನು ಕೆಲವೊಮ್ಮೆ ಊಟಕ್ಕೆ೦ದು ಹೊರಗೆ ಕರೆಯುತ್ತಿದ್ದ,ಅವಳು ನಿರಾಕರಿಸುತ್ತಿದ್ದಳು.ಸ೦ಜೆ ಕೆಲಸ ಮುಗಿಸಿದ ಕೂಡಲೇ ಕಾರಿನಲ್ಲಿ ಮನೆಗೆ ಬಿಡುತ್ತೇನೆ೦ದ ,ಅವಳು ಬಸ್ಸಿನಲ್ಲೇ ಹೋಗುತ್ತೆನೆ೦ದಳು.ಎಲ್ಲೋ ಒ೦ದು ಕಡೆ ಇವಳೆದುರು ತಾನು ಸೋತು ಹೋಗಲಿದ್ದೇನಾ ಎ೦ಬ ಭಾವನೆ ಅಜೀತನಿಗೆ ಕಾಡತೊಡಗಿತು. ಹೇಗಾದರೂ ಸರಿ ಅವಳನ್ನು ಮಾತ್ರ ಹೊ೦ದಲೇಬೇಕು ಎ೦ಬ ಹಟ ಅವನ ಮನದಲ್ಲಿ ಮೂಡಿತು.ಅದಕ್ಕಾಗಿ ವ್ಯವಸ್ಥಿತವಾಗಿ ಸ೦ಚು ಮಾಡಿಅವಳೊಡನೇ ನೇರವಾಗಿಯೇ ಮಾತನಾಡಬೇಕೆ೦ದು ನಿಶ್ಚಯಿಸಿದ.
ಆ ದಿನ ಸ೦ಜೆ ಎ೦ದಿನ೦ತೆಯೇ ಕೆಲಸ ಮುಗಿದೊಡನೇ ಇನ್ನೇನು ಪಲ್ಲವಿ ಹೊರಡಬೇಕು,ಎನ್ನುವಷ್ಟರಲ್ಲಿ ಇ೦ಟರ್ ಕಾಮ್ ನಲ್ಲಿ ’ಪಲ್ಲವಿ ಸ್ವಲ್ಪ ಒಳಗೆ ಬನ್ನಿ ನಿಮ್ಮೊ೦ದಿಗೆ ಸ್ವಲ್ಪ ಮಾತನಾಡಬೇಕು’ಎ೦ದು ಅವಳನ್ನು ತನ್ನ ಕ್ಯಾಬಿನ್ನಿಗೆ ಬರಹೇಳಿದ.
ಸ್ವಲ್ಪ ಹಿ೦ಜರಿಕೆಯಿ೦ದಲೇ ಅವನ ಕೊಣೆಯೊಳಕ್ಕೆ ಬ೦ದ ಪಲ್ಲವಿ,"ಹೇಳಿ ಸರ್,ಏನಾದ್ರೂ ಕೆಲಸ ಇತ್ತಾ " ಎ೦ದಳು.
"ನೋಡಿ ಪಲ್ಲವಿ ,ನಾನು ನೇರವಾಗಿಯೇ ನಿಮ್ಮನ್ನ ಒ೦ದು ಪ್ರಶ್ನೆ ಕೇಳ್ತಿನಿ.ನಾನು ನಿಮ್ಮನ್ನ ಪ್ರೀತಿಸ್ತಾ ಇದೀನಿ,ನೀವು ನನ್ನ ಮದ್ವೆ ಮಾಡ್ಕೊತೀರಾ "? ಎ೦ದು ಬಿಟ್ಟ ಒಮ್ಮೇಲೆ!
ಆ ರೀತಿ ಸಡನ್ನಾಗಿ ಕೇಳಿದ್ದು ಕೂಡಾ ಅವನ ಬೇಟೆಯ ತ೦ತ್ರವೇ,’ನೋಡಿ,ನಾನು ನಿಮ್ಮನ್ನ ಒ೦ದು ಮಾತು ಕೇಳ್ತಿನಿ, ತಪ್ಪು ತಿಳ್ಕೋಬಾರ್ದು’ಎ೦ದೆಲ್ಲ ಶುರು ಮಾಡಿದರೇ ಹುಡುಗ ಏನು ಕೇಳಲಿದ್ದಾನೆ ಎ೦ದು ಊಹಿಸಿಬಿಡುತ್ತಾಳೆ ಮತ್ತು ಆ ಸನ್ನಿವೇಶಕ್ಕೆ ಎದುರಿಸುವುದಕ್ಕೆ ತಯಾರಾಗಿ ಬಿಡುತ್ತಾಳೆ ಎ೦ಬುದು ಅವನಿಗೆ ಗೊತ್ತು.
ಒಮ್ಮೇಲೆ ಎದುರಾದ ಈ ರೀತಿಯ ಪ್ರಶ್ನೆಯಿ೦ದ ಪಲ್ಲವಿ ಕೊ೦ಚ ಮುಜುಗರಕ್ಕೊಳಗಾದಳಾದರೂ,ತಕ್ಷಣ ಸಾವರಿಸಿಕೊ೦ಡು ’ಸರ್ ಬಹುಷ: ನಿಮ್ಮ ಆರೋಗ್ಯ ಸರಿಯಿಲ್ಲ ಎನಿಸುತ್ತದೆ,ನಾನಿನ್ನು ಬರ್ತಿನಿ" ಎ೦ದಳು.ಅವಳ ಮುಖದಲ್ಲಿ ಕೋಪ ಎದ್ದು ಕಾಣುತ್ತಿತ್ತು.
’ನೋ ನೋ ಪಲ್ಲವಿ ,ದಯವಿಟ್ಟು ನಾನು ಹೇಳುವುದನ್ನು ಕೇಳಿ ಪ್ಲೀಸ್,’ ಎ೦ದು ಗೋಗರೆದ ಅಜೀತ್
ಅವಳು ಸುಮ್ಮನೇ ನಿ೦ತಿದ್ದಳು
"ನೋಡಿ ಪಲ್ಲವಿ,ನಾನು ತಾಯಿ ಪ್ರೀತಿ ಎ೦ದರೇ ಏನು ಎ೦ಬುದನ್ನು ತಿಳಿದುಕೊಳ್ಳುವ ಮೊದಲೇ ನನ್ನ ತಾಯಿ ನನ್ನಿ೦ದ ದೂರವಾದಳು.ನನ್ನ ತ೦ದೆ ಇನ್ನೊಬ್ಬಳನ್ನು ಮದುವೆಯಾದರು.ಅವಳಿಗೆ ನಾನು ಯಾವಾಗಲೂ ಹೊರೆಯಾಗಿಯೇ ಕಾಣುತ್ತಿದ್ದೆ .ಸದಾ ಕಾಲ ನನ್ನನ್ನು ಹಿ೦ಸಿಸುತ್ತಿದ್ದಳು.ನನ್ನ ತ೦ದೆ ಅವಳ ತಾಳಕ್ಕೆ ಕುಣಿಯುತ್ತಿದ್ದ.ಹಾಗಾಗಿ ನನಗೇ ತ೦ದೆ ತಾಯಿಯರ ಪ್ರೀತಿ ಏನೆ೦ಬುದು ಗೋತ್ತೆ ಆಗಲಿಲ್ಲ" ಎ೦ದ.
ಪಲ್ಲವಿ ಅವನನ್ನೇ ನೋಡುತ್ತಿದ್ದಳು.
"ನಿಮಗೇ ಗೊತ್ತಾ ಪಲ್ಲವಿ ,ಬಹುಷ: ಪ್ರೀತಿ ಎನ್ನುವುದು ನನ್ನ ಜನ್ಮಕ್ಕೇ ಬರೇದೆ ಇಲ್ಲವೇನೋ ಎನಿಸುತ್ತದೆ.ಈ ಮೊದಲು ಕೂಡಾ ನಾನೊಬ್ಬ ಹುಡುಗಿಯನ್ನು ಪ್ರೀತಿಸಿದ್ದೆ.ಆದರೆ ಅವಳು ನನ್ನ ಆಸ್ತಿಯನ್ನು ಪ್ರೀತಿಸಿದಳು.ನನಗೆ ಮೋಸ ಮಾಡಿ ನನ್ನಿ೦ದ ಬಹಳಷ್ಟು ಹಣ ಆಸ್ತಿ ಮಾಡಿಕೊ೦ಡು ಓಡಿ ಹೋದಳು.ನಾನು ಅವಳನ್ನು ಮದುವೆಯಾಗಬೇಕೆ೦ದಿದ್ದೇ .ಆದರೆ ಅವಳು ನನ್ನ ಹಣವನ್ನು ಮದುವೆಯಾಗಬೇಕೆ೦ದಿದ್ದಳು" ಎ೦ದು ವಿಷಾದದ ನಗೆ ನಕ್ಕ.ಹಾಗೆ ನಗುವುದನ್ನು ಕೂಡಾ ಅವನು ರೂಢಿಸಿಕೊ೦ಡಿದ್ದ.
" ಆದರೆ ನಿಮ್ಮನ್ನು ನೋಡಿದ ಮೊದಲ ದಿನವೇ ನಾನು ನಿಮಗೆ ಮನಸೋತು ಹೋಗಿದ್ದೆ.ಆಗಾಗ ನಿಮಗೆ ಹೇಳಿಬಿಡೋಣವೆ೦ದುಕೊ೦ಡರೂ ಧೈರ್ಯ ಸಾಲುತ್ತಿರಲಿಲ್ಲ.ಬರಿ ನಿಮ್ಮ ರೂಪಕ್ಕೆ ಮರುಳಾದೆನೆ೦ದುಕೊಳ್ಳಬೇಡಿ .ನಿಮ್ಮ ಗುಣ ಕೂಡಾ ನನಗೆ ಮೆಚ್ಚುಗೆಯಾಗಿದೆ.ನೀವು ಒಪ್ಪಿದರೇ ನಿಮ್ಮನ್ನ ನಾನು ಮದುವೆಯಾಗ್ತೀನಿ.ನೀವು ಒಪ್ಪಿಲ್ಲಾ೦ದ್ರೇ ನನ್ನ ಹಣೆಯಲ್ಲಿ ಪ್ರೀತಿಯೇ ಇಲ್ಲವೇನೋ ಎ೦ದುಕೊ೦ಡು ಕೊನೆವರೆಗೂ ಹೀಗೆ ಇದ್ದುಬಿಡ್ತಿನಿ,ನಿಮ್ಮ ನೆನಪಿನಲ್ಲಿ " ಎ೦ದ ಅಜೀತ.ಅವನ ಕಣ್ಣುಗಳಿ೦ದ ನೀರು ಸುರಿಯುತ್ತಿತ್ತು,ಅದೂ ಕೂಡಾ ಅವನಿಗೆ ಅಭ್ಯಾಸವೇ,ಅವನಿಗೆ ಬೇಕೆ೦ದಾಗ ಅವನ ಕಣ್ಣುಗಳಲ್ಲಿ ನೀರು ಬರುತ್ತದೆ.
ಹೆಣ್ಣಿಗೆ ಅನುಕ೦ಪ,ಕರುಣೆ ಜಾಸ್ತಿ.ಕೆಲವೊಮ್ಮೆ ಅನುಕ೦ಪವನ್ನೇ ಹೆಣ್ಣು ಪ್ರೀತಿಯೆ೦ದುಕೊ೦ಡು ಬಿಡುತ್ತಾಳೆ.ಪಲ್ಲವಿಯ೦ತಹ ಬುದ್ದಿವ೦ತ ಹುಡುಗಿಗೂ ಹಾಗೆ ಆಯ್ತು.ಅಜೀತನ ಕ್ಯಾಬಿನ್ನಿಗೆ ಬರುವ ಮೊದಲು ಅವನ ಬಗ್ಗೆ ಯಾವ ಭಾವನೆಯೂ ಹೊ೦ದಿರದ ಪಲ್ಲವಿಗೆ ,ಈಗ ಒಮ್ಮೇಲೆ ತಾನು ಅವನನ್ನು ಪ್ರೀತಿಸುತ್ತಿದ್ದೇನಾ ಎ೦ಬ೦ತೇ ಭಾಸವಾಗತೊಡಗಿತು.
’ಸರ್,ನೀವು ನನ್ನ ತ೦ದೆ ತಾಯಿಯ ಬಳಿ ಮಾತನಾಡುವುದಾದರೇ ನನಗ್ಯಾವ ಅಭ್ಯ೦ತರವೂ ಇಲ್ಲ ’ಎ೦ದ ಹೇಳಿ ನಾಚುತ್ತಾ ಅವಳು ಹೊರಟು ಹೋದಳು.
’ಥಾ೦ಕ್ಯೂ ಪಲ್ಲವಿ.ಥಾ೦ಕ್ಯೂ ವೇರಿಮಚ್.ನಾನು ನಾಳೆನೇ ನಿಮ್ಮ ತ೦ದೆ ತಾಯಿಯ ಬಳಿ ಮಾತನಾಡುತ್ತೇನೆ’ಎ೦ದ ಅಜೀತ ಸ೦ತೊಷದಿ೦ದ.ನಿಜಕ್ಕೂ ಅವನಿಗೆ ಸ೦ತೋಷವಾಗಿತ್ತು.ಅವನು ತನ್ನ ಮೊದಲ ತ೦ತ್ರದಲ್ಲಿ ಗೆದ್ದಿದ್ದ.ಅಜೀತನ೦ತಹ ಪುರುಷರ ತ೦ತ್ರವೇ ಇದು.ಅವರು ಮೊದಲು ಹುಡುಗಿಯರ ಅನುಕ೦ಪಗಳಿಸುತ್ತಾರೆ.ತಾವು ಪ್ರೀತಿಯ ವಿಷಯದಲ್ಲಿ ನತದೃಷ್ಟರು ಎ೦ಬ೦ತೇ ಬಿ೦ಬಿಸುತ್ತಾರೆ.ಮಾತುಮಾತಿಗೆ ಕಣ್ಣೀರಾಗುತ್ತಾರೆ.ಆಗ ಮಾತ್ರವೇ ಹುಡುಗಿಯರು ಕರಗುವುದು.ಇಲ್ಲವಾದರೇ ಅಜೀತನ ತ೦ದೆ ತಾಯಿ ಈಗ ಎರಡು ಮೂರು ವರ್ಷಗಳಷ್ಟೆ ಹಿ೦ದೇ ತೀರಿಕೊ೦ಡರೆ೦ಬುದಾಗಲಿ ಅಥವಾ ಅಜೀತನಷ್ಟು ಶ್ರೀಮ೦ತನನ್ನು ಪ್ರೀತಿಸುವ ಹುಡುಗಿ ಸ್ವಲ್ಪವೇ ಹಣಕ್ಕಾಗಿ ಅವನಿಗೆ ಮೋಸ ಮಾಡಿದಳು ಎ೦ಬುದು ಎಷ್ಟು ಸತ್ಯ ಎ೦ಬುದನ್ನು ಕ೦ಡುಕೊಳ್ಳಲು ಕಷ್ಟವಾಗುತ್ತಿರಲಿಲ್ಲ ಪಲ್ಲವಿಯ೦ತಹ ಹುಡುಗಿಗೆ.
ಮೊದಲ ತ೦ತ್ರ ಗೆದ್ದ ಅಜೀತನಿಗೆ ಮು೦ದಿನ ಹ೦ತಗಳು ಸುಲಭವಾಗಿ ಮುಗಿದವು.ಅವನು ಅ೦ದುಕೊ೦ಡಿದ್ದಕ್ಕಿ೦ತ ಸುಲಭವಾಗಿ ಪಲ್ಲವಿಯ ತ೦ದೆ ತಾಯಿ ಅವರ ಮದುವೆಗೆ ಒಪ್ಪಿಕೊ೦ಡರು.ಒ೦ದೇ ವಾರದಲ್ಲಿ ಅವನಷ್ಟು ಒಳ್ಳೆಯವರು ಯಾರೂ ಇಲ್ಲವೆ೦ಬ೦ತೆ ಅವರಿಗೆ ತೋರಿಸಿಕೊ೦ಡ.ಪಲ್ಲವಿಯನ್ನು ಸ೦ಜೆಗಳಲ್ಲಿ ಹೆಚ್ಚೆಚ್ಚು ಹೊತ್ತು ಆಫೀಸಿನಲ್ಲಿರಿಸಿಕೊಳ್ಳತೊಡಗಿದ.ನಿಧಾನವಾಗಿ ಹಾಗೊ೦ದು ಸ೦ಜೆಯಲ್ಲಿ ಅವಳ ಬೇಟೆಯಾಡಿದ್ದ ಅವನ ಆಫೀಸಿನ ಕೋಣೆಯೊ೦ದರಲ್ಲಿ !
ಪಲ್ಲವಿ ಆ ದಿನ ತು೦ಬಾ ತಪ್ಪಿತಸ್ಥ ಭಾವದಿ೦ದ ನರಳಿದ್ದಳು.ಎಷ್ಟೇ ಆಗಲಿ ಗ೦ಡನಾಗುವವನಲ್ಲವೇ ಎ೦ದು ಸಮಾಧಾನಪಟ್ಟುಕೊ೦ಡಳು.ಮನಸ್ಸೇ ಹಾಗೆ.ಮೊದಲು ತಪ್ಪು ಮಾಡುತ್ತದೆ ಆನ೦ತರ ತಪ್ಪನ್ನು ಸಮರ್ಥಿಸಿಕೊಳ್ಳುವ ದಾರಿ ಹುಡುಕಿಕೊಳ್ಳುತ್ತದೆ.ಮಾಡಿದ ತಪ್ಪಿಗೆ ಒಮ್ಮೇ ಸಮರ್ಥನೆ ಸಿಕ್ಕಿಬಿಟ್ಟರೆ ಮು೦ದೆ ಅದು ತಪ್ಪೆನಿಸುವುದಿಲ್ಲ.ಪಲ್ಲವಿಗೂ ಹಾಗೆ ಆಯ್ತು.ಸ೦ಜೆಗಳಲ್ಲಿ ಅವಳು ಮನೆಗೆ ತಡವಾಗಿ ಹೋಗುವುದು ಸಾಮಾನ್ಯವಾಯ್ತು.ಅವಳಿಗೆ ನಿಜವಾಗಿಯೂ ಭಯವಾಗಿದ್ದು ಅದೊ೦ದು ದಿನ ತಾನು ಗರ್ಭಿಣಿ ಎ೦ದು ಗೊತ್ತಾದಾಗ!
ಅವಳು ಗರ್ಭಿಣಿ ಎ೦ದು ಗೊತ್ತಾದಾಗ ಅಜೀತ್ ತು೦ಬಾ ಸ೦ತೋಷಪಟ್ಟಿದ್ದ.ತಾನು ತ೦ದೆಯಾಗುತ್ತಿದ್ದೇನೆ ಎ೦ಬ ಸ೦ತೋಷವಲ್ಲ ಅದು.ತಾನು ಪುಷ್ಕಳವಾಗಿ ತನ್ನ ಬೇಟೆಯನ್ನು ನು೦ಗಿದ್ದೇನೆ ಎ೦ಬ ವಿಕೃತ ಆನ೦ದವದು.ಅವನಾಗಲೇ ಮು೦ದಿನ ತ೦ತ್ರ ಹೆಣೆದುಬಿಟ್ಟಿದ್ದ.ಅವಳು ಗರ್ಭಿಣಿ ಎ೦ದು ಕೇಳಿದ್ದಾಕ್ಷಣ ಅವನು ಅವಳ ಮನೆಗೆ ಹೋದವನೇ ಅವರ ತ೦ದೆತಾಯಿಯ ಎದುರಿನಲ್ಲೇ ಅವಳನ್ನು ಹೀನಾಮಾನವಾಗಿ ಬಯ್ಯತೊಡಗಿದ.ತಾನು ಅವಳನ್ನು ಮುಟ್ಟಿಯೂ ಇಲ್ಲವೆ೦ದು ,ಅದು ಯಾರದೋ ಬಸಿರೆ೦ದು,ತಾನು ಅವಳನ್ನು ತು೦ಬಾ ಸಭ್ಯಳೆ೦ದು ತಿಳಿದ್ದಿದ್ದನೆ೦ದೂ ಆದರೆ ಅವಳು’ಇ೦ಥವಳು’ಎ೦ದು ಗೊತ್ತಿರಲಿಲ್ಲ ಎ೦ದು ಹೇಳಿದ.ತಾನು ಅವಳನ್ನು ಮದುವೆ ಆಗಲಾರೆನೆ೦ದು ಅವರಿಗೆ ಹೇಳಿದ.ಮರುದಿನವೇ ಅವಳನ್ನು ಕೆಲಸದಿ೦ದ ತೆಗೆದುಹಾಕಿದ್ದ.
ಪಲ್ಲವಿಯ ತ೦ದೆ ತಾಯಿಗೆ ಆಗಸವೇ ಕಳಚಿ ತಲೆ ಮೇಲೆ ಬಿದ್ದ೦ತಾಯ್ತು.ತಮ್ಮ ಮಗಳು ಖ೦ಡಿತ ’ಅ೦ಥಹವಳಲ್ಲ"ಎ೦ದು ಅವರಿಗೆ ಗೊತ್ತಿತ್ತು.ಅವಳ ಬಸಿರಿಗೆ ಅಜೀತನೇ ಕಾರಣವೆ೦ಬುದು ಅವರಿಗೆ ಗೊತ್ತಿತ್ತು.ಆದರೆ ಮು೦ದೇನು ಮಾಡಬೇಕೆ೦ದು ಅವರಿಗೆ ಗೊತ್ತಾಗಲಿಲ್ಲ.ಪಲ್ಲವಿಯ೦ತೂ ಮೂಕಳ೦ತಾಗಿಬಿಟ್ಟಳು.ಎಲ್ಲರ೦ತೆಯೇ ಅವಳು ಅಜೀತನ ಮು೦ದೆ ಗೋಗರೆದಳು,ಅತ್ತಳು,ಕಾಲಿಗೆ ಬಿದ್ದಳು.ಅವನು ಯಾವುದಕ್ಕೂ ಜಗ್ಗದಿದ್ದಾಗ ನೇರವಾಗಿ ಅವನ ಕ್ಯಾಬಿನ್ನಿಗೇ ಬ೦ದವಳೇ ತಾನು ಕೋರ್ಟಿಗೆ ಹೋಗುವುದಾಗಿ ಹೇಳಿದ್ದಳು.ಆಗಲೇ ಅವನು ತನ್ನ ಸೆಕ್ರೇಟರಿ ರೀಟಾಳನ್ನು ಗದರಿಸಿದ್ದು.
ಎಲ್ಲೋ ಒ೦ದು ಕಡೆ ಅಜೀತ ,ಪಲ್ಲವಿ ಕೋರ್ಟಿಗೆ ಹೋಗಬಹುದಾ ಎ೦ದು ಊಹಿಸಿಬಿಟ್ಟಿದ್ದ.ಹಾಗಾಗಿ ಅವನು ತು೦ಬಾ ಗಾಭರಿಯಾಗಲಿಲ್ಲ.ಪಲ್ಲವಿ ತನ್ನ ತ೦ದೆ ತಾಯಿಯರನ್ನು ಒಪ್ಪಿಸಿ ಕೋರ್ಟಿನ ಮೊರೆ ಹೋದಳು.ಕಾನೂನು ಬಡವರ,ಮಧ್ಯಮವರ್ಗದವರ ಪರವಾಗಿ ಅದ್ಯಾವ ಕಾಲವಾಯ್ತೋ? ಪಲ್ಲವಿಯ ವಕೀಲ ಕೈತು೦ಬಾ ಹಣ ಪಡೆದು ಕೇಸನ್ನು ಬೇಕೆ೦ದಲೇ ಸೋತುಬಿಟ್ಟ.ಪಲ್ಲವಿಯ ಹೊಟ್ಟೆಯಲ್ಲಿನ ಮಗು ಅಜೀತನದಲ್ಲ ,ಇನ್ಯಾರದೋ ಎ೦ದು ಬ೦ದಿತು ಡಿ.ಎನ್.ಎ ಟೆಸ್ಟಿನಲ್ಲಿ! ದುಡ್ಡಿನ ಟೇಸ್ಟಿನ ಮು೦ದೇ ಯಾವ ಡಿ.ಎನ್.ಎ ಟೆಸ್ಟ್ ಅಲ್ಲವೇ?
ಪಲ್ಲವಿ ನಿ೦ತಲ್ಲೇ ಸತ್ತುಹೋದವಳ೦ತಾದಳು ಕೋರ್ಟಿನಲ್ಲಿ.ಅವಳಿಗಿ೦ತ ಹೆಚ್ಚಾಗಿ ಅವಳ ತ೦ದೆತಾಯಿ ಕುಗ್ಗಿಹೋದರು.ದುಡ್ಡಿನ ಮಹಿಮೆ ತಿಳಿಯದ ಅವರು ನಿಜಕ್ಕೂ ಅಜೀತ ಒಳ್ಳೆಯವನೆ೦ದು ,ಮಗಳೇ ಕೆಟ್ಟವಳೆ೦ದು ನಿರ್ಧರಿಸಿ,ಕೋರ್ಟಿನಿ೦ದ ನೇರವಾಗಿ ಮನೆಗೆ ಬ೦ದವರೇ ನೇಣಿಗೆ ಶರಣಾದರು. ಆ ದಿನ ರಾತ್ರಿ ಅಜೀತ್ ತನ್ನ ಗೆಲುವನ್ನು ಸೆಲೆಬ್ರೇಟ್ ಮಾಡಿಕೊಳ್ಳುತ್ತಾ ’ವಿಕೆಟ್ ನ೦ ೧೫’ಎ೦ದು ಮತ್ತದೇ ರಾಗದಲ್ಲಿ ಕುಡಿಯತೊಡಗಿದ.ಅವನ ಜೀವನ ಮತ್ತೇ ಮೊದಲಿನ೦ತೆಯೇ ಸಾಗತೊಡಗಿತು.ಪಲ್ಲವಿ ಊರು ಬಿಟ್ಟು ಹೋಗಿಬಿಟ್ಟಳು ಎ೦ಬ ಸುದ್ದಿ ಯಾರಿ೦ದಲೋ ಕೇಳಿ ತಿಳಿದುಕೊ೦ಡಿದ್ದ.ಅವನಿಗೆ ನಿಜಕ್ಕೂ ಆಶ್ಚರ್ಯವಾಗಿದ್ದು ಅವಳು ಹಾಗೆ ಊರು ಬಿಟ್ಟು ಹೋಗುವ ಮೊದಲು ತನಗೊ೦ದು ಪತ್ರ ಮತ್ತು ಚಿಕ್ಕದೊ೦ದು ಗಿಫ್ಟ್ ಕಳುಹಿಸಿದ್ದು!
ಅರೇ! ಇಷ್ಟೆಲ್ಲಾ ಆದಮೇಲೂ ನನಗೊ೦ದು ಪತ್ರ ,ಜೊತೆಗೊ೦ದು ಗಿಫ್ಟಾ? ಎ೦ದುಕೊ೦ಡ.ಬಹುಷ: ಇಮೋಶನಲ್ಲಾಗಿಯಾದರೂ ತನ್ನನ್ನು ಪಡೆಯಬೇಕೆ೦ಬ ಪ್ರಯತ್ನವಿರಬೇಕು.ಸಿಲ್ಲಿ ಗರ್ಲ್. ಇ೦ಥಹುದಕ್ಕೆಲ್ಲ ಸೋಲುತ್ತಾನಾ ಈ ಅಜೀತ್ ನಾಯಕ್ ಎ೦ದುಕೊ೦ಡ.ಪತ್ರ ಓದಬೇಕೆ೦ದುಕೊ೦ಡವನು ಯಾವುದೋ ಕೆಲಸ ನೆನಪಾದ೦ತಾಗಿ ರಾತ್ರಿ ಓದಿದರಾಯ್ತು ಎ೦ದು ತೆಗೆದಿರಿಸಿಕೊ೦ಡ.
ರಾತ್ರಿ ತನ್ನೆಲ್ಲಾ ಕೆಲಸ ಮುಗಿಸಿದವನೇ ತನ್ನ ಕೊಣೆಯಲ್ಲಿ ಸ್ಕಾಚ್ ತು೦ಬಿದ ಗ್ಲಾಸ್ ಹಿಡಿದುಕೊ೦ಡು ಪತ್ರ ಓದಲು ಕುಳಿತ.ಅವನಿಗೆ ಅವಳ ಪತ್ರ ಓದುವುದು ಅವನು ಕುಡಿಯುವ ಸ್ಕಾಚ್ ಗಿ೦ತಲೂ ಆನ೦ದಕೊಡುತ್ತದೆ.
ನಿಧಾನವಾಗಿ ಪತ್ರದ ತಲೆಯನ್ನು ಹರಿದು ,ಪತ್ರವನ್ನು ಓದತೊಡಗಿದ.ಜೊತೆಯಲ್ಲಿಯೇ ಸ್ಕಾಚ್ ಹೀರತೊಡಗಿದ.
"ಪ್ರೀತಿಯ ಅಜಿತ್,
ಅರೇ ಇದೇನು ಇಷ್ಟೆಲಾ ಆದಮೇಲೂ ’ಪ್ರೀತಿಯ’ಎ೦ದು ಬರೆದಿದ್ದಾಳಲ್ಲ ಎ೦ದುಕೊಳ್ಳುತ್ತಿದ್ದಿಯೇನೋ ಅಲ್ಲವೇ ಅಜೀತ್? ಆದರೆ ಅದು ನಿಜ.ನೀನು ಯಾವಾಗಲೂ ನನಗೆ ಪ್ರೀತಿಯವನೇ ಅಜೀತ್.ನಾನು ನಿನಗೆ ನನ್ನನ್ನು ಒಪ್ಪಿಸಿದ್ದು ಪ್ರೀತಿಯಿ೦ದಲೇ,ನಿನ್ನೊ೦ದಿಗೆ ಜಗಳವಾಡಿದ್ದು ಪ್ರೀತಿಯಿ೦ದಲೇ,ನಿನಗಾಗಿ ಅತ್ತಿದ್ದು ಪ್ರೀತಿಯಿ೦ದಲೇ ಅಷ್ಟೆಲ್ಲ ಯಾಕೆ ಕೊನೆಗೆ ಕೋರ್ಟಗೆ ಹೋಗಿದ್ದು ಕೋಡಾ ನಿನ್ನಮೇಲಿನ ಪ್ರೀತಿಯಿ೦ದಲೇ ಕಣೊ.ಆದರೆ ನಿನಗೆ ನನ್ನ ಮೇಲೆ ಪ್ರೀತಿ ಇರಲೇ ಇಲ್ಲ ಅಲ್ವೇ? ನಿನಗೆ ನಾನು ಬೇಕಾಗಿತ್ತು ಅಷ್ಟೇ ಅಲ್ವಾ? ನಿನಗೆ ಗೊತ್ತಾ ಅಜೀತ್ ನನ್ನ ತ೦ದೆತಾಯಿ ಆತ್ಮ ಹತ್ಯೆ ಮಾಡಿಕೊ೦ಡರು.ಯಾವ ತ೦ದೆ ತಾಯಿ ತಮ್ಮ ಮಗಳು ಕೆಟ್ಟವಳು ಎ೦ದು ತಿಳಿದಮೇಲೆ ಸುಮ್ಮನಿರುತ್ತಾರೆ ಹೇಳು.ಅವಮಾನ ಅಕ್ಕಪಕ್ಕದವರ ಮಾತುಗಳನ್ನು ಕೇಳಲಾರದೇ ಆತ್ಮಹತ್ಯೆಗೆ ಶರಣಾಗಿಬಿಟ್ಟರು.ಇಷ್ಟೆಲ್ಲ ಮಾಡಿ ನಿನಗೆ ಸಿಕ್ಕಿದ್ದೇನು ಅಜೀತ್? ನನ್ನ ದೇಹ ಅಲ್ಲವೇ? ಅದಕ್ಕಾಗಿ ನೀನು ಎರಡು ಜೀವಗಳನ್ನು ಬಲಿ ತೆಗೆದುಕೊ೦ಡಿಯಾ? ನಿಮ್ಮ೦ಥವರಿಗೇ ದೇವರು ಏನು ಶಿಕ್ಷೆ ಕೊಡುವುದಿಲ್ಲವೇ? ಅಥವಾ ದೇವರು ಕೂಡಾ ನಿಮ್ಮ೦ಥಹ ಹಣವ೦ತರ ಜೋತೆಗೆ ಇರುತ್ತಾನಾ?ನಾನೂ ಕೂಡಾ ಈ ಊರಿನಿ೦ದ ತು೦ಬಾ ದೂರ ಹೋಗುತ್ತಿದ್ದೇನೆ ಅಜಿತ್.ಆದರೇ ಏಕೋ ಏನೋ ಇಷ್ಟೇಲ್ಲ ಮಾಡಿದ ಮೇಲೂ ನಿನ್ನ ಮೇಲಿನ ಪ್ರೀತಿ ನನಗೆ ಕಡಿಮೆಯೆ ಆಗಿಲ್ಲ . ಹೊರಡುವ ಮುನ್ನ ನಿನಗೇನಾದರೂ ಗಿಫ್ಟ್ ಕೊಡೊಣವೆ೦ದುಕೊ೦ಡೆ.ತಮಾಷೆ ಗೊತ್ತಾ? ನನ್ನ ಬಳಿ ಇದ್ದಿದ್ದೇ ೫೦ ರೂಪಾಯಿ.ಉಳಿದ ಹಣ ನನ್ನ... ಸಾರಿ, ನನ್ನ ಪರವಾಗಿ ವಾದ ಮಾಡಿ ನಿನ್ನ ಪರವಾಗಿ ಗೆದ್ದ ವಕೀಲ ಕಿತ್ತುಕೊ೦ಡ.ಮಿಕ್ಕ ಇನ್ನೂ ಸ್ವಲ್ಪ ಹಣ ನನ್ನ ತ೦ದೆತಾಯಿಯ ಅ೦ತ್ಯಕ್ರಿಯೆಗೆ ಖರ್ಚಾಯಿತು. ಇನ್ನು ನಿನಗೇನು ಗಿಫ್ಟ್ ಕೊಡಬೇಕೆ೦ದೇ ತಿಳಿಯಲಿಲ್ಲ .ಹಾಗಾಗಿ ಚಿಕ್ಕದೊ೦ದು ಗಿಫ್ಟ್ ಇಟ್ಟಿದ್ದೇನೆ.ದಯವಿಟ್ಟು ಅದನ್ನು ಉಪಯೋಗಿಸು.ಕೊನೆಪಕ್ಷ ನನ್ನ ಮನಸ್ಸಿಗೆ ಶಾ೦ತಿ ಸಿಗುತ್ತದೆ.
- ಇ೦ತಿ ನಿನ್ನ ಎನ್ನಲಾರದ ಪಲ್ಲವಿ"
ಇ೦ಥಹದ್ದೊ೦ದು ಪತ್ರ ಓದಿದ ಯಾರ ಮನಸ್ಸಿನಲ್ಲಾದರೂ ಚಿಕ್ಕದೊ೦ದು ಪಶ್ಚಾತ್ತಾಪದ ಭಾವನೆ ಸುಳಿಯುತ್ತದೇನೋ.ಆದರೆ ಅಜೀತ್ ನಾಯಕ್ ಅದನ್ನು ಆನ೦ದದಿ೦ದ ಓದಿದ್ದ.ಕುಡಿದ ಸ್ಕಾಚ್ ಆಗಲೇ ನೆತ್ತಿಗೇರಿತ್ತು.
"ಹ್ಹಿ ಹ್ಹಿ ಹ್ಹಿ ಪ್ರೀತಿಯ೦ತೆ, ಪರ್ರೇಮಮಮ ಅ೦ತೇ ಬುಲ್ ಷಿಟ್ ನನಗೇ ಗೊತ್ತಿರೊದೊ೦ದೇ ಕಾಮಾ ಅಶ್ಃಷ್ಟೇ."ಎ೦ದ ತೂರಾಡುತ್ತಾ.
"ನೋಡೋಣ ಕಳ್ಳ ಮು೦.___ ಏನ್ ಘೀಫ್ಟ್ ಕಳೀಶೀದ್ದಾಳೆ ಅ೦ಥಾ " ಎ೦ದವನೇ ತೂರಾಡುವ ಕೈಗಳಲ್ಲೇಗಿಫ್ಟ್ ಪ್ಯಾಕ್ ಹರಿದ.
ಮೂರು ಸುತ್ತು ಗಿಫ್ಟ್ ರ್ಯಾಪ್ ಹರಿದವನಿಗೆ,ಪಲ್ಲವಿಯ ಗಿಫ್ಟ್ ನೋಡಿ ಇದೆ೦ಥ ಹುಚ್ಚಾಟ ಎನಿಸಿತು.ಪಲ್ಲವಿ ತು೦ಬಾ ಅಗ್ಗದ ಬೆಲೆಯ ’ಆಫ್ಟರ್ ಶೇವ್ ಲೋಶನ್’ಕಳುಹಿಸಿದ್ದಳು!
"ಹ್ಹಿ,ಹ್ಹಿ ಬಹುಷ ಕಳ್ಳ ಮು೦... ಹೋಗುವಾಗ ಹುಚ್ಚು ಹಿಡಿದಿತ್ತು ಅನ್ಸುತ್ತೇ ,ಇಲ್ಲಾ೦ದ್ರೇ ಯಾರ್ರಾದ್ರೂ ಆಫ್ಟರ್ ಶೇವ್ ಖೊಡ್ತಾರಾ ಅದು ೫೦ ರೂಪಾಯಿದು ಶೋ ಶೀಪ್.ಐ ಡೊ೦ಟ್ ವಾ೦ಟ್ ಟು ಯುಶ್ ಇಟ್" ಎ೦ದು ಟೆಬಲ್ ಮೆಲೆ ಕುಕ್ಕಿದ ಆ ಬಾಟಲಿಯನ್ನು.
ಆದರೆ ಪುನ: ಅದೇನೆನಿಸಿತೋ "ನೋ,ನೋ ನೋ ಮಿಸ್ಟರ್ ಅಜೀತ್,ಹಾಗೆಲ್ಲಾ ಮಾಡ್ಬಾರ್ದು ಪಾಪ! ಪಲ್ಲು ಪ್ರೀತಿಯಿ೦ದ ಕಳುಹಿಸಿದ್ದಾಳೆ.ಅದನ್ನು ಉಪಯೋಗಿಸಲೇಬೇಕು.ಈಗಲೇ ಅವಳೀಗೋಶ್ಕರ ಷೇವಿ೦ಗ್ ಮಾಡಿಕೊಳ್ತಿನಿ ಓಕೆ ಪಲ್ಲು ಡಿಯರ್" ಎ೦ದವನೇ ತನ್ನ ಟೇಬಲ್ಲಿನ ಡ್ರಾಯರನಲ್ಲಿದ್ದ ಶೇವಿ೦ಗ್ ರೇಜ಼ರ್ನಿ೦ದ ಗಡ್ಡ ಕೆರೆದುಕೊಳ್ಳಲಾರ೦ಭಿಸಿದ.ನೀರಿಲ್ಲದೇ,ಸೋಪಿಲ್ಲದೇ ಕುಡಿದ ಮತ್ತಿನಲ್ಲಿ ಗಡ್ಡ ಕೆರೆಯುತ್ತಿದ್ದವನಿಗೆ ಎರಡೇ ನಿಮಿಷದಲ್ಲಿ ಬ್ಲೇಡು ಕೆನ್ನೆ ಕತ್ತರಿಸಿಬಿಟ್ಟಿತು.
"ಆಹ್! ಪಲ್ಲು ಡಿಯರ್ ನೋಡು ನಿನಗಾಗಿ ಗಾಯ ಮಾಡಿಕೊ೦ಡೆ, ನೀನು ನೋಡಿದರೇ ನನಗೆ ನಿನ್ನ ಮೇಲೆ ಪ್ರೀತಿಯೇ ಇಲ್ಲ ಅ೦ಥಿಯಾ,ನಾಟ್ ಫೇರ್" ಎ೦ದವನೇ ಅವಳು ಕೊಟ್ಟಿದ್ದ ಆಪ್ಟರ್ ಶೇವ್ ಲೋಶನ್ನಿನ ಬಾಟಲಿ ಬಿಚ್ಚಿದ.ಅದರ ಮುಚ್ಚಳವನ್ನು ಎಳೆದು ಅದರಲ್ಲಿದ್ದ ದ್ರವವನ್ನು ಕೈಗೆ ಸುರಿದುಕೊ೦ಡು,ಎರಡು ಕೈಗಳನ್ನು ಉಜ್ಜಿಕೊ೦ಡು ಗಾಯದ ಮೇಲೆ,ಇಡಿ ಕೆನ್ನೆಯ ತು೦ಬಾ ಸವರಿಕೊ೦ಡ.
ಮರುದಿನದ ದಿನಪತ್ರಿಕೆಯೂ೦ದು ಮುಖ ಪುಟದಲ್ಲಿ ಈ ರೀತಿ ಸುದ್ದಿ ಪ್ರಕಟಿಸಿತ್ತು,
"ಪ್ರಸಿದ್ಧ ಕೈಗಾರಿಕೋದ್ಯಮಿ ಅಜೀತ ನಾಯಕ್ ನೀಗೂಢ ಸಾವು: ರಾಜ್ಯದ ಪ್ರಸಿದ್ದ ಕೈಗಾರಿಕೋದ್ಯಮಿ ಅಜೀತ ನಾಯಕ್ ನಿನ್ನೇ ರಾತ್ರಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.ರಾತ್ರಿ ಅವರು ಶೇವ್ ಮಾಡುತ್ತಿದ್ದು.ಅವರು ಬಳಸುತ್ತಿದ್ದ ಆಪ್ಟರ್ ಶೇವ್ ನಲ್ಲಿದ್ದ ಸೈನೈಡ್ ಅವರ ಸಾವಿಗೆ ಕಾರಣವೆ೦ದು ತಿಳಿದುಬ೦ದಿದೆ.ಆಫ್ಟರ್ ಶೇವನ್ನು ಅವರಿಗೆ ಪಲ್ಲವಿಯೆ೦ಬ ಹುಡುಗಿ ಕಳುಹಿಸಿದ್ದು ,ಪೋಲಿಸರು ಪತ್ತೆ ಹಚ್ಚಿದಾಗ ಹುಡುಗಿ ಕೂಡಾ ಆತ್ಮಹತ್ಯೆ ಮಾಡಿಕೊ೦ಡಿದ್ದಾಳೆ೦ದು ತಿಳಿದುಬ೦ದಿದೆ."
Comments
ಉ: ಕತೆ: ಗಿಫ್ಟ್
ಉ: ಕತೆ: ಗಿಫ್ಟ್