ಕನ್ನಡ ಪತ್ರಿಕಾ ಲೋಕ (ಭಾಗ ೧೨೮) - ಸುಗುಣಮಾಲಾ

ಕನ್ನಡ ಪತ್ರಿಕಾ ಲೋಕ (ಭಾಗ ೧೨೮) - ಸುಗುಣಮಾಲಾ

ಉಡುಪಿ ಜಿಲ್ಲೆಯಿಂದ ಪ್ರಕಾಶಿತಗೊಳ್ಳುವ ಧಾರ್ಮಿಕ ಸಾಂಸ್ಕೃತಿಕ ವೈಚಾರಿಕ ಮಾಸಪತ್ರಿಕೆಯೇ 'ಸುಗುಣಮಾಲಾ’. ಡಾ. ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಈ ಪತ್ರಿಕೆಯ ಸಂಸ್ಥಾಪಕರು. ಮಹೀತೋಷ ಆಚಾರ್ಯ ಇವರು ಪತ್ರಿಕೆಯ ಸಂಪಾದಕರಾಗಿಯೂ, ಎಂ ಪ್ರಸನ್ನಾಚಾರ್ಯ ಇವರು ಪ್ರಕಾಶಕರಾಗಿಯೂ, ಎನ್. ಸುರೇಶ್ ಕಾರಂತ್ ಅವರು ಮುದ್ರಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. 

ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಎಪ್ರಿಲ್ ೨೦೨೩ (ಸಂಪುಟ ೩೮, ಸಂಚಿಕೆ ೪) ರ ಸಂಚಿಕೆ. ಈ ಪತ್ರಿಕೆಯಲ್ಲಿ ಸುವಾಣಿ, ಮರ್ಮಮೀಮಾಂಸೆ, ಉಪರಿ ನಿಷಾದಯತಿ ಇತಿ, ಭಗವದ್ ಗೀತೆ, ಗೀತಾ ಸಮೀಕ್ಷಾ, ಮಂತ್ರ ಸಮೀಕ್ಷಾ, ಪಕ್ಷಿ ಸಮೀಕ್ಷಾ, ಪರ್ವ ಸಮೀಕ್ಷಾ ಮೊದಲಾದ ಲೇಖನಗಳಿವೆ. ಸಂಪಾದಕರಾದ ಮಹಿತೋಷ ಆಚಾರ್ಯ ಇವರು ತಮ್ಮ ಸಂಪಾದಕೀಯದಲ್ಲಿ “ಧಾರ್ಮಿಕ ಕೇಂದ್ರಗಳ ದಾಖಲೀಕರಣ ಆಗಬೇಕಿದೆ" ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. 

ಪತ್ರಿಕೆಯು ತುಷಾರ/ಮಯೂರ ಆಕಾರದಲ್ಲಿದ್ದು ೬೦ ಪುಟಗಳನ್ನು ಹೊಂದಿದೆ. ಮುಖ ಪುಟ ವರ್ಣರಂಜಿತವಾಗಿದ್ದು, ಕೆಲವು ಒಳಪುಟಗಳೂ ಬಣ್ಣದಲ್ಲಿವೆ. ಪತ್ರಿಕೆಯ ಮುಖ ಬೆಲೆ ರೂ ೨೦.೦೦. ವಾರ್ಷಿಕ ಚಂದಾ ರೂ ೨೦೦.೦೦, ಮೂರು ವರ್ಷಕ್ಕೆ ೬೦೦.೦೦ ಹಾಗೂ ಹತ್ತು ವರ್ಷಕ್ಕೆ ೨೦೦೦.೦೦ ದರವಿದೆ. ಪತ್ರಿಕೆಯು ಸುಗುಣ ಪ್ರಿಂಟರ್ಸ್, ಉಡುಪಿ ಇಲ್ಲಿ ಮುದ್ರಿತವಾಗುತ್ತಿದೆ. ಪತ್ರಿಕೆಯು ಈಗಲೂ ಕ್ಲಪ್ತಕಾಲಕ್ಕೆ ಮುದ್ರಿತವಾಗಿ ಚಂದಾದಾರರ ಕೈಸೇರುತ್ತಿದೆ ಎನ್ನುವ ಮಾಹಿತಿ ಇದೆ.