ಕನ್ನಡ ಪತ್ರಿಕಾ ಲೋಕ (ಭಾಗ ೧೪೯) - ಸಂಚಯ
ಡಿ. ವಿ. ಪ್ರಹ್ಮಾದ್ ಅವರ "ಸಂಚಯ"
ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಮೀಸಲಾದ ದ್ವೈಮಾಸಿಕ ಪತ್ರಿಕೆ "ಸಂಚಯ". ಡಿ. ವಿ. ಪ್ರಹ್ಮಾದ್ ಅವರು ಇದರ ಸಂಪಾದಕರು, ಪ್ರಕಾಶಕರು ಮತ್ತು ಮುದ್ರಕರು. ಬೆಂಗಳೂರು ಬನಶಂಕರಿಯಿಂದ ಪ್ರಕಾಶನಗೊಳ್ಳುವ "ಸಂಚಯ", ಪುಸ್ತಕ ರೂಪದಲ್ಲಿದೆ. ೧೧೨ ಪುಟಗಳನ್ನು ಹೊಂದಿದೆ.
೧೯೯೧ರಲ್ಲಿ ಆರಂಭವಾದ "ಸಂಚಯ" ಕಾವ್ಯಗಳು, ಕಥೆಗಳು, ಪುಸ್ತಕ ವಿಮರ್ಶೆ, ಪುಸ್ತಕ ಪರಿಚಯ, ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಗಂಭೀರ, ವಿಮರ್ಶಾತ್ಮಕ ಬರೆಹಗಳನ್ನು ಹೊಂದಿತ್ತು.
~ ಶ್ರೀರಾಮ ದಿವಾಣ
- Log in to post comments