ಕನ್ನಡ ಪತ್ರಿಕಾ ಲೋಕ (ಭಾಗ ೨೦೮) - ವನಸುಮ

ಮಂಡ್ಯ ಆರ್. ಎಲ್. ವಾಸುದೇವ ರಾವ್ ಅವರ "ವನಸುಮ"
ಮಂಡ್ಯದಿಂದ ಪ್ರಕಟವಾಗುತ್ತಿದ್ದ ಪರಿಸರ ಮತ್ತು ಅರಣ್ಯಗಳ ಏಳಿಗೆಗಾಗಿ ಮೀಸಲಾದ ಪತ್ರಿಕೆಯಾಗಿತ್ತು "ವನಸುಮ". ಮಂಡ್ಯ ಸುಭಾಷ್ ನಗರದ ಆರ್. ಎಲ್. ವಾಸುದೇವ ರಾವ್ ಅವರು ಸಂಪಾದಕರು ಮತ್ತು ಪ್ರಕಾಶಕರಾಗಿದ್ದ "ವನಸುಮ" ಐವತ್ತಕ್ಕೂ ಅಧಿಕ ವರ್ಷಗಳ ಕಾಲ ಪ್ರಕಟವಾಗಿದೆ.
ಎಂ. ಎಸ್. ಶಿವಪ್ರಕಾಶ್ ಮುದ್ರಕರು ಮತ್ತು ಮಾಲೀಕರಾಗಿದ್ದರು. ಐಡಿಯಲ್ ಆಫ್ ಸೆಟ್ ಪ್ರಿಂಟರ್ಸ್ ನಲ್ಲಿ ಪತ್ರಿಕೆ ಮುದ್ರಣವಾಗುತ್ತಿತ್ತು. ನಾಲ್ಕು ಪುಟಗಳ, ಟ್ಯಾಬ್ಲಾಯ್ಡ್ ಮಾದರಿಯ "ವನಸುಮ" ಕನ್ನಡ ಮತ್ತು ಇಂಗ್ಲೀಷ್ ಪತ್ರಿಕೆಯಾಗಿತ್ತು. ವರ್ಷಕ್ಕೊಂದು ವಿಶೇಷಾಂಕವನ್ನು ಪ್ರಕಟಿಸುತ್ತಿದ್ದರು.
~ ಶ್ರೀರಾಮ ದಿವಾಣ