ಕನ್ನಡ ಪತ್ರಿಕಾ ಲೋಕ (ಭಾಗ ೨೧೧) - ವೇದ ಪ್ರಕಾಶ

ಉಡುಪಿಯ ಪಿ. ಸಂಜೀವ ಕಾಮತ್ ಆರಂಭಿಸಿದ ಮಾಸಪತ್ರಿಕೆ "ವೇದ ಪ್ರಕಾಶ"
ಉಡುಪಿಯ ವೇದಾಭಿಮಾನಿಗಳಾದ ಪಿ. ಸಂಜೀವ ಕಾಮತ್ ಅವರು ಆರಂಭಿಸಿದ ಮಾಸ ಪತ್ರಿಕೆಯಾಗಿದೆ "ವೇದ ಪ್ರಕಾಶ". ಈಗ ಈ ಪತ್ರಿಕೆಯನ್ನು ಬೆಂಗಳೂರಿನ "ಪಿ. ಸಂಜೀವ ಕಾಮತ್ ಫೌಂಡೇಶನ್" ಮುನ್ನಡೆಸುತ್ತಿದೆ. ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವ ವೇದಗಳ ಜ್ಞಾನ ಪ್ರಸಾರಕ್ಕೆ ಮೀಸಲಾದ ವೇದ ಪ್ರಕಾಶ, ಕಳೆದ ಐವತ್ತೈದು ವರ್ಷಗಳಿಂದ ನಿರಂತರವಾಗಿ ಪ್ರಕಟವಾಗುತ್ತಿದೆ.
ಬೆಂಗಳೂರು ಬಸವನಗುಡಿಯ ಪಶ್ಚಿಮ ಆಂಜನೇಯ ಗುಡಿ ಬೀದಿಯಲ್ಲಿ ಪತ್ರಿಕಾಲಯವಿದೆ. ಇಪ್ಪತ್ತೆಂಟು ಪುಟಗಳ ವೇದ ಪ್ರಕಾಶದ ಬಿಡಿ ಸಂಚಿಕೆಯ ಬೆಲೆ 18 ರೂಪಾಯಿಗಳು. ವಾರ್ಷಿಕ ಚಂದಾ 200 ರೂಪಾಯಿಗಳು ಮತ್ತು ಪೋಷಕ ಸದಸ್ಯತ್ವ ಮೊತ್ತ ನಾಲ್ಕು ಸಾವಿರ ರೂಪಾಯಿಗಳು. ಡಾ. ಸುಕುಮಾರ ಶಾಸ್ತ್ರೀ ಪ್ರಧಾನ ಸಂಪಾದಕರು. ಶೇಷಾದ್ರಿ ಎಸ್. ಕೈಪ ಸಂಪಾದಕರು, ಪ್ರಕಾಶಕರು ಮತ್ತು ಮುದ್ರಕರು. ದಯಾನಂದ ಆಡಳಿತ ಸಲಹೆಗಾರರು. ಸುರೇಶ್, ಭವಾನಿ, ಕಮಲ್ ಸಾರಥಿ ಸಂಪಾದಕ ಮಂಡಳಿ ಸದಸ್ಯರು.
~ ಶ್ರೀರಾಮ ದಿವಾಣ