ಕನ್ನಡ ಪತ್ರಿಕಾ ಲೋಕ (ಭಾಗ ೨೧೩) - ಶ್ರೀ ಶಾರದಾ

ಸ್ಥಾನಿಕ ದ್ರಾವಿಡ ಬ್ರಾಹ್ಮಣ ಸಂಘದ ಮಾಸಪತ್ರಿಕೆ "ಶ್ರೀ ಶಾರದಾ"
ಉಡುಪಿ ನಗರದ ಕುಂಜಿಬೆಟ್ಟುನಲ್ಲಿರುವ ಶ್ರೀ ಶಾರದಾ ಮಂಟಪ ಸ್ಥಾನಿಕ ದ್ರಾವಿಡ ಬ್ರಾಹ್ಮಣ ಸಂಘ (ರಿ) ಯುವ ವಿಭಾಗವು ಪ್ರಕಟಿಸುವ ಮಾಸಪತ್ರಿಕೆಯಾಗಿದೆ "ಶ್ರೀ ಶಾರದಾ". 2000ನೇ ಇಸವಿಯಲ್ಲಿ ಆರಂಭವಾದ " ಶ್ರೀ ಶಾರದಾ", ವನ್ನು ಆರಂಭದ ನಾಲ್ಕು ವರ್ಷಗಳ ಕಾಲ ಉಚಿತವಾಗಿ ಅಂಚೆ ಮೂಲಕ ವಿತರಿಸಲಾಗುತ್ತಿತ್ತು. 2004ರ ಜುಲೈ ಸಂಚಿಕೆಯಿಂದ ಸಂಘದ ಸದಸ್ಯರಿಗೆ ಮತ್ತು ಚಂದಾದಾರರಿಗೆ ಮಾತ್ರ ವಿತರಿಸಲಾಗುತ್ತಿದೆ. ಟ್ಯಾಬ್ಲಾಯ್ಡ್ ಮಾದರಿಯ ಆರು ಪುಟಗಳ ಪತ್ರಿಕೆಯ ಪ್ರಕಾಶಕರು ಮತ್ತು ಮಾಲೀಕರು ಎನ್. ಪ್ರವೀಣ್ ಕುಮಾರ್ ರಾವ್. ಕೆ. ವೇಣುಗೋಪಾಲ ರಾವ್ ಸಂಪಾದಕರು. ಅಗ್ರಹಾರ ಅಫ್ ಸೆಟ್ ನಲ್ಲಿ ಮುದ್ರಣವಾಗುತ್ತದೆ.
ಕೆ. ವೇಣುಗೋಪಾಲ ರಾವ್, ವೈ. ಮೋಹನ್ ರಾವ್, ಕೃಷ್ಣಕುಮಾರ ರಾವ್ ಮಟ್ಟು, ಯು. ಅರವಿಂದ ಕುಮಾರ್, ಎಚ್. ನಿರಂಜನ ಭಟ್, ವಸಂತ್ ಕೆ. ರಾವ್, ಪಿ. ಎಂ. ನಾಗರಾಜ ರಾವ್, ಪ್ರವೀಣ್ ಕುಮಾರ್, ಬಿ. ಕೃಷ್ಣಮೂರ್ತಿ ರಾವ್ , ಟಿ. ವಿಶ್ವನಾಥ ಶಾನುಭಾಗ್, ಸುರೇಶ್ ರಾವ್ ಕುತ್ಪಾಡಿ ಹಾಗೂ ಶ್ರೀಮತಿ ಶ್ರೀಮತಿ ವೇಣುಗೋಪಾಲ ರಾವ್ ಸಂಪಾದಕ ಮಂಡಳಿ ಸದಸ್ಯರು. ಡಾ. ಪಿ. ವಿಠ್ಠಲ ರಾವ್ ಮಣಿಪಾಲ, ಎಂ. ಪಾಲಚಂದ್ರ ರಾವ್ ಹಾಗೂ ಯು. ಪ್ರಫುಲ್ಲಚಂದ್ರ ರಾವ್ ಸಲಹಾ ಸಮಿತಿ ಸದಸ್ಯರು. ಸ್ಥಾನಿಕ ಬ್ರಾಹ್ಮಣ ಸಂಘದ ಸುದ್ಧಿಗಳು, ಸಾಧಕರ ಪರಿಚಯ, ವೈವಿಧ್ಯಮಯ ಲೇಖನಗಳೊಂದಿಗೆ ಕಳೆದ 25 ವರ್ಷಗಳಿಂದ "ಶ್ರೀ ಶಾರದಾ" ಪ್ರಕಟವಾಗುತ್ತಾ ಬರುತ್ತಿದೆ.
~ ಶ್ರೀರಾಮ ದಿವಾಣ.