ಕನ್ನಡ ಪತ್ರಿಕಾ ಲೋಕ (೩೦) - ಯಾತ್ರಿಕ

ಕನ್ನಡ ಪತ್ರಿಕಾ ಲೋಕ (೩೦) - ಯಾತ್ರಿಕ

ಕನ್ನಡದ ಏಕಮೇವ ಪ್ರವಾಸೀ ಪಾಕ್ಷಿಕ ಎಚ್. ವಿ. ನಾರಾಯಣ್ ರವರ "ಯಾತ್ರಿಕ"

ಬೆಂಗಳೂರು ರಾಷ್ಟ್ರೀಯ ವಿದ್ಯಾಲಯ ರಸ್ತೆಯ ಪ್ರೇಮ್ ನಿವಾಸದ ಎಚ್. ವಿ. ನಾರಾಯಣ್ ಅವರು ಸ್ಥಾಪಿಸಿ ಆರಂಭಿಸಿದ ಪಾಕ್ಷಿಕ ಪತ್ರಿಕೆ "ಯಾತ್ರಿಕ". ಎಚ್.ವಿ.ನಾರಾಯಣ್ ಅವರ ಬಳಿಕ ಕಮಲ ನಾರಾಯಣ್ ಅವರು ಇದನ್ನು ಮುನ್ನಡೆಸಿದರು. ಎಚ್. ವಿ. ವರದರಾಜನ್ ಅವರು ಪತ್ರಿಕೆಯ ಸಂಪಾದಕರು ಮತ್ತು ಪ್ರಕಾಶಕರಾಗಿದ್ದರು.

೧೯೭೧ರಲ್ಲಿ ಆರಂಭವಾದ "ಯಾತ್ರಿಕ" ಪತ್ರಿಕೆಯನ್ನು ರಾಜಾಜಿನಗರ ನಾಲ್ಕನೇ ಎಂ ಬ್ಲಾಕಿನಲ್ಲಿದ್ದ ಸುಧಾ ಪ್ರಿಂಟರ್ಸ್ ನಲ್ಲಿ ಮುದ್ರಿಸಲಾಗುತ್ತಿತ್ತು. ಇಪ್ಪತ್ತು ಪುಟಗಳ "ಯಾತ್ರಿಕ"ದ ಬಿಡಿ ಸಂಚಿಕೆಗೆ ೧೯೮೦ರ ದಶಕದಲ್ಲಿದ್ದ ಬೆಲೆ ೪೦ ಪೈಸೆ. ವಾರ್ಷಿಕ ಚಂದಾ ಹತ್ತು ರೂಪಾಯಿಗಳಾಗಿತ್ತು.

ರಾಜ್ಯ - ದೇಶ - ವಿದೇಶಗಳ ಕ್ಷೇತ್ರ ಪರಿಚಯ, ಸ್ಥಳ ಪರಿಚಯ, ಹಾಸ್ಯ ಬರಹ, ಕವನ, ವಿಶೇಷ ಲೇಖನ, ಸಾದರ ಸ್ವೀಕಾರ ಸಹಿತ ವೈವಿಧ್ಯಮಯ ಲೇಖನಗಳನ್ನು ಪ್ರಕಟಿಸುವ ಪತ್ರಿಕೆಯಾಗಿತ್ತು. ಬಹುಮುಖ್ಯವಾಗಿ ಕನ್ನಡದ ಏಕಮೇವ ಪ್ರವಾಸೀ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಬರಹಗಾರರ ಪ್ರವಾಸಾನುಭವ ಲೇಖನಗಳನ್ನು "ಯಾತ್ರಿಕ"ದಲ್ಲಿ ಮೊದಲ ಆದ್ಯತೆಯೊಂದಿಗೆ ಪ್ರಕಟಿಸಲಾಗುತ್ತಿತ್ತು.

- ಶ್ರೀರಾಮ ದಿವಾಣ