ಕನ್ನಡ ಭಾಷೆ...
ಕವನ
ಇದು ಪಂಪ ಬೆಳಗಿದ ಕನ್ನಡ
ಕವಿ ಕೋಗಿಲೆ ಹಾಡುವ ಕನ್ನಡ
ದಿವ್ಯ ಸಾಹಿತ್ಯ ಅರಳಿದೆ, ಓದು ಬಾ
ನಿತ್ಯ ಸತ್ಯ ನುಡಿ ನಮ್ಮ ಕನ್ನಡ!!!
ಉಡುಪಿಯ ಕಿಂಡಿ, ಹಳೇಬೀಡಿನಲ್ಲಿ
ಪಾವನ ಹಂಪಿ, ಮಂಜೇಶ್ವರ!
ಅಕ್ಕ-ದಾಸ ವಾಚಿಸಿದ ಕನ್ನಡ...
ಪುಣ್ಯ ಸುಗಂಧ ಬೀರುವ ಕನ್ನಡ...
ದಿವ್ಯ ಸಾಹಿತ್ಯ ಅರಳಿದೆ, ಓದು ಬಾ
ನಿತ್ಯ ಸತ್ಯ ನುಡಿ ನಮ್ಮ ಕನ್ನಡ!!!
ಕಿತ್ತೂರು ರಾಣಿ, ಕಮಲಾದೇವಿ
ಅಬ್ಬಕ್ಕ ಚೌಟ, ಹೈದರ್ ಅಲಿ!
ವೀರ ಶೂರರ ಹೆಮ್ಮೆಯ ಕನ್ನಡ...
ಅಂದ ಚೆಂದಾದ ಸುಂದರ ಕನ್ನಡ...
ದಿವ್ಯ ಸಾಹಿತ್ಯ ಅರಳಿದೆ, ಓದು ಬಾ
ನಿತ್ಯ ಸತ್ಯ ನುಡಿ ನಮ್ಮ ಕನ್ನಡ!!!
ಸರ್ವರ ಮನಃ ಗೆಲ್ಲುವ ಕನ್ನಡ
ಮನ-ಮಂದೀರ ಶೋಭಿಸುವ ಕನ್ನಡ
ದಿವ್ಯ ಸಾಹಿತ್ಯ ಅರಳಿದೆ, ಓದು ಬಾ
ನಿತ್ಯ ಸತ್ಯ ನುಡಿ ನಮ್ಮ ಕನ್ನಡ!!!
-ಶಿಕ್ರಾನ್ ಶರ್ಫುದ್ದೀನ್ ಎಂ. ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
