ಕವಿ ಕತ್ತಲೆಯಲಿ......

ಕವಿ ಕತ್ತಲೆಯಲಿ......

ಕವನ

 ಕತ್ತಲಲ್ಲಿ  ನಾ ಕುಳಿತು ,
       ಆ ಇರುಳನ್ನೇ  ಕುರಿತು ,
ಬರೆದೆನೊಂದು ಕವಿತೆ ಇಲ್ಲೀ.......


 


ಬೆಳದಿಂಗಳಾ  ಬೆಳಕು ಭೂಮಿಯನ್ನು ತಬ್ಬಿರಲು,
ಹಗಲಂತೆ ಕಾಣುತಿದೆ ಅಂದಿನಾ  ಇರುಳು ,



ಮತ್ತೆ ರವಿ ಬಂದನೆಂದು ಕತ್ತಲೋಡಿಬರಲು,
ಅದರ ಭಯವ ಕಂಡು ಕವಿಯ ಮನವು ಕರಗಲು,



ಮನೆಯ ಜಾಗ ಬಿಟ್ಟು ಕೊಟ್ಟ ಕತ್ತಲವಿತು ಕೂರಲು,
ಅದರ ಜೊತೆಯೇ ಕಾಲ ಕಳೆದ ಮತ್ತೆ ರವಿಯು ಬರುವವರೆಗೂ.....