ಕಹಿಯಾದರೇನು?

ಕಹಿಯಾದರೇನು?

ಕವನ

ಕಹಿಯಾದರೇನು ಗುಣವಿಲ್ಲವೇನು

ತಿನಲಾರೆ ಎಂದೂ ನೀ ನುಡಿವೆಯೇನು

ಈ ಶಂಕೆ ದೂರಾ ತಳ್ಳಿರಿ||ಪ||

 

ಬೆಂಡೆ ರುಚಿಯಾದರೇನು

ತೊಂಡೆ ಬಳಿ ಇದ್ದರೇನು

ಹಾಗಲದ ಗುಣವ ಮರಿಬಾರದಲ್ಲ ದೂರದಿರು ಸಾರವನ್ನು

ರುಚಿಯು ಕಹಿಯಾದರೇನು

ಖಾದ್ಯ ಹಿತವಾಗದೇನು

ಸೇರಿಸಲು ಉಪ್ಪು, ಹುಳಿ,ಮೆಣಸು,ಬೆಲ್ಲ

ಆ ತಿನಿಸ ಮರೆವೆಯೇನು?

ಔಷಧ ಗುಣವಿದೆ, ಒಮ್ಮೆ ತಿನಬಾರದೇನು||೧||

 

ಬೀಜ ಎಸೆದಲ್ಲೆ ತಾನು

ಮೊಳೆತು ಫಲ ನೀಡದೇನು

ಹೆಚ್ಚೇನು ಕಷ್ಟ ಪಡುವಷ್ಟು ಇಲ್ಲ ನೀಡುವುದು ಕಾಯಿಯನ್ನು

ಇತರ ತರಕಾರಿಯಂತೇ

ಬಳಸೆ ನಿನಗೇಕೆ ಚಿಂತೆ

ಮಧುಮೇಹವನ್ನು ತಡೆಹಿಡಿಯದೇನು

ಆ ಹಿತವ ತೊರೆವೆಯೇನು

ಅನುದಿನ ಬಳಸಲು ಮತ್ತೆ ಬಿಡಲಾರೆ ನೀನು||೨||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್

(ಚಿತ್ರ: ವಾಟ್ಸಾಪ್ ಕೃಪೆ) 

ಚಿತ್ರ್