ಕಾಪಾಡು ಗುರುರಾಯ
ಕವನ
ಕಲಿಯುಗದ ಕಾಮಧೇನು
ಕಲ್ಪವೃಕ್ಷ ಸ್ವಾಮಿಯೇ/
ಅನವರತ ರಕ್ಷಿಸುತಲಿ
ಕರುಣೆಯ ತೋರಿಸೆಯಾ//
ಪವಿತ್ರ ಬೃಂದಾವನದಲಿ
ಆರಾಧನೆಯ ನಡೆಸುತಲಿ/
ಭಕುತರೆಲ್ಲ ಒಂದಾಗುತಲಿ
ನಾಮ ಸಂಕೀರ್ತನೆ ಪಾಡುತಲಿ//
ಸ್ಮರಣೆ ಮಾಡ್ವೆವು ತಂದೆ
ಚಿಂತೆ ಕಳೆಯೊ ಇಂದೆ/
ನಂಬಿ ಪಾದಮೂಲವಿಂದೆ
ಗುರುವೆ ಕಾಪಾಡು ಮುಂದೆ//
ಸಂಸಾರ ಮೋಹ ತ್ಯಾಗಿ
ಮಧುರ ಮನದ ಯೋಗಿ/
ಭವ ಬಂಧನ ಕಳಚುತಲಿ
ಇಷ್ಟಾರ್ಥವು ಕೈಗೂಡುತಲಿ//
ತುಂಗಾ ತೀರದಿ ನೆಲೆಸಿ
ಶರಣು ಬಂದವರ ಉದ್ಧರಿಸಿ/
ಪವಾಡ ಹಿರಿಮೆಯಲಿ ಮೆರೆದು
ಎಲ್ಲರನು ಸಲಹಿ ಕರೆದು//
ರಾಘವೇಂದ್ರ ಗುರುರಾಯ
ನಿಂತ ನೆಲವೆ ಆಲಯ/
ಶ್ರದ್ಧೆಯಲಿ ಗೈದು ಸೇವೆ
ಪೊಡಮಡುವೆ ಸದಾ ಕಾಯೊ//
-ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
