ಕಾಲ ಯಾತ್ರಿಕ
ಕವನ
ಕಾಲ ಯಾತ್ರಿಕ
ಎಷ್ಟೋ ವರ್ಷಗಳ ಕಳೆದು ಬಂದಿಹೆನು,
ಘಟಿಸಿದನೇಕ ನಾಗರೀಕತೆಗಳ ಕಣ್ಣಿಂದ ಕಂಡಿಹೆನು.
ಹಸಿವು ದ್ವೇಷಗಳ ಹಲವು ವೇಷ,
ಪ್ರೀತಿ ಸ್ನೇಹಗಳ ಕೊಳೆತ ಕೋಶ,
ಹೊತ್ತು ತಿರುಗುತ ಹೊತ್ತು ಕಳೆಯುವ,
ಸಾವಿರ ಮಂದಿಯ ಹಿಂದಿಕ್ಕಿ ಬಂದಿಹೆನು.
ಹೊರಟಾಗ ಸಮಧಾನವಿತ್ತು, ನಿರೀಕ್ಷೆಯಿತ್ತು:
"ಹುಡುಕುವೆನು, ಬದುಕುವೆನು ಹೊಸತು ನೆಲೆಯೊಂದನು."
ಒಂದಾಯಿತು, ಎರಡಾಯಿತು, ಅದೆಷ್ಟಾಯಿತೋ,
ಎಣಿಕೆಯೇ ಮರೆತುಹೋಯಿತು.
ಎಷ್ಟು ಹುಡುಕಿದರೂ ಅಷ್ಟೇ,
ನಾನಂದುಕೊಂಡ ನೆಲೆ ಸಿಗಲೇ ಇಲ್ಲ.
ಎಷ್ಟು ಪ್ರಯತ್ನಪಟ್ಟರೂ ಅಷ್ಟೇ,
ಮನುಷ್ಯ ನೀ ಬದಲಾಗಲೇ ಇಲ್ಲ.
-ವಿಶ್ವನಾಥ್ . ಡಿ . ಎ
http://vishwanathda.blogspot.in/
- Log in to post comments