ಕಾ.ವೀ.ಕೃಷ್ಣದಾಸರ ಹಾಯ್ಕುಗಳು

ಕಾ.ವೀ.ಕೃಷ್ಣದಾಸರ ಹಾಯ್ಕುಗಳು

ಕವನ

ಪ್ರಶಂಸೆ ಜಾಜಿ

ಪ್ರತಿಷ್ಟೆ ಬಾಜಿ ; ಅಯ್ಯೋ

ಚಿನ್ನದ ಸೂಜಿ!

*

ಹೆತ್ತರೆ ತಾಯಿ

ಹೊತ್ತರೆ ಮಗ ; ಭದ್ರ

ಕರುಳ ಬಳ್ಳಿ!

*

ತಾನು ಸಣ್ಣವ

ಎನಲು ; ನಾನು ಕೊನೆ ;

ಬಾಂಧವ್ಯ ತೆನೆ!

*

ನಿನ್ನ ನೆರಳು

ನಿನ್ನಂತಿರದು ; ಭಿನ್ನ

ವಕ್ರೀಭವನ!

*

ಹಸಿರ ತೇರು;

ಉಸಿರ ಬೇರು; ನಿತ್ಯ

ಜೀವ ಚೇತನ!

*

ಎದೆ ಸಾಗರ;

ಮುತ್ತಿನಾಗರ; ಬರೀ

ಕಡಲ್ಕೊರೆತ!

*

ಬಾನು ಜಲದ

ನಡುವೆ ಬಂದ ಭಾನು;

ದೀಪ ಚುಂಬನ!

*

ಬೇಡ ಅಂತರ

ಜಾತಿ ಜೀತ ಬೇಸರ ;

ಮನವೇ ಜೇಡ!

*

ದೀಪವ ಹಚ್ಚಿ 

ಬೆಳಕನು ನೆಚ್ಚಿರಿ ;

ದೈವ ಮೆಚ್ಚಲಿ!

*

ಗುಲಾಮನಾಗಿ

ಗುರುವಿಗೆ; ಪರಮ

ಪ್ರಸಾದವಾಗು!

*

ಭಾವ ಯಾನದಿ

ಎದೆಯ ಉತ್ಖನನ;

ಸಿಕ್ಕಿದ್ದು ಪ್ರೀತಿ!

*

ಗೀಚಿದ ಸಾಲು

ಮಾಡಿತು ಘಾಸಿ; ಮುಂದೆ

ಮಾತು ಸನ್ಯಾಸಿ!

*

ಮಾತು ಹಚ್ಚಿದ 

ಬೆಂಕಿ ; ಕಿಡಿಯ ಗಾತ್ರ

ಸಾಸಿವೆ ಕಾಳು !

-ಕಾ.ವೀ. ಕೃಷ್ಣದಾಸ್

 

ಚಿತ್ರ್