ಕಿರುತೆರೆಯ ಧಾರಾವಾಹಿ-ಸೀರಿಯಲ್ಗಳ ಹೆಸರು-ಶೀರ್ಷಿಕೆಗಳ ಹಿನ್ನೋಟ ಮತ್ತು ಮುನ್ನೋಟ
ಕೊರೋನಾ-ದಂತಹ ಕೋವಿಡ್-೧೯ ರ ಅಪಾಯದ ಕಾಲದಲ್ಲಿ, ಬಹಳ ಮಟ್ಟಿಗೆ ಜನರು, ಅದರಲ್ಲೂ ಮಹಿಳೆಯರು ಮತ್ತು ವೃದ್ದರು ಮನೆಯಲ್ಲಿ ಶಾಂತಿಯುತವಾಗಿರಲು ನಮ್ಮ ಕನ್ನಡ ಕಿರುತೆರೆಯ ಟಿ *ವಿ * ಸೀರಿಯಲ್ ಗಳ ಸಹಾಯ ಶ್ಲಾಘನೀಯ ಎಂಬುದೇ ನನ್ನ ಪ್ರಾಮಾಣಿಕ ಅನಿಸಿಕೆ!
ಅವುಗಳಿಗೆ ಇನ್ನೊಮ್ಮೆ ಧನ್ಯವಾದಗಳನ್ನು ಅರ್ಪಿಸಿ ಮುಂದುವರಿಸುವೆನು**
ಕನ್ನಡ ಕಿರುತೆರೆಯ ಟಿ *ವಿ * ಸೀರಿಯಲ್ ಗಳ ಹೆಸರು/ ಶೀರ್ಷಿಕೆಗಳನ್ನು ಎಲ್ಲಿಂದ ಹುಡುಕಿ ಆರಿಸಿ
ಆಮೇಲೆ ಆಯ್ಕೆ ಮಾಡಿ ಕೊಳ್ಳುವರೋಎಂಬುದೇ ನನಗೆ ಕಗ್ಗಂಟಾಗಿದೆ*
ಅದಕ್ಕಾಗಿಯೇ ನನಗೆ ಸೀರಿಯಲ್ ಗಳನ್ನು ವೀಕ್ಷಿಸುವುದಕ್ಕಿಂತ ಅವುಗಳ ಹೆಸರು/ ಶೀರ್ಷಿಕೆಗಳನ್ನು ವಿಶ್ಲೇಷಿಸುವುದರಲ್ಲಿಯೇ ಎಲ್ಲಿಲ್ಲದ ಕುತೂಹಲ*
ಟಿ *ವಿ * ಸೀರಿಯಲ್ ಗಳ ಹೆಸರು/ ಶೀರ್ಷಿಕೆಗಳ ನಾಮಕರಣ ಅತ್ಯಂತ ಕ್ಲಿಷ್ಠ ಹಾಗೂ ಜಟಿಲವಾದ ಸಮಸ್ಯೆ ಎಂದೇ ಇಪ್ಪತ್ತು ವರ್ಷಗಳ ಹಿಂದೆ ನನಗೆ ಅನ್ನಿಸಿದ್ದು ಇನ್ನೂ ಅದು ಚಿದಂಬರ ರಹಸ್ಯ
ವಾಗಿಯೇ ಉಳಿದಿದೆ!
ಹಿಂದಿನಿಂದ ಇಂದಿನವರೆಗೆ, ಒಮ್ಮೆ ಕಿರುತೆರೆಯ ಟಿ *ವಿ * ಸೀರಿಯಲ್ ಗಳ ಹೆಸರುಗಳನ್ನು
ಒಮ್ಮೆ ಮೆಲಕು ಹಾಕುತ್ತ ಹೋದರೆ***
'ಮುಕ್ತ ಮುಕ್ತ' ಸೀರಿಯಲ್ ನ್ನು ಆಗಿನ ಕಾಲದಲ್ಲಿಯೇ ನೋಡಿದ ಕಾರಣ ನನಗೆ ಕನ್ನಡ
ಸೀರಿಯಲ್ ಗಳನ್ನು ನೋಡದೆಯೇ ಈ ಜೀವನದಿಂದ ಮುಕ್ತಿಹೊಂದಲು ಸಾಧ್ಯವಿಲ್ಲ ಅನ್ನಿಸಿತು।
ಈಗ ನೋಡಿದರೆ ಮನೆಯಲ್ಲಿ ಯಾರ ಮದುವೆ ನಡೆಯಲಿ ಬಿಡಲಿ, 'ಮೂರುಗಂಟು' ಹಾಕಿ 'ಮಾಂಗಲ್ಯ' ಕಟ್ಟಿ 'ಅಗ್ನಿಸಾಕ್ಷಿ' ಯಾಗಿ, 'ಜೊತೆ ಜೊತೆಯಲಿ', 'ಪುಟ್ಟಗೌರಿ ಮದುವೆ' ಮತ್ತು 'ಮಂಗಳಗೌರಿ ಮದುವೆ' , 'ಪುನರ್ವಿವಾಹ' ಗಳು ಕೂಡಾ ನಡೆದು ಹೋದವು* ಈ ಎಲ್ಲಾ ಹೆಸರುಗಳು ಮದುವೆ ಅಥವಾ ತಾಳಿ ಎಂಬ ಶಬ್ಧದ ಅರ್ಥದ ಆಕರ್ಷಣೆ ಹೊಂದಿವೆ*
ಸೀತೆ, ಗೋಕುಲದಲ್ಲಿ ಸೀತೆ, ಸೀತಾ ವಲ್ಲಭ - ಇಂತಹ ಧಾರಾವಾಹಿ ಶೀರ್ಷಿಕೆಗಳಲ್ಲಿ "ಸೀತೆ"
ಎಂಬ ಪದವನ್ನು ನಮ್ಮವರು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ**
ಒಂದು ಸೀರಿಯಲ್ ಹೆಸರು ಲಕ್ಷ್ಮಿ ಬಾರಮ್ಮ ಎಂದಿದ್ದರೆ ಇನ್ನೊಂದಕ್ಕೆ
ದರಿದ್ರ ಲಕ್ಷ್ಮಿಯರು, ಮತ್ತೊಂದಕ್ಕೆ ಮುದ್ದುಲಕ್ಷ್ಮಿ ಎಂದು ಇಟ್ಟರು* ಒಟ್ಟು ಈ ಹೆಸರುಗಳು ಲಕ್ಷ್ಮಿ ಯಾ ಸುತ್ತ ತಿರುಗಿದವು*
'ಮೊದಲ ಮನೆ', 'ಮನೆಯೊಂದು ಮೂರು ಬಾಗಿಲು' ಮುಂತಾದ ಹೆಸರುಗಳು
ಮನೆಯನ್ನೇ ನೆಚ್ಚಿ ಕೊಂಡಿವೆ*
'ರಾಧಾ-ರಮಣ', 'ನನ್ನರಸಿ ರಾಧೆ' ಎಂಬ ಹೆಸರುಗಳು ರಾಧಾ ಕೃಷ್ಣ
ಶಬ್ದಗಳನ್ನು ಅವಲಂಬಿಸದೆ 'ಸೀತಾ ವಲ್ಲಭ' , 'ಸೀತೆ' ಇಂತಹ
ಹೆಸರುಗಳು ಸೀತಾ ರಾಮ ಶಬ್ದಕ್ಕೆ ಪ್ರಾಮುಖ್ಯ ಕೊಟ್ಟಿವೆಯೇನೋ ಎನ್ನಿಸಿದೆ*
ಮಾಡರ್ನ್ ಅಜ್ಜಿಯೊಬ್ಬರು ಆಂಡ್ರಾಯ್ಡ್-ಶಾಸ್ತ್ರ ಪ್ರಕಾರ 'ರಾಧಾ-ಕಲ್ಯಾಣ' ವನ್ನೂ ನೋಡಿದವರು 'ರಾಧಾ-ರಮಣ' ನನ್ನೂ ನೋಡಲೇಬೇಕು ಎಂಬ ಎಂದು ಹೇಳುತ್ತಿದ್ದರು*
'ರಾಧಾ-ರಮಣ' ಎಂದರೆ ಶ್ರೀಕೃಷ್ಣ ಎಂದರ್ಥ ವಾದರೆ 'ಸೀತಾ ವಲ್ಲಭ' ನೆಂದರೆ
ಶ್ರೀರಾಮನೆಂದೇ ಅರ್ಥ* ಆದರೆ ಇಲ್ಲಿ ಅರ್ಥ ಮುಖ್ಯವಲ್ಲ ಭಾವ ಅಂದರೆ ಭಾವನೆ ಮುಖ್ಯ*
ಅಂದರೆ 2021 ರ ನಂತರ ಶ್ರೀ ಲಕ್ಷ್ಮೀ-ರಮಣ ಗೋವಿಂದ - ಎಂಬ ಧಾರಾವಾಹಿಯು ಬರಲೂ ಬಹುದೇನೋ*
*
'ನಮ್ಮನೆ ಯುವರಾಣಿ' ಈಗಾಗಲೆ ಇಟ್ಟ ಹೆಸರಾದ ಕಾರಣ ಮುಂದಿನ
ಸೀರಿಯಲ್ ಹೆಸರುಗಳ ಲಿಸ್ಟ್ ನಲ್ಲಿ 'ಪಕ್ಕದಮನೆ ಮಹಾರಾಣಿ' , 'ನಮ್ಮೂರ ಯುವರಾಣಿ', 'ಪಕ್ಕದಮನೆ ರಾಣಿ' ಎಂದೂ ಇಡಬಹುದು*
ಮಹಾಪರ್ವ, ಮಹಾಮಾಯಿ ಗಳು ಮಹಾ ಶಬ್ಧಕ್ಕೆ ಒತ್ತು ಕೊಟ್ಟಿವೆ*
ಅಂದಿನ ಕಾಲದಲ್ಲಿ 'ಮಾಯಾಮೃಗ' ವನ್ನೇ ನೋಡಿದ ನಾವೆಲ್ಲ ಇಂದು ಕಿರುತೆರೆಯಲ್ಲಿ 'ಸೀತೆ ' ಯನ್ನೇ ನೋಡಬಹುದು * ೨೦೨೧ ರಲ್ಲಿ ಅಥವಾ ಅನಂತರ 'ಮಾರೀಚ' ಅಥವ 'ಮರೀಚಿಕೆ' ಎಂಬ ಹೆಸರಿನ ಸೀರಿಯಲ್ ನಮ್ಮ ಮುಂದೆ ಬರಬಹುದು **
ಅಂದಿನ ೧೯೯೦ರ ದಶಕದ ಕಾಲದಲ್ಲಿ ಧಾರವಾಹಿಯಾದ 'ಗುಡ್ಡದ-ಭೂತ' ವನ್ನೇ ಪ್ರತಿದಿನ ವೀಕ್ಷಿಸಿ
ಹೆದರಿದವರು, 'ಹರಹರ ಮಹಾದೇವ' ಸೀರಿಯಲ್ ನೋಡಿ ಧೈರ್ಯ ತುಂಬಿಕೊಳ್ಳಲೂಬಹುದು
ಯಾವುದನ್ನೇ ನೋಡಿದರೂ 'ಮನಸಾರೆ' ನೋಡಬೇಕು ಎಂದೇ ನನ್ನ ಅಭಿಪ್ರಾಯ*
'ಎಂಧು ಮರೆಯದ ಹಾಡು' ಕೇಳಿದ ನಂತರ ಮುಂದೆ ನಾನೂ 'ಎದೆ ತುಂಬಿ ಹಾಡುವೆನು'
ಎಂಬ ಅಭಿಪ್ರಾಯಕ್ಕೆ ಬಂದರೂ 'ಕಾವ್ಯಾಂಜಲಿ' ತೃಪ್ತಿ ಪಟ್ಟು ನಾನೇ ಹಾಡಲು ಮುಂದಾಗಲಿಲ್ಲ।
ಕನ್ನಡತಿ ಎಮ್ ಹೆಸರು ಉತ್ತಮವಾಗಿದ್ದರಿಂದ ಮುಂದೆ 'ನಮ್ಮ ಕನ್ನಡತಿ',
'ವೀರ ಕನ್ನಡತಿ' endu ಹೆಸಿರಿಡಲೂಬಹುದು*
ಈ ಮೊದಲು ನಾನು ಹೆಸರುಗಳನ್ನು ಹುಡುಕಿ ಆರಿಸುವುದು ತುಂಬಾ ಕಷ್ಟ
ಎಂದು ತಿಳಿದಿದ್ದೆ*
ಆದರೆ ನಾನು 'ಮಿಥುನ-ರಾಶಿ' ಮತ್ತು 'ಅಶ್ವಿನಿ ನಕ್ಷತ್ರ' ಗಳನ್ನು ನೋಡಿದ ನಂತರ
ರಾಶಿಗಳ ಹೆಸರು ಒಟ್ಟು ಹನ್ನೆರಡು ಮತ್ತು ನಕ್ಷತ್ರಗಳ ಹೆಸರು ತುಂಬಾ ಇರುವುದುರಿಂದ
೨೦೨೧ ರ ನಂತರದಲ್ಲಿ ಮುಂದಿನ ಸೀರಿಯಲ್ ಧಾರಾವಾಹಿಗಳಿಗೆ ಹೆಸರಿಡುವುದು ಬಹಳ ಕಷ್ಟವೇನಲ್ಲ ಎನ್ನಿಸಿತು*
ಆಮೇಲಂತೂ 'ಯಶೋದೆ', 'ಗೀತಾ' ,'ಪಾರು','ಸರಸು','ಸೇವಂತಿ','ಇವಳು-ಸುಜಾತಾ','ಕಮಲಿ'
ಎಂಬ ಹೇಸರುಗಳನ್ನು ಕೇಳಿದ ನಂತರ ಇನ್ನು ಮುಂದೆ ಕಷ್ಟಪಟ್ಟು ಹುಡುಕಿ
ಆರಿಸುವ ಕೆಲಸ ಅಷ್ಟು ಕಷ್ಟವಲ್ಲ ಎಂದು ಅನಿಸಿತು*
'ರಥ ಸಪ್ತಮಿ' ಎಂಬ ಹೆಸರಿನ ಡಾ* ಶಿವರಾಜ್ ಕುಮಾರ್ ರವರ ಅಭಿನಯದ ಚಲನ ಚಿತ್ರವಿದ್ದರೂ ಅದೇ ಹೆಸರು ಲಕ್ಕಿ ಎನ್ನಿಸಿ ಧಾರಾವಾಹಿಗೆ ಸಹ 'ರಥ ಸಪ್ತಮಿ' ಎಂದೇ ಹೆಸರಿಟ್ಟರು*
ಕ್ರೇಜಿ ಕರ್ನಲ್
ಫ್ಯಾಮಿಲಿ ಪವರ್
ಗೆಳತಿ
ಮಾರಿ ಕಣಿವೆ ರಹಸ್ಯ
ಪಡುವಾರಹಳ್ಳಿ ಪಡ್ಡೆಗಳು
ಸಂಘರ್ಷ
ನಾಗಿಣಿ