ಕುಶಲಮತಿ
ಕವನ
ವಾನರ ದೇವ ವೀರ ಹನುಮನೆ
ದೃಢಭಕುತಿಗೆ ಹೆಸರಾದವನೆ/
ಕೇಸರಿ ಅಂಜನಾ ಮಾತೆಯ ಪುತ್ರನೆ
ಅದ್ವಿತೀಯ ಮಹಿಮಾತೀತನೆ//
ಪುರುಷೋತ್ತಮನ ಚರಣ ಸೇವಕ
ಶಕ್ತಿ ಸಾಮರ್ಥ್ಯ ಬ್ರಹ್ಮಚರ್ಯದ ಪ್ರತೀಕ/
ಹನ್ನೆರಡು ನಾಮಗಳಿಂದ ಮೆರೆವ ಧೀಮಂತ
ಸಪ್ತ ಚಿರಂಜೀವಿಗಳಲ್ಲಿ ಸ್ಥಾನಪಡೆದಾತ//
ರಾಮಾಯಣದ ಪರಮ ಧೀರ ಮೇಧಾವಿ
ಸಂಜೀವಿನಿಯ ಹೊತ್ತು ತಂದ ಸಾಹಸಿ/
ಇಚ್ಛಾರೂಪಿ ಕುಶಲಮತಿ ಮಹಾಶಕ್ತಿ
ಸುಗ್ರೀವ ಸಖ್ಯಕೆ ಕಾರಣವಾದ ಭಕ್ತಿ//
ಚೈತ್ರಮಾಸದಿ ಉದಯಿಸಿ ಖ್ಯಾತಿ ಪಡೆದವ
ಹನುಮ ಜಯಂತಿಯ ಶುಭದಿನವು/
ಕೆಂಪು ವಸ್ತ್ರ ಧಾರಣೆ ಕುಂಕುಮ ಅರ್ಪಣೆ
ಗುಲಾಬಿ ಹೂವಿನ ಅಲಂಕಾರವು ನಿನಗೆ//
ಶ್ರದ್ಧಾ ಭಕ್ತಿಯಲಿ ಬೇಡುವರು ಭಕುತರು
ಲಾಡು ಬಾಳೆಹಣ್ಣು ಹಲ್ವಾ ನೈವೇದ್ಯ ಮಾಡುವರು/
ಅನ್ನಸಂತರ್ಪಣೆ ಮಾಡಿ ಪೂಜಿಪರು
ದುಷ್ಟಶಕ್ತಿಗಳ ನಾಶ ಗೈಯುತ ರಕ್ಷಿಸು//
(ಹನುಮ ಜಯಂತಿಯ ಶುಭಾಶಯಗಳು)
-ರತ್ನಾ ಕೆ ಭಟ್.ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
