ಕೃಷ್ಣ ಜನ್ಮಾಷ್ಟಮಿಯ ಗಝಲ್
ಕವನ
ನಾದಮಯ ಪ್ರೀತಿಯಲಿ ಮತ್ತೆ ಮತ್ತನ್ನು ಸುರಿದೆಯಾ ಚೆಲುವನೆ
ವೇಣುಗಾನದಿ ಪ್ರಿಯಸಖಿ ರಾಧೆಯ ಮನವನು ಮೀಟಿದೆಯಾ ಚೆಲುವನೆ
ಯಮುನೆಯ ತೀರದಲ್ಲಿ ಸಖಿಯರ ಮೋಡಿ ಮಾಡಿದವನು ನೀನಲ್ಲವೆ
ನಾರಿಯರ ಸೀರೆಯನು ಕದ್ದು ಅವರನು ಕಾಡಿದೆಯಾ ಚೆಲುವನೆ
ಬರಸಿಡಿಲು ಮಳೆಗೆ ಗೋವರ್ಧನ ಗಿರಿಧಾರಿ ಆದವನು ಕೃಷ್ಣನಲ್ಲವೆ
ದುಷ್ಟೆಯಾದ ಪೂತನಿಯ ಮೊಲೆಯ ಹಾಲನು ಹೀರಿದೆಯಾ ಚೆಲುವನೆ
ಕಂಸ ಚಾಣೂರರ ಮರ್ದನ ಮಾಡಿದವನು ಅವನಲ್ಲವೆ
ದೇವಕಿಯನು ಸೆರೆಮನೆಯಿಂದ ರಕ್ಷಿಸಿದೆಯಾ ಚೆಲುವನೆ
ರತ್ನಳ ಮನದ ಮಂದಿರದೊಳಗಿನ ದೇವನೇ ಅವನಾಗಿಹನು
ದ್ರೌಪದಿಯ ಮಾನವನು ಸಭೆಯಲಿ ಕಾಪಾಡಿದೆಯಾ ಚೆಲುವನೆ
-ರತ್ನಾ ಕೆ.ಭಟ್ ತಲಂಜೇರಿ, ಪುತ್ತೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
