ಕೆಚ್ಚೆದೆಯ ಕನ್ನಡಿಗನೇ, ಮನಬಿಚ್ಚಿ ಹಾಡು

ಕೆಚ್ಚೆದೆಯ ಕನ್ನಡಿಗನೇ, ಮನಬಿಚ್ಚಿ ಹಾಡು

ಕವನ

ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ, ಮತ್ತೆ ನೆನಪಿಸಿ ಕೊಂಡ, ನನ್ನ ಮೊದಲ ಬರಹ ಕೆಚ್ಚೆದೆಯ ಕನ್ನಡಿಗನೇ, ಮನಬಿಚ್ಚಿ ಹಾಡು ನಾಡಗಾಥೆಯನು ನೀ, ಕುಣಿದೆದ್ದು ಹಾಡು ! ಕುಣಿದೆದ್ದು ಹಾಡು ! ಸಹ್ಯಾದ್ರಿಯ ಸಿರಿಯನು, ಕೊಂಡಾಡಿ ಹಾಡು ಕಾವೇರಿ ಮಡುವಿನಲಿ, ಮಿಂದೆದ್ದು ಹಾಡು ಬೇಲೂರ ಶಿಲೆಯಲ್ಲಿನ ಕಲೆಯಾಗಿ ಹಾಡು ಹಂಪೆಯ ಭವ್ಯತೆಗೆ ನೆಲೆಯಾಗಿ ಹಾಡು ಕೆಚ್ಚೆದೆಯ ಕನ್ನಡಿಗನೇ, ಮನಬಿಚ್ಚಿ ಹಾಡು ನಾಡಗಾಥೆಯನು ನೀ, ಕುಣಿದೆದ್ದು ಹಾಡು ! ಕುಣಿದೆದ್ದು ಹಾಡು ! ಪಂಪ-ರನ್ನ-ಜನ್ನರ ಸಾಹಿತ್ಯದ ಸೊಗಡವನು, ಕುವೆಂಪು-ಬೇಂದ್ರೆ ಯರ ಕಾವ್ಯದ ಸೊಬಗನು, ಓಬವ್ವ-ಚೆನ್ನಮ್ಮರ ಸಾಹಸದ ಸಂಭ್ರಮವನು, ರಾಯಣ್ಣನಂತಹ ತ್ಯಾಗ-ಬಲಿದಾನವನು ಗರ್ವದಿಂದ ಹಾಡು !! ಕೆಚ್ಚೆದೆಯ ಕನ್ನಡಿಗನೇ, ಮನಬಿಚ್ಚಿ ಹಾಡು ನಾಡಗಾಥೆಯನು ನೀ, ಕುಣಿದೆದ್ದು ಹಾಡು ! ಕುಣಿದೆದ್ದು ಹಾಡು ! ಜೋಗದ ಧಾರೆಗೆ ಶಿರಬಾಗಿ ಹಾಡು ಗೊಮ್ಮಟನ ಶಾಂತಕ್ಕೆ ಶರಣಾಗಿ ಹಾಡು ಶಾರದೆಯ ಅನುಗ್ರಹಕೆ ಮಗುವಾಗಿ ಹಾಡು ಅನ್ನಪೂರ್ಣೆಯ ಪ್ರಸಾದಕ್ಕೆ ಹಸಿವಾಗಿ ಹಾಡು ಕೆಚ್ಚೆದೆಯ ಕನ್ನಡಿಗನೇ, ಮನಬಿಚ್ಚಿ ಹಾಡು ನಾಡಗಾಥೆಯನು ನೀ, ಕುಣಿದೆದ್ದು ಹಾಡು ! ಕುಣಿದೆದ್ದು ಹಾಡು ! ಶ್ರೀಗಂಧದ ಕಂಪಿನಲಿ, ಮಲ್ಲಿಗೆಯ ಅಂದದಲಿ ಅರಳಿ ನಿಂತ ಕನ್ನಡಾಂಬೆಗೆ ನಮಿಸಿ ನೀ ಹಾಡು ! ಕೆಚ್ಚೆದೆಯ ಕನ್ನಡಿಗನೇ, ಮನಬಿಚ್ಚಿ ಹಾಡು ನಾಡಗಾಥೆಯನು ನೀ, ಕುಣಿದೆದ್ದು ಹಾಡು ! ಕುಣಿದೆದ್ದು ಹಾಡು !