ಕೆಲವು ಹನಿಗಳು...
ಜಾಣರ ಸುಳಿ
ಈ ಬಾರಿಯ
ಸೀ ಎಂ ರೇಸ್ನಲ್ಲಿ
ನಾನಿಲ್ಲ
ಮುಂದಿನ ರೇಸ್ನಲ್ಲಿ
ಪಕ್ಕಾ ನಾನಿರುತ್ತೇನೆ-
ಸತೀಷ್ ಜಾರ್ಕಿ ಹೊಳಿ...
ನಾವೆಲ್ಲಾ ಬಸ್ನಲಿ
ಪ್ರಯಾಣಿಸುವಾಗ
ಹಾಕುವೆವಲ್ಲ
ಸೀಟಿಗಾಗಿ ಟವೆಲ್ಲಾ-
ಹಾಗೆಯೇ ಇದು
ಜಾಣರ ಸುಳಿ!
***
ಹಿತವಿಲ್ಲದನ್ನಕ್ಕ...
ಶಾಲಾ ಬಿಸಿಯೂಟಕ್ಕೆ
ಮುದ್ದೆ ಜೋಳದ ರೊಟ್ಟಿ-
ರಾಜ್ಯಸರ್ಕಾರದ
ಪ್ರಸ್ತಾವನೆ-
ಕೇಂದ್ರ ಸರ್ಕಾರದ
ತಿರಸ್ಕಾರ...
ರಾಜ್ಯ-ಕೇಂದ್ರಗಳ
ನಡುವೆ
ಅಂತರಂಗದಲಿ
ಹಿತವಿಲ್ಲದಿರುವಾಗ
ಪ್ರಸ್ತಾವನೆಗಳಿಗೆಲ್ಲಾ
ಬರೀ ಬಹಿಷ್ಕಾರ!
***
ಭಾವ ಮತ್ತು ಶ್ರಮ ಸಂಗಮ
ವಿಜ್ಞಾನಿಗಳು
ತಿರುಪತಿಗೆ
ಹೋದರಂತೆ;
ಖಳನಟನ ಪತ್ನಿ
ಕುಕ್ಕೆ ಸುಬ್ರಹ್ಮಣ್ಯಕೆ
ಭೇಟಿ ನೀಡಿದರಂತೆ....
ಹೌದು ಅವರವರ
ಭಾವ ಮತ್ತು ಶ್ರಮ;
ಮೂಲ ಪ್ರಕ್ರಿಯೆಗಳನು
ಅವರು ಮಾಡೇ
ಯಶಸ್ಸನು ಗಳಿಸಿದುದನು
ನಾವೆಂದೂ ಮರೆಯಬಾರದಂತೆ!
***
ಕ್ಷುಲ್ಲಕ ಸಾವು
ಪತಿ
ಚಾಕೊಲೇಟ್
ತಂದು ಕೊಡದೇ
ಇದ್ದುದ್ದಕ್ಕೆ
ಪತ್ನಿ
ಆತ್ಮಹತ್ಯೆ....
ಬೇರೆ
ಗೆಳತಿಯನ್ನಾದರೂ
ಕರೆದುಕೊಂಡು
ಬಂದಿದ್ದರೆ
ಜಗಳವಾಡಿಯಾದರೂ
ಬದುಕುತ್ತಿತ್ಯೆ?
***
ನಂದಿನಿ-ಸಮ್ಮೋಹಿನಿ
ಇನ್ನು
ಮುಂದೆ
ತಿರುಪತಿ
ಲಾಡುಗಳಲಿ
ನಂದಿನಿ ತುಪ್ಪ
ಇರೋಲ್ಲಾ....
ಕರ್ನಾಟಕದ
ನಂದಿನಿ ಇದ್ದಿದ್ದರೆ
ಲಾಡುವಿನ
ಘಮ-ರುಚಿಯದು
ಇಮ್ಮಡಿಸುತ್ತಿತ್ತೋ ಏನೋ
ಆ ತಿಮ್ಮಪ್ಪನೇ ಬಲ್ಲಾ!
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
