ಗಝಲ್ ಗಳ ಮಧುರ ಸಿರಿ

ಗಝಲ್ ಗಳ ಮಧುರ ಸಿರಿ

ಕವನ

೧.

ತಾಜ್ ಮಹಲ್ ಕಟ್ಟಬೇಕೇ ನನ್ನನ್ನು ವರಿಸು ಗೆಳತಿಯೆ

ಪ್ರೀತಿಯ ನುಡಿಗಳಿಗೆ ಕಣ್ಣೀರು ಸುರಿಸು ಗೆಳತಿಯೆ

 

ಕೋಟೆಯೊಳಗೆ ಬಂಧಿಯಾಗಿ ಅದೇನು ಸುಖವ ಕಂಡೆಯೊ

ಒಲವೆಲ್ಲಾ ಮುಗಿದಮೇಲೆ ಮುಖವಾಡ ಧರಿಸು ಗೆಳತಿಯೆ

 

ಮನದಾಳದ ಸರಳುಗಳ ಒಳಗೆ ಬಿದ್ದವೆಷ್ಟು ಹೆಣಗಳೊ

ಹರಳಾಗಿರುವ ಪಾಚಿಗಳ ಲೆಕ್ಕವನ್ನು ಇರಿಸು ಗೆಳತಿಯೆ

 

ಪರಿಮಳವೇ ಇಲ್ಲದಿಹ ಮೈಯಲ್ಲಿ ಇರುವುದೆ ಸುಗಂಧ

ರಶ್ಮಿಕಳಚಿದ ಕಣ್ಣುಗುಡ್ಡೆಗಳ ಮೆಲ್ಲನೆ ಸರಿಸು ಗೆಳತಿಯೆ

 

ಮೋಹತುಂಬಿದ ಮಹಾರಾಜನಿಗೆ ಅದೇನು ಸಿಕ್ಕಿತೋ ಈಶಾ

ನೋವೇತುಂಬಿದ ರಾಣಿಯೆಡೆಗೆ ದೃಷ್ಟಿಯನು ಹರಿಸು ಗೆಳತಿಯೆ

***

೨.

ಅರ್ಥಗಳನು ಹುಡುಕುತ್ತಲೇ ಕೊರಗದಿರು

ಅನರ್ಥಗಳು ನಡೆಯುತ್ತಲೇ ಕೊರಗದಿರು

 

ಪ್ರೀತಿಯು ಸಿಗಲಿಲ್ಲವೆಂದು ಮರುಗಬೇಡ

ಪ್ರೇಮಿಸುವರ ನೋಡುತ್ತಲೇ ಕೊರಗದಿರು

 

ತುಂತುರಾಗಿರುವ ಮಳೆಯೊಳಗೆ ಇರಬೇಡ

ಜೀವನದೊಳಗಲ್ಲಿ ಓಡುತ್ತಲೇ ಕೊರಗದಿರು

 

ದಟ್ಟವಾಗಿರುವ ಅಡವಿಯೊಳಗೆ ಸಾಗಬೇಡ

ಚೆಲುವೆಯರೆಲ್ಲ  ಹೋಗುತ್ತಲೇ ಕೊರಗದಿರು

 

ಮೌನವಾಯಿತೆಂದು ಸುಡಬೇಡ  ಸವಿಯನು

ಪೂರ್ಣಚಂದ್ರನನ್ನು ಕಾಣುತ್ತಲೇ ಕೊರಗದಿರು

 

ಹಾ ಮ ಸತೀಶ, ಬೆಂಗಳೂರು

ಚಿತ್ರ ಕೃಪೆ: ಅಂತರ್ಜಾಲ ತಾಣ

ಚಿತ್ರ್