" ಗಣಪತಿ ಬಪ್ಪ ಮೋರ್ಯ ; ಪುಡ್ಚಾ ವರ್ಷಿ ಲೌಕರ್ ಯಾ."... !

" ಗಣಪತಿ ಬಪ್ಪ ಮೋರ್ಯ ; ಪುಡ್ಚಾ ವರ್ಷಿ ಲೌಕರ್ ಯಾ."... !

ಬರಹ

ಪ್ರತಿ ವರ್ಷದಂತೆ, ೨೦೧೦ ರ ’ಗಣೇಶೋತ್ಸವ”  ವನ್ನು ಮುಂಬೈನ ಹಿರಿಯ ಕನ್ನಡ ಸಂಸ್ಥೆಗಳಲ್ಲೊಂದಾದ "ಮೈಸೂರ್ ಅಸೋಸಿಯೇಷನ್ " ನಲ್ಲಿ ಸಂಭ್ರಮದಿಂದ ನೆರೆವೇರಿಸಲಾಯಿತು. ಶುಕ್ರವಾರ, (೧೦-೦೯-೨೦೧೦) ರಂದು ಆರಂಭವಾದ  " ’ಸ್ವರ್ಣಗೌರಿ ಪ್ರತಿಷ್ಠಾಪನ ಪೂಜಾಸಮಾರಂಭ, ”  ಸಾಯಂಕಾಲ, ೫-೩೦ ಕ್ಕೆ ಆರಂಭವಾಯಿತು. ಮೈಸೂರು ಅಸೋಸಿಯೇಷನ್ ನ ಸದಸ್ಯರು  ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಎಲ್ಲಾ ಪೂಜಾವಿಧಿಗಳೊಂದಿಗೆ ಮಹಾಮಂಗಳಾರತಿಯ ನಂತರ ವಿಧಿ ಸಂಪನ್ನವಾಯಿತು. ಇದೇ ರೀತಿ, ಪ್ರತಿದಿನವೂ ಏನಾದರೊಂದು ಸಾಂಸ್ಕೃತಿಕ  ಕಾರ್ಯಕ್ರಮಗಳಿದ್ದು ಭಕ್ತವೃಂದದ  ಶ್ರಧ್ಧಾ-ಭಕ್ತಿಗಳೊಂದಿಗೆ ಪೂಜಾವಿಧಿಗಳು ಕ್ರಮವಾಗಿಯೂ ವಿಧಿವತ್ತಾಗಿಯೂ  ನಡೆದವು.   ಭಜನೆ, ಭಕ್ತಿಗೀತೆಗಳ ಗಾಯನ, ಶಾಸ್ತ್ರೀಯ ಸಂಗೀತದ ಆಯೋಜನೆಗಳಿಂದ ಅಸೋಸಿಯೇಷನ್ ಗಣಪತಿ ಮೂರ್ತಿಯ ಪರಿಸರ ಅಪೂರ್ವ ಕಳೆಯನ್ನು ಹೊಂದಿತ್ತು.

ಹೀಗೆ, ’೨೦೧೦ ರ ಗಣೇಶ ವಿಸರ್ಜನಾ ಮಹೋತ್ಸವ,’  ಅತ್ಯಂತ ಸಂಭ್ರಮೋಲ್ಲಾಸಗಳಿಂದ  ಇದೇ ಸೆಪ್ಟೆಂಬರ್ ನ,  ೧೯ ರ ರವಿವಾರ, ೨೦೧೦ ರಂದು  ಸಂಪನ್ನಗೊಂಡಿತು...

 

ಅಸೋಸಿಯೇಷನ್ ನ ಸದಸ್ಯರೆಲ್ಲಾ ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

 

 

ಭಾವುದಾಜಿ ರಸ್ತೆಯಲ್ಲಿ ’ಗಣಪತಿಯ ವಿಸರ್ಜನಾ ಮಹೋತ್ಸವ”...

.

 

ಗಣಪತಿ ವಿಸರ್ಜನಾ  ಉತ್ಸವದ ಮುಂಭಾಗದಲ್ಲಿ ’ಡ್ರಮ್ ’ ಬಾರಿಸುತ್ತಾ ಮುಂದುವರೆಯುತ್ತಿರುವ ಗೆಳೆಯರು...

 

 

’ಯುವ ಸಂಗೀತ ಪ್ರತಿಭೆ,”   ಶ್ರೀ. ಪದ್ಮನಾಭ ಶೆಟ್ಟಿಯವರ, ’ನಮ್ಮಮ್ಮ ಶಾರದೆ,’  ದಾಸರ ಕೃತಿ ಎಲ್ಲರಿಗೂ ಮೆಚ್ಚುಗೆಯಾಯಿತು...

 

 

’ಮಾಟುಂಗ ಶಂಕರಮಠದ ವಾದಿಯಾರ್ ’ ಗಳಿಂದ ’ವೇದಘೋಷ’ ದ ಕಾರ್ಯಕ್ರಮವಿತ್ತು...

 

 

ಈ ವರ್ಷದ  ಗೌರಿ-ಗಣಪತಿ ಪೂಜೆಯನ್ನು ಶ್ರೀಮತಿ/ಶ್ರೀ ರವಿದಂಪತಿಗಳು ನಡೆಸಿಕೊಟ್ಟರು...

 

 

’ಮೈಸೂರ್ ಅಸೋಸಿಯೇಷನ್’ ನ, ’ ಗೌರಿ ಮತ್ತು ಗಣೇಶ ದೇವರ ಮೂರ್ತಿಗಳು”...

 

 

೧೦ ನೆಯ ದಿನ, ಅಂದರೆ, ೧೯-೦೯-೨೦೧೦ ರಂದು ಬೆಳಿಗ್ಯೆ, ’ಮಾಟುಂಗಾ ವೈದಿಖಶಿಖಾಮಣಿಗಳಿಂದ ವೇದಘೋಷದ ಕಾರ್ಯಕ್ರಮವಿತ್ತು. ನಂತರ, ಅಸೋಸಿಯೇಷನ್ ನ ಸದಸ್ಯರು ಭಕ್ತಿಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ಅದರಲ್ಲಿ ಮುಖ್ಯವಾಗಿ, ಶ್ರೀ. ಪದ್ಮನಾಭಶೆಟ್ಟಿಯವರ ಶಾಸ್ತ್ರೀಯ ಪದ್ಧತಿಯಲ್ಲಿ ಪ್ರಸ್ತುತಪಡಿಸಿದ ರಚನೆಗಳು ಅತಿ ಸುಂದರವಾಗಿದ್ದವು. ಅನಂತರ  ಪದ್ಮಾರವಿ, ಡಾ. ಗಿರಿಜಾ ಶಾಸ್ತ್ರಿ, ಸರೋಜ, ಶ್ಯಾಮಲಾ,  ಮತ್ತು ಹಲವು ಸದಸ್ಯರು, ಅತಿ ಉತ್ತಮವಾಗಿ ಹಾಡಿದರು. ಪುಟ್ಟಮಕ್ಕಳೂ ಹಿಂದೆ ಬೀಳದೆ, ಸೊಗಸಾಗಿ ಹಾಡಿ, ಸಭೆಯ ಶೋಭೆಯನ್ನು ನೂರ್ಮಡಿಸಿದರು !

 

ಅನಂತರ, ಅಸೋಸಿಯೇಷನ್ ನ, ಶ್ರೀ ಹನುಮಾನ್  ಶಾಸ್ತ್ರಿಗಳ ಜೊತೆಯಲ್ಲಿ ಸದಸ್ಯರೆಲ್ಲಾ ಒಕ್ಕೊರಳಿನಿಂದ ಮಂತ್ರಪುಷ್ಪವನ್ನು ಹಾಡಿ ಪೂಜೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಇದಾದನಂತರ, ಸುಂದರವಾಗಿ ಸಜಾಯಿಸಿದ್ದ,  ’ಗಣಪತಿ ಮತ್ತು ಗೌರಿ ದೇವರ ಮೂರ್ತಿಗಳನ್ನು ’ ವಾಹನದ ಮೇಲೆ ಕುಳ್ಳಿರಿಸಿ, ಸಿಂಗರಿಸಿ,  ’ದಾದರ್ ಚೌಪಾತಿ ’ಗೆ ಉತ್ಸವದಲ್ಲಿ ಕರೆದೊಯ್ದು, ಅಲ್ಲಿ ವಿಸರ್ಜನಾವಿಧಿಯನ್ನು ಸಂಪನ್ನಮಾಡಲಾಯಿತು. ರಸ್ತೆಯುದ್ದಕ್ಕೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಸೋಸಿಯೇಷನ್ ನ ಸ್ತ್ರೀ-ಪುರುಷ ಸದಸ್ಯರು, ನೃತ್ಯ, ಸಂಗೀತದೊಂದಿಗೆ ಹಾಡಿ ಕುಣಿದು ಗಣಪತಿಯ ಗುಣಗಾನಮಾಡುತ್ತಾ, ಉತ್ಸವದಲ್ಲಿ ಭಾಗವಹಿಸಿದ್ದರು. 

 

ನಂತರ, ಅಸೋಸಿಯೇಷನ್ ನ ಭವ್ಯವಾದ ಹಾಲಿನಲ್ಲಿ, ಪ್ರಸಾದವಿನಿಯೋಗದ ವ್ಯವಸ್ಥೆಯಿತ್ತು. ಎಲ್ಲರೂ ಅದರಲ್ಲಿ ಭಾಗಿಗಳಾಗಿ ಗೌರಿ-ಗಣೇಶದೇವರ ಕೃಪೆಗೆ ಪಾತ್ರರಾದರು....

 

" ಗಣಪತಿ ಬಪ್ಪ ಮೋರ್ಯ ; ಪುಡ್ಚಾ ವರ್ಷಿ ಲೌಕರ್ ಯಾ."...