ಗಣರಾಜ್ಯ...

ಗಣರಾಜ್ಯ...

ಕವನ

ಗಣಗಣ ಗಣ ಸಂಕರ್ಷಣ

ರಾಜ್ಯದ ಹೆಸರಿಗೆ ನವಚೈತನ್ಯ

ಭಾಷೆ ಗಡಿಯ ಸಂಯೋಜನ

ಭಾರತದೇಳ್ಗೆಗೆ ನವ ಚಿಂತನ.

 

ಉತ್ತರ-ದಕ್ಷಿಣ,ಪೂರ್ವ-ಪಶ್ಚಿಮ

ದಿಕ್ಕು ದಿಕ್ಕಿನಲಿ ಪ್ರಾಂತ್ಯದ ಉಗಮ

ಭಾಷೆಯು ಹೊನ್ನು ಮಾತದು ಚೆನ್ನು

ಕಾಶ್ಮೀರ ಕನ್ಯಾಕುಮಾರಿಯು ಹೊನ್ನು.

 

ಸಂಸ್ಕೃತಿ ಸಂಸ್ಕಾರ ಸಾರಿದ ಭಕ್ತಿ

ಮಾರುತನಾಟದ ಚುಂಬಕ ಶಕ್ತಿ

ಸಾಹಿತ್ಯ-ಸಂಗೀತ ಕಲೆ ನೂರಾರು

ರಾಜ್ಯ ರಾಜ್ಯದಲು ಹರಡಿದೆ ಬೇರು.

 

ಉಡುಗೆ ತೊಡುಗೆಯದು ನವನಾವೀನ್ಯ

ಪಂಚಭೂತದಲ್ಲಡಗಿದ ಚೈತನ್ಯ

ಜ್ಞಾನ- ಸಿದ್ಧಿಸಾಧನೆಗಿದೆ ನಂಟು

ಭಾವ ಬಂಧನವದು ನೂರೆಂಟು.

 

ಇಪ್ಪೊತ್ತೊಂಬತ್ತು ರಾಜ್ಯವು ನೂರ್ಹತ್ತರಲಿ

ಹೊಸಹೊಸ ಅರಿವಿನ ಅಧ್ಯಾಯದಲಿ

ಗಡಿ, ಭಾಷೆ ಮತಕೆ ಮೀರಿದ ಸಂಬಂಧ

" ಭಾರತವದು" ಬೆಸೆದಿದೆ ಅನುಬಂಧ.

 

-ವೀಣಾ ಕೃಷ್ಣಮೂರ್ತಿ, ದಾವಣಗೆರೆ.

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್