ಗೀತಾಮೃತ - 17

ಗೀತಾಮೃತ - 17

*ಅಧ್ಯಾಯ ೫*

*ಸ್ಪರ್ಶಾನ್ ಕೃತ್ವಾಬಹಿರ್ಬಾಹ್ಯಾಂಶ್ಚಕ್ಷುಶೈವಾಂತರೇ ಭ್ರುವೋ/*

*ಪ್ರಾಣಾಪಾನೌ ಸಮೌ ಕೃತ್ವಾನಾಸಾಭ್ಯಂತರಚಾರಿಣೌ//೨೭//*

    ಹೊರಗಿನ ವಿಷಯ ಭೋಗಗಳನ್ನು ಚಿಂತಿಸದೆ ಇದ್ದು, ಹೊರಗೆಯೇ ತ್ಯಜಿಸಿ ಮತ್ತು ಕಣ್ಣುಗಳ ದೃಷ್ಟಿ ಯನ್ನು ಭ್ರೂಮಧ್ಯದಲ್ಲಿ ಸ್ಥಿರವಾಗಿಸಿ ಹಾಗೂ ಮೂಗಿನಲ್ಲಿ ಸಂಚರಿಸುವ ಪ್ರಾಣ ಮತ್ತು ಅಪಾನ ವಾಯುವನ್ನು ಸಮವಾಗಿಸಿರಬೇಕು.

  *ಯತೇಂದ್ರಿಯಮನೋಬುದ್ಧಿರ್ಮನಿರ್ಮೋಕ್ಷ ಪರಾಯಣ:/*

*ವಿಗತೇಚ್ಛಾ ಭಯ ಕ್ರೋಧೋ ಯ: ಸದಾ ಮುಕ್ತ ಏವ ಸ://೨೮//*

      ಯಾರ ಇಂದ್ರಿಯಗಳು,ಮನಸ್ಸು ಮತ್ತು ಬುದ್ಧಿ ಗೆಲ್ಲಲ್ಪಟ್ಟಿದೆಯೋ ಅಂತಹ ಯಾವ ಮೋಕ್ಷಪರಾಯಣನಾದ ಮುನಿಯು ಇಚ್ಛೆ,ಭಯ ಮತ್ತು ಕ್ರೋಧಗಳಿಂದ ರಹಿತನಾಗಿದ್ದಾನೆಯೋ ಅವನು ಸದಾ ಮುಕ್ತನೇ ಆಗಿದ್ದಾನೆ.

***     

 *ಭೋಕ್ತಾರಂ ಯಜ್ಞತಪಸಾಂ ಸರ್ವಲೋಕಮಹೇಶ್ವರಮ್/*

*ಸುಹೃದಂ ಸರ್ವಭೂತಾನಾಂ ಜ್ಞಾತ್ವಾ ಮಾಂ ಶಾಂತಿಮೃಚ್ಛತಿ//೨೯//*

   ನನ್ನ ಭಕ್ತರು ನನ್ನನ್ನು ಎಲ್ಲ ಯಜ್ಞ ಮತ್ತು ತಪಸ್ಸುಗಳನ್ನು ಭೋಗಿಸುವವನೂ,ಸಂಪೂರ್ಣ ಲೋಕಗಳ ಒಡೆಯರಿಗೂ ಒಡೆಯನೂ ಹಾಗೂ ಸಂಪೂರ್ಣ ಪ್ರಾಣಿಗಳ ಸುಹೃದನೂ ಅರ್ಥಾತ್ ಸ್ವಾರ್ಥ ರಹಿತ ದಯಾಳುವೂ ಮತ್ತು ಪ್ರೇಮಿಯೂ ಎಂದು ತತ್ವದಿಂದ ತಿಳಿದುಕೊಂಡು ಶಾಂತಿಯನ್ನು ಪಡೆಯುತ್ತಾನೆ.

     *ಓಂ ತತ್ಸ ದಿತಿ ಶ್ರೀ ಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀ ಕೃಷ್ಣಾರ್ಜುನ ಸಂವಾದೇ ಕರ್ಮಸಂನ್ಯಾಸಯೋಗೋನಾಮ ಪಂಚದೋಧ್ಯಾಯ://೫//*

***

*//ಅಥ ಷಷ್ಠ್ಯೋಧ್ಯಾಯ://*

    *ಆತ್ಮಸಂಯಮಯೋಗವು*

*ಶ್ರೀಭಗವಾನುವಾಚ*

*ಅನಾಶ್ರಿತ:  ಕರ್ಮಫಲಂ ಕಾರ್ಯಂ ಕರ್ಮ ಕರೋತಿ ಯ:/*

*ಸ ಸನ್ಯಾಸೀ ಚ ಯೋಗೀ ಚ ನ ನಿರಗ್ನಿರ್ನ ಚಾಕ್ರಿಯ://೧//*

     ಶ್ರೀ ಭಗವಂತನು ಹೇಳಿದನು _ 

ಯಾವ ಪುರುಷನು ಕರ್ಮಫಲದ ಆಶ್ರಯವನ್ನು ಪಡೆಯದೆ ಕರ್ತವ್ಯ ಕರ್ಮವನ್ನು ಮಾಡುತ್ತಾನೋ ಅವನು ಸಂನ್ಯಾಸಿ ಮತ್ತು ಯೋಗಿಯಾಗಿದ್ದಾನೆ ; ಮತ್ತು ಕೇವಲ ಅಗ್ನಿಯನ್ನು ತ್ಯಜಿಸಿದವನು ಸನ್ಯಾಸಿಯಲ್ಲ ಹಾಗೂ ಕೇವಲ ಕ್ರಿಯೆಗಳನ್ನು ತ್ಯಜಿಸಿದವನೂ ಯೋಗಿಯಲ್ಲ.

   *ಯಂ ಸಂನ್ಯಾಸಮಿತಿ ಪ್ರಾಹುರ್ಯೋಗಂ ತಂ ವಿದ್ಧಿ ಪಾಂಡವ /*

*ನ ಹ್ಯಸಂನ್ಯಸ್ತಸಂಕಲ್ಪೋ ಯೋಗೀ ಭವತಿ ಕಶ್ಚನ//೨//*

   ಹೇ ಅರ್ಜುನಾ! ಯಾವುದನ್ನು ಸಂನ್ಯಾಸವೆಂಬುದಾಗಿ ಹೇಳುತ್ತಾರೆಯೋ ಅದನ್ನೇ ನೀನು ಯೋಗವೆಂದು ತಿಳಿ.ಏಕೆಂದರೆ ಸಂಕಲ್ಪಗಳ ತ್ಯಾಗವನ್ನು ಮಾಡದಿರುವ ಯಾವ ಪುರುಷನೂ ಕೂಡ ಯೋಗಿಯಾಗುವುದಿಲ್ಲ.

***

*ಆರುರುಕ್ಷೋರ್ಮುನೇರ್ಯೋಗಂ ಕರ್ಮ ಕಾರಣಮುಚ್ಯತೇ /*

*ಯೋಗಾರೂಢಸ್ಯ ತಸ್ಮೈವ ಶಮ: ಕಾರಣಮುಚ್ಯತೇ//೩//*

      ಯೋಗದಲ್ಲಿ ಆರೂಢವಾಗಬೇಕೆಂಬ ಇಚ್ಛೆಯುಳ್ಳ ಮನನಶೀಲನಾದ ಪುರುಷನಿಗೆ ನಿಷ್ಕಾಮಭಾವದಿಂದ ಕರ್ಮ ಮಾಡುವುದೇ ಯೋಗದ ಪ್ರಾಪ್ತಿಯಲ್ಲಿ ಕಾರಣವೆಂದು ಹೇಳಲಾಗುತ್ತದೆ ಮತ್ತು ಯೋಗಾರೂಢನಾದ ನಂತರ ಆ ಯೋಗಾರೂಢ ಪುರುಷನಿಗೆ  ಯಾವುದು ಸರ್ವ ಸಂಕಲ್ಪಗಳ ಅಭಾವವಿದೆಯೋ ಅದೇ ಅವನ ಶ್ರೇಯಸ್ಸಿಗೆ ಕಾರಣವೆಂದು ಹೇಳಲಾಗುತ್ತದೆ.

    *ಯದಾ ಹಿ ನೇಂದ್ರಿಯಾರ್ಥೇಷು ನ ಕರ್ಮಸ್ವನುಷಜ್ಜತೇ/*

*ಸರ್ವಸಂಕಲ್ಪ ಸಂನ್ಯಾಸೀ ಯೋಗಾರೂಢಸ್ತದೋಚ್ಯತೇ//೪//*

    ಯಾವ ಕಾಲದಲ್ಲಿ ಇಂದ್ರಿಯಗಳ  ಭೋಗಗಳಲ್ಲಿ ಮತ್ತು ಕರ್ಮಗಳಲ್ಲಿಯೂ ಆಸಕ್ತನಾಗುವುದಿಲ್ಲವೋ ಆ ಕಾಲದಲ್ಲಿ ಸರ್ವ ಸಂಕಲ್ಪಗಳನ್ನು ತ್ಯಾಗಮಾಡಿದ ಪುರುಷನು ಯೋಗಾರೂಢನೆಂದು ಹೇಳಲ್ಪಡುತ್ತಾನೆ.

***

-ವಿಜಯಾ ಶೆಟ್ಟಿ ಸಾಲೆತ್ತೂರು (ಸಾರ ಸಂಗ್ರಹ)