ಗೀತಾಮೃತ - 26

ಗೀತಾಮೃತ - 26

*ಅಧ್ಯಾಯ ೭*

            *ಇಚ್ಛಾದ್ವೇಷಸಮುತ್ಥೇನ  ದ್ವಂದ್ವಮೋಹೇನ ಭಾರತ/*

*ಸರ್ವಭೂತಾನಿ ಸಮ್ಮೋಹಂ ಸರ್ಗೇ ಯಾಂತಿ ಪರಂತಪ//೨೭//*

         ಹೇ ಭರತವಂಶೀಯನಾದ ಅರ್ಜುನನೇ! ಜಗತ್ತಿನಲ್ಲಿ ಇಚ್ಛೆ ಮತ್ತು ದ್ವೇಷ ದಿಂದ ಉಂಟಾಗುವ ಸುಖ ದು:ಖಾದಿ ದ್ವಂದ್ವ ರೂಪೀ ಮೋಹದಿಂದ ಸಂಪೂರ್ಣ ಪ್ರಾಣಿಗಳು ಅತ್ಯಂತ ಅಜ್ಞತೆಯನ್ನು ಹೊಂದುತ್ತಿದ್ದಾರೆ.

    *ಯೇಷಾಂ ತ್ವಂತಗತಂ ಪಾಪಂ ಜನಾನಾಂ ಪುಣ್ಯಕರ್ಮಣಾಮ್/*

*ತೇ ದ್ವಂದ್ವಮೋಹನಿರ್ಮುಕ್ತಾ ಭಜಂತೇ ಮಾಂ ದೃಢವ್ರತಾ://೨೮//*

          ಆದರೆ, ನಿಷ್ಕಾಮ  ಭಾವದಿಂದ ಶ್ರೇಷ್ಠ ವಾದ ಕರ್ಮಗಳ ಆಚರಣೆ ಮಾಡುವ ಯಾವ ಪುರುಷರ ಪಾಪಗಳು ನಷ್ಟವಾಗಿ ಹೋಗಿವೆಯೋ,ರಾಗ ದ್ವೇಷ ಜನಿತ ದ್ವಂದ್ವ ರೂಪೀ ಮೋಹದಿಂದ ಮುಕ್ತರಾದ ದೃಢನಿಶ್ಚಯವುಳ್ಳ ಆ ಭಕ್ತರು ನನ್ನನ್ನು ಎಲ್ಲ ಪ್ರಕಾರದಿಂದಲೂ ಭಜಿಸುತ್ತಾರೆ.

***

*ಜರಾಮರಣ ಮೋಕ್ಷಾಯ ಮಾಮಾಶ್ರಿತ್ಯ ಯತಂತಿ ಯೇ/*

*ತೇ ಬ್ರಹ್ಮತದ್ವಿದು: ಕೃತ್ಸ್ನಮಧ್ಯಾತ್ಮಂ  ಕರ್ಮ ಚಾಖಿಲಮ್//೨೯//*

    ಯಾರು ನನ್ನಲ್ಲಿ ಶರಣಾಗಿ ಮುಪ್ಪು ಮತ್ತು ಸಾವಿನಿಂದ ಬಿಡುಗಡೆ ಹೊಂದಲು ಪ್ರಯತ್ನ ಮಾಡುತ್ತಾರೋ ಆ ಪುರುಷರು ಆ ಬ್ರಹ್ಮವನ್ನೂ ಸಂಪೂರ್ಣವಾಗಿ ಆಧ್ಯಾತ್ಮವನ್ನೂ ಹಾಗೂ ಸಂಪೂರ್ಣ ಕರ್ಮವನ್ನು ತಿಳಿಯುತ್ತಾರೆ.

     *ಸಾಧಿಭೂತಾಧಿದೈವಂ ಮಾಂ ಸಾಧಿಯಜ್ಞಂ  ಚ ಯೇ ವಿದು:/*

*ಪ್ರಯಾಣಕಾಲೇಪಿ ಚ ಮಾಂ ತೇ ವಿದುರ್ಯುಕ್ತಚೇತನ://೩೦//*

    ಯಾವ ಪುರುಷರು ಅಧಿಭೂತ ಮತ್ತು ಅಧಿದೈವದ ಸಹಿತ ಹಾಗೂ ಅಧಿಯಜ್ಞದ ಸಹಿತ ನನ್ನನ್ನು ಅಂತ್ಯಕಾಲದಲ್ಲಿಯೂ ಸಹ ತಿಳಿಯುತ್ತಾರೆಯೋ ಆ ಯುಕ್ತಚಿತ್ತರಾದ ಪುರುಷರು ನನ್ನನ್ನೇ ಅರಿಯುತ್ತಾರೆ ಅರ್ಥಾತ್ ಪಡೆಯುತ್ತಾರೆ.

 

     *ಓಂ ತತ್ಸದಿತಿ ಶ್ರೀ ಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀ ಕೃಷ್ಣಾರ್ಜುನಸಂವಾದೇ ಜ್ಞಾನವಿಜ್ಞಾನಯೋಗೋನಾಮ ಸಪ್ತಮೋಧ್ಯಾಯ://೭//*

***

 *ಅಧ್ಯಾಯ ೮*

      *//ಅಥ ಅಷ್ಟಮೋಧ್ಯಾಯ://**

     *ಅಕ್ಷರಬ್ರಹ್ಮಯೋಗವು*

*ಅರ್ಜುನ ಉವಾಚ*

           *ಕಿಂ ತದ್ಭ್ರಹ್ಮ ಕಿಮಧ್ಯಾತ್ಮಂ ಕಿಂ ಕರ್ಮ ಪುರುಷೋತ್ತಮ/*

*ಅಧಿಭೂತಂ ಚ ಕಿಂ ಪ್ರೋಕ್ತಮಧಿದೈವಂ ಕಿಮುಚ್ಯತೇ//೧//*

        ಅರ್ಜುನನು ಹೇಳದನು _ 

ಹೇ ಪುರುಷೋತ್ತಮ! ಆ ಬ್ರಹ್ಮವು ಯಾವುದು? ಆಧ್ಯಾತ್ಮ ವೆಂದರೆ ಏನು ಮತ್ತು ಕರ್ಮವೆಂದರೆ ಯಾವುದು? ಅಧಿಭೂತವೆಂಬ ಹೆಸರಿನಿಂದ ಯಾವುದನ್ನು ಹೇಳಲಾಗಿದೆ? ಮತ್ತು ಅಧಿದೈವವೆಂದು ಯಾವುದನ್ನು ಹೇಳುತ್ತಾರೆ?

     *ಅಧಿಯಜ್ಞ: ಕಥಂ ಕೋತ್ರ ದೇಹಸ್ಮಿನ್ ಮಧುಸೂದನ/*

*ಪ್ರಯಾಣಕಾಲೇ ಚ ಕಥಂ ಜ್ಞೇಯೋಸಿ ನಿಯತಾತ್ಮಭಿ://೨//*

      ಹೇ ಮಧುಸೂಧನ ! ಇಲ್ಲಿ ಅಧಿಯಜ್ಞ ಎಂದರೆ ಯಾರು? ಮತ್ತು ಅವನು ಈ ಶರೀರದಲ್ಲಿ ಹೇಗಿದ್ದಾನೆ? ಹಾಗೂ ಯುಕ್ತಚಿತ್ತವುಳ್ಳ ಪುರುಷರ ಮೂಲಕ ಅಂತ್ಯಕಾಲದಲ್ಲಿ ನೀನು ಯಾವ ಪ್ರಕಾರದಿಂದ ತಿಳಿಯಲು ಬರುತ್ತೀಯೆ?

***

*ಶ್ರೀಭಗವಾನುವಾಚ*

*ಅಕ್ಷರಂ ಬ್ರಹ್ಮ ಪರಮಂ ಸ್ವಭಾವೋಧ್ಯಾತ್ಮಮುಚ್ಯತೇ/*

*ಭೂತಭಾವೋದ್ಭವಕರೋ ವಿಸರ್ಗ: ಕರ್ಮಸಂಜ್ಞಿತ://೩//*

    ಶ್ರೀ ಭಗವಂತನು ಹೇಳಿದನು _ 

ಪರಮ ಅಕ್ಷರವು 'ಬ್ರಹ್ಮ' ವಾಗಿದೆ ತನ್ನ ಸ್ವರೂಪ ಅರ್ಥಾತ್ ಜೀವಾತ್ಮನು ಆಧ್ಯಾತ್ಮವೆಂಬ ಹೆಸರಿನಿಂದ ಹೇಳಲ್ಪಡುತ್ತಾನೆ ಹಾಗೂ ಭೂತಗಳ ಭಾವವನ್ನು ಉಂಟುಮಾಡುವ ಯಾವ ತ್ಯಾಗ ಅರ್ಥಾತ್ ಸೃಷ್ಟಿರಚನಾರೂಪೀ ಕ್ರಿಯೆಯಿದೆಯೋ ಅದು 'ಕರ್ಮ' ಎಂಬ ಹೆಸರಿನಿಂದ ಹೇಳಲ್ಪಟ್ಟಿದೆ.

   *ಆಧಿಭೂತಂ ಕ್ಷರೋ ಭಾವ: ಪುರುಷಶ್ವಾಧಿದೈವತಮ್/*

*ಆಧಿಯಜ್ಞೋಹಮೇವಾತ್ರದೇಹೇ ದೇಹಭೃತಾಂ ವರ//೪//*

     ಉತ್ಪತ್ತಿ _ ವಿನಾಶ ಧರ್ಮವುಳ್ಳ ಎಲ್ಲ ಪದಾರ್ಥಗಳೂ ಆಧಿಭೂತವಾಗಿವೆ.ಹಿರಣ್ಯಮಯ ಪುರುಷನು ಆಧಿದೈವವಾಗಿದ್ದಾನೆ ಮತ್ತು ದೇಹಧಾರಿಗಳಲ್ಲಿ ಶ್ರೇಷ್ಠ ನಾದ ಅರ್ಜುನ ನೇ! ಈ ಶರೀರದಲ್ಲಿ ವಾಸಿದೇವನಾದ ನಾನೇ ಅಂತರ್ಯಾಮಿ ರೂಪದಿಂದ ಅಧಿಯಜ್ಞನಾಗಿದ್ದೇನೆ.

***

(ಸಾರ ಸಂಗ್ರಹ) ವಿಜಯಾ ಶೆಟ್ಟಿ ಸಾಲೆತ್ತೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ