ಗೀತಾಮೃತ - 28

ಗೀತಾಮೃತ - 28

*ಅಧ್ಯಾಯ ೮*

       *ಓಮಿತ್ಯೇಕಾಕ್ಷರಂ ಬ್ರಹ್ಮ ವ್ಯಾಹರನ್ಮಾಮಮನುಸ್ಮರನ್/*

*ಯ: ಪ್ರಯಾತಿ ತ್ಯಜನ್ದೇಹಂ ಸ ಯಾತಿ ಪರಮಾಂ ಗತಿಮ್//೧೩/*

      ಪರಮಾತ್ಮನ ಯೋಗಧಾರಣೆಯಲ್ಲಿ ಸ್ಥಿರನಾಗಿದ್ದು ಯಾವ ಪುರುಷನು 'ಓಂ' ಎಂಬ ಈ ಏಕಾಕ್ಷರರೂಪೀ ಬ್ರಹ್ಮವನ್ನು ಉಚ್ಛರಿಸುತ್ತಾ ಮತ್ತು ಅದರ ಅರ್ಥಸ್ವರೂಪೀ ನಿರ್ಗುಣ ಬ್ರಹ್ಮನಾದ ನನ್ನನ್ನು ಚಿಂತನೆಮಾಡುತ್ತಾ ಶರೀರವನ್ನು ತ್ಯಜಿಸಿ ಹೋಗುತ್ತಾನೋ ಆ ಪುರುಷನು ಪರಮಗತಿಯನ್ನು ಹೊಂದುತ್ತಾನೆ.

        *ಅನನ್ಯಚೇತಾ: ಸತತಂ ಯೋ ಮಾಂ ಸ್ಮರತಿ ನಿತ್ಯಶ:/*

*ತಸ್ಯಾಹಂ ಸುಲಭ: ಪಾರ್ಥ ನಿತ್ಯಯುಕ್ತಸ್ಯ ಯೋಗಿನ://೧೪//*

          ಹೇ ಅರ್ಜುನನೇ! ಯಾವ ಪುರುಷನು ನನ್ನಲ್ಲಿ ಅನನ್ಯಚಿತ್ತನಾಗಿ ಸದಾಕಾಲ ನಿರಂತರ ಪುರುಷೋತ್ತಮನಾದ ನನ್ನನ್ನು ಸ್ಮರಿಸುತ್ತಾನೋ, ಆ ನಿತ್ಯ _ ನಿರಂತರ ನನ್ನಲ್ಲಿ ಯುಕ್ತನಾದ ಯೋಗಿಗೆ ನಾನು ಸುಲಭನಾಗಿದ್ದೇನೆ ಅರ್ಥಾತ್ ಅವನಿಗೆ ಸಹಜವಾಗಿಯೇ  ಪ್ರಾಪ್ತನಾಗುತ್ತೇನೆ.

***

*ಮಾಮುಪೇತ್ಯ ಪುನರ್ಜನ್ಮ  ದು:ಖಾಲಯಮಶಾಶ್ವತಮ್/*

*ನಾಪ್ನುವಂತಿ ಮಹಾತ್ಮಾನ: ಸಂಸಿದ್ಧಿಂ ಪರಮಾಂ ಗತಾ://೧೫//* ಪರಮಸಿದ್ಧಿಯನ್ನು ಪಡೆದ ಮಹಾತ್ಮಾಜನರು ನನ್ನನ್ನು ಪಡೆದುಕೊಂಡು ದು:ಖದ ಆಲಯವೂ ಮತ್ತು ಕ್ಷಣಭಂಗುರವೂ ಆದ ಪುನರ್ಜನ್ಮವನ್ನು ಪಡೆಯುವುದಿಲ್ಲ.

   *ಆಬ್ರಹ್ಮಭುವನಾಲ್ಲೋಕಾ: ಪುನರಾವರ್ತಿನೋರ್ಜುನ/*

*ಮಾಮುಪೇತ್ಯ ತು ಕೌಂತೇಯ ಪುನರ್ಜನ್ಮನ ವಿದ್ಯತೇ//೧೬//*

     ಹೇ ಅರ್ಜುನನೇ!  ಬ್ರಹ್ಮಲೋಕದವರೆಗೆ ಎಲ್ಲ ಲೋಕಗಳು ಪುನರಾವರ್ತಿತಗಳಾಗಿವೆ,ಆದರೆ , ಹೇ ಕುಂತೀ ಪುತ್ರನೇ! ನನ್ನನ್ನು ಪಡೆದ ನಂತರ ಪುನರ್ಜನ್ಮವು ಇರುವುದಿಲ್ಲ; ಏಕೆಂದರೆ ನಾನು ಕಾಲಾತೀತನಾಗಿದ್ದೇನೆ ಮತ್ತು ಈ ಎಲ್ಲ ಬ್ರಹ್ಮಾದಿ ಲೋಕಗಳು ಕಾಲನ ಮೂಲಕ ಸೀಮಿತವಾಗಿರುವುದರಿಂದ ಅನಿತ್ಯವಾಗಿವೆ.

***

*ಸಹಸ್ರಯುಗಪರ್ಯಂತಮಹರ್ಯದ್ರ್ಭಹ್ಮಣೋ ವಿದು:/*

*ರಾತ್ರಿಂ ಯುಗಸಹಸ್ರಾಂತಾಂ ತೇ ಹೋರಾತ್ರ ವಿದೋ ಜನಾ://೧೭//*  ಬ್ರಹ್ಮದೇವರ ಒಂದು ಹಗಲನ್ನು ಒಂದು ಸಾವಿರ ಚತುರ್ಯುಗಗಳವರೆಗಿನ ಅವಧಿಯೆಂದೂ ಮತ್ತು ರಾತ್ರಿಯನ್ನು ಕೂಡ ಒಂದುಸಾವಿರ ಚತುರ್ಯಗಗಳ ವರೆಗಿನ ಅವಧಿಯೆಂದೂ ಯಾವ ಪುರುಷರು ತತ್ವದಿಂದ ತಿಳಿಯುತ್ತಾರೋ, ಆ ಯೋಗೀಜನರು ಕಾಲದ ತತ್ವವನ್ನು ತಿಳಿದವರಾಗಿದ್ದಾರೆ.

  *ಅವ್ಯಕ್ತಾದ್ವ್ಯಕ್ತಯ: ಸರ್ವಾ: ಪ್ರಭವಂತ್ಯಪರಾಗಮೇ/*

*ರಾತ್ರ್ಯಾಗಮೇ ಪ್ರಲೀಯಂತೇ ತತ್ವೈವಾವ್ಯಕ್ತಸಂಜ್ಞತೇ//೧೮//*

    ಸಂಪೂರ್ಣ ಚರಾಚರ ಪ್ರಾಣಿಗಳು ಬ್ರಹ್ಮನ ಹಗಲಿನ ಪ್ರವೇಶಕಾಲದಲ್ಲಿ ಅವ್ಯಕ್ತದಿಂದ ಅರ್ಥಾತ್ ಬ್ರಹ್ಮನ ಸೂಕ್ಷ್ಮ ಶರೀರದಿಂದ ಉತ್ಪನ್ನವಾಗುತ್ತವೆ ಮತ್ತು ಬ್ರಹ್ಮನ ರಾತ್ರಿಯ ಪ್ರವೇಶಕಾಲದಲ್ಲಿ ಆ ಅವ್ಯಕ್ತ ಹೆಸರಿನ ಬ್ರಹ್ಮನ ಸೂಕ್ಷ್ಮ ಶರೀರದಲ್ಲಿಯೇ ಲೀನವಾಗುತ್ತವೆ.

***

 *ಭೂತಗ್ರಾಮ: ಸ ಏವಾಯಂ ಭೂತ್ವಾ ಭೂತ್ವಾ ಪ್ರಲೀಯತೇ/*

*ರಾತ್ರ್ಯಾಗಮೇವಶ: ಪಾರ್ಥ ಪ್ರಭವತ್ಯಹರಾಗಮೇ//೧೯//*

ಹೇ ಪಾರ್ಥನೇ! ಅದೇ ಈ ಪ್ರಾಣಿಸಮುದಾಯವು ಉತ್ಪನ್ನವಾಗುತ್ತ _ವಾಗುತ್ತ ಪ್ರಕೃತಿಯ ವಶದಲ್ಲಿದ್ದು ರಾತ್ರಿಯ ಪ್ರವೇಶಕಾಲದಲ್ಲಿ ಲೀನವಾಗಿ ಹೋಗುತ್ತದೆ , ಮತ್ತು ಹಗಲಿನ ಪ್ರವೇಶಕಾಲದಲ್ಲಿ ಮತ್ತೆ ಉತ್ಪನ್ನವಾಗುತ್ತದೆ.

*ಪರಸ್ತಸ್ಮಾತ್ತು ಭಾವೋನ್ಯೋವ್ಯಕ್ತೋವ್ಯಕ್ತಾತ್ ಸನಾತನ:/*

*ಯ: ಸ ಸರ್ವೇಷು ಭೂತೇಷು ನಶ್ಯತ್ಸು ನ ವಿನಶ್ಯತಿ//೨೦//*

     ಆದರೆ ಆ ಅವ್ಯಕ್ತಕ್ಕಿಂತಲೂ ಕೂಡ  ಅತಿಶ್ರೇಷ್ಠ ವಾದ ಇನ್ನೊಂದು ಅರ್ಥಾತ್ ವಿಲಕ್ಷಣವಾದ ,ಯಾವ ಸನಾತನ ಅವ್ಯಕ್ತಭಾವವಾಗಿದೆಯೋ ಆ ಪರಮ ದಿವ್ಯಪುರುಷನು ಎಲ್ಲ ಭೂತಗಳು ನಷ್ಟವಾದರೂ ನಾಶವಾಗುವುದಿಲ್ಲ.

***

(ಸಾರ ಸಂಗ್ರಹ) ವಿಜಯಾ ಶೆಟ್ಟಿ ಸಾಲೆತ್ತೂರು

ಚಿತ್ರ: ಇಂಟರ್ನೆಟ್ ನಿಂದ ಸಂಗ್ರಹ