ಗೀತಾಮೃತ - 5

ಗೀತಾಮೃತ - 5

ಅಧ್ಯಾಯ ೨

     ಕರ್ಮಜಂ ಬುದ್ಧಿಯುಕ್ತಾ ಹಿ ಫಲಂ ತ್ಯಕ್ತ್ವಾ ಮನೀಷಿಣ:/

ಜನ್ಮಬಂಧವಿನಿರ್ಮುಕ್ತಾ: ಪದಂ ಗಚ್ಛಂತ್ಯನಾಮಯಮ್//೫೧//

   ಏಕೆಂದರೆ, ಸಮಬುದ್ಧಿಯಿಂದ ಯುಕ್ತರಾದ ಜ್ಞಾನಿಗಳು ಕರ್ಮಗಳಿಂದ ಉಂಟಾಗುವ ಫಲವನ್ನು ತ್ಯಾಗಮಾಡಿ ಜನ್ಮರೂಪೀ ಬಂಧನದಿಂದ ಮುಕ್ತರಾಗಿ ನಿರ್ವಿಕಾರ ಪರಮಪದವನ್ನು ಹೊಂದುತ್ತಾರೆ.

  ಯದಾ ತೇ ಮೋಹಕಲಿಲಂ ಬುದ್ಧಿರ್ವ್ಯತಿತರಿಷ್ಯತಿ /

ತದಾ ಗಂತಾಸಿ ನಿರ್ವೇದಂ ಶ್ರೋತವ್ಯಸ್ಯ ಶ್ರುತಸ್ಯ ಚ //೫೨//

    ಯಾವ ಕಾಲದಲ್ಲಿ ನಿನ್ನ ಬುದ್ಧಿಯು ಮೋಹರೂಪೀ ಕೆಸರನ್ನು ದಾಟಿಬಿಡುವುದೋ ಆ ಸಮಯದಲ್ಲಿ ನೀನು  ಕೇಳಿರುವ , ಕೇಳಿಬರುವ ಈ ಲೋಕ ಮತ್ತು ಪರಲೋಕ ಸಂಬಂಧವಾದ ಎಲ್ಲ ಭೋಗಗಳಂತೆ ವೈರಾಗ್ಯ ವನ್ನು ಪಡೆಯುವೆ.

***

          ಶ್ರುತಿವಿಪ್ರತಿಪನ್ನಾ ತೇ ಯದಾ ಸ್ಥಾಸ್ಯತಿ ನಿಶ್ಚಲಾ/

ಸಮಾಧಾವಚಲಾ ಬುದ್ಧಿಸ್ತದಾ ಯೋಗಮವಾಪ್ಸ್ಯಸಿ//೫೩//

     ಬಗೆಬಗೆಯ ವಚನಗಳನ್ನು ಕೇಳುವುದರಿಂದ ವಿಚಲಿತ ವಾಗಿರುವ ನಿನ್ನ ಬುದ್ಧಿಯು ಯಾವಾಗ ಪರಮಾತ್ಮನಲ್ಲಿ ಅಚಲ ಮತ್ತು ಸ್ಥಿರವಾಗಿ ನಿಲ್ಲುವುದೋ ಆಗ  ಯೋಗವನ್ನು ಪಡೆಯುವೆ ಅರ್ಥಾತ್  ಪರಮಾತ್ಮನೊಡನೆ ನಿನ್ನ ನಿತ್ಯ ಸಂಯೋಗವು ಉಂಟಾಗುವುದು.

    ಅರ್ಜುನ ಉವಾಚ:

ಸ್ಥಿತಪ್ರಜ್ಞಸ್ಯ ಕಾ ಭಾಷಾ ಸಮಾಧಿಸ್ಥಸ್ಯ ಕೇಶವ/

ಸ್ಥಿತಧೀ: ಕಿಂ ಪ್ರಭಾಷೇತ ಕಿಮಾಸೀತ ವ್ರಜೇತ ಕಿಮ್//೫೪//

     ಅರ್ಜುನನು ಹೇಳಿದನು :

   ಹೇ ಕೇಶವಾ! ಸಮಾಧಿಸ್ಥ ನಾಗಿ ಪರಮಾತ್ಮನನ್ನು ಪಡೆದಿರುವ ಸ್ಥಿರಬುದ್ಧಿಯುಳ್ಳ ಪುರುಷನ ಲಕ್ಷಣಗಳೇನು? ಆ ಸ್ಥಿರ ಬುದ್ಧಿಯ ಪುರುಷನು ಹೇಗೆ ಮಾತನಾಡುತ್ತಾನೆ,ಹೇಗೆ ಕುಳಿತಿರುತ್ತಾನೆ ಮತ್ತು ಹೇಗೆ ನಡೆಯುತ್ತಾನೆ?

***

   ಯ: ಸರ್ವತ್ರಾನಭಿಸ್ನೇಹಸ್ತತ್ತತ್ಪ್ರಾಪ್ಯ ಶುಭಾಶುಭಮ್/

ನಾಭಿನಂದತಿ ನ ದ್ವೇಷ್ಟಿ ತಸ್ಯ ಪ್ರಜ್ಞಾ ಪ್ರತಿಷ್ಠಿತಾ//೫೭//

      ಯಾವ ಪುರುಷನು ಸರ್ವತ್ರ ಸ್ನೇಹರಹಿತನಾಗಿದ್ದು ಆಯಾಯಾ ಶುಭಾಶುಭ ವಸ್ತುಗಳನ್ನು ಪಡೆದುಕೊಂಡು ಪ್ರಸನ್ನನಾಗುವುದಿಲ್ಲವೋ ಮತ್ತು ದ್ವೇಷಿಸುವುದಿಲ್ಲವೋ ಅವನ ಬುದ್ಧಿಯು ಸ್ಥಿರವಾಗಿದೆ.

    ಯದಾ ಸಂಹರತೇ ಚಾಯಂ ಕೂರ್ಮೋಂಗಾನೀವ  ಸರ್ವಶ:/

ಇಂದ್ರಿಯಾಣೀಂದ್ರಿಯಾರ್ಥೇಭ್ಯಸ್ತಸ್ಯ ಪ್ರಜ್ಞಾ ಪ್ರತಿಷ್ಠಿತಾ//೫೮//

 ಮತ್ತು ಆಮೆಯು ಎಲ್ಲ ಕಡೆಯಿಂದ ತನ್ನ ಅಂಗಗಳನ್ನು ಹೇಗೆ ಒಳಕ್ಕೆ ಸೆಳೆದುಕೊಳ್ಳುತ್ತದೆಯೋ ಹಾಗೆಯೇ ಯಾವಾಗ ಈ ಪುರುಷನು ಇಂದ್ರಿಯಗಳ  ವಿಷಯಗಳಿಂದ ಇಂದ್ರಿಯಗಳನ್ನು ಎಲ್ಲ ಪ್ರಕಾರಗಳಿಂದ ಹಿಂದಕ್ಕೆಳೆದು ಕೊಳ್ಳುತ್ತಾನೆಯೋ ಆಗ ಅವನ ಬುದ್ಧಿಯು ಸ್ಥಿರವಾಗಿದೆಯೆಂದು ತಿಳಿಯಬೇಕು.

ಸಾರ ಸಂಗ್ರಹ : ವಿಜಯಾ ಶೆಟ್ಟಿ ಸಾಲೆತ್ತೂರು