ಗೀತಾಮೃತ - 53

ಗೀತಾಮೃತ - 53

 *ಅಧ್ಯಾಯ ೧೩*

      ‌‌ *ಯಥಾ ಪ್ರಕಾಶಯತ್ಯೇಕ: ಕೃತ್ಸ್ನಂ ಲೋಕಮಿಮಂ ರವಿ:/*

*ಕ್ಷೇತ್ರಂ ಕ್ಷೇತ್ರೀ ತಥಾ ಕೃತ್ಸ್ನಂ ಪ್ರಕಾಶಯತಿ ಭಾರತ//೩೩//*

ಹೇ ಅರ್ಜುನಾ! ಯಾವ ಪ್ರಕಾರವಾಗಿ ಒಬ್ಬನೇ ಸೂರ್ಯನು ಈ ಸಂಪೂರ್ಣ ಬ್ರಹ್ಮಾಂಡ ವನ್ನು ಬೆಳಗಿಸುತ್ತಾನೋ ಅದೇ ಪ್ರಕಾರ ಒಬ್ಬನೇ ಆತ್ಮನು ಸಂಪೂರ್ಣ ಕ್ಷೇತ್ರ ವನ್ನು ಪ್ರಕಾಶಿಸುತ್ತಾನೆ.

*ಕ್ಷೇತ್ರ ಕ್ಷೇತ್ರ ಜ್ಞಯೋರೇವಮಂತರಂ ಜ್ಞಾನಚಕ್ಷುಷಾ /*

*ಭೂತಪ್ರಕೃತಿಮೋಕ್ಷಂ ಚ ಯೇ ವಿದುರ್ಯಾಂತಿ ತೇ ಪರಮ್//೩೪//*

ಈ ಪ್ರಕಾರವಾಗಿ ಕ್ಷೇತ್ರ ಮತ್ತು ಕ್ಷೇತ್ರಜ್ಞರ ಭೇದವನ್ನು ಹಾಗೂ ಕಾರ್ಯಸಹಿತ ಪ್ರಕೃತಿಯಿಂದ ಮುಕ್ತರಾಗುವುದನ್ನು ಯಾವ ಪುರುಷರು ಜ್ಞಾನನೇತ್ರಗಳಿಂದ  ತತ್ತ್ವಶ:  ತಿಳಿಯುತ್ತಾರೋ ಆ ಮಹಾತ್ಮರು ಪರಬ್ರಹ್ಮ ಪರಮಾತ್ಮನನ್ನು ಪಡೆಯುತ್ತಾರೆ.

***

 *ಅಧ್ಯಾಯ ೧೪*

*ಅಥ ಚತುರ್ದಶೋಧ್ಯಾಯ: //*

*ಗುಣತ್ರಯವಿಭಾಗಯೋಗವು*

*ಶ್ರೀ ಭಗವಾನುವಾಚ*

*ಪರಂ ಭೂಯ: ಪ್ರವಕ್ಷ್ಯಾಮಿ ಜ್ಞಾನಾನಾಂ ಜ್ಞಾನಮುತ್ತಮಮ್/*

*ಯಜ್ಞ್ಜತ್ವಾಮುನಯ: ಸರ್ವೇ ಪರಾಂ ಸಿದ್ಧಿಮಿತೋ ಗತಾ://೧//*

         ಶ್ರೀ ಭಗವಂತನು ಹೇಳಿದನು _ ಯಾವುದನ್ನು ತಿಳಿದುಕೊಂಡು ಎಲ್ಲ ಮುನಿಜನರು ಜಗತ್ತಿನಿಂದ ಮುಕ್ತರಾಗಿ ಪರಮಸಿದ್ಧಿಯನ್ನು ಪಡೆದಿದ್ದಾರೋ ಅಂತಹ ಜ್ಞಾನಗಳಲ್ಲಿ ಅತ್ಯತ್ತಮವಾದ ಆ ಪರಮ ಜ್ಞಾನವನ್ನು ನಾನು ಪುನ: ನಿನಗೆ ಹೇಳುವೆನು.

*ಇದಂ ಜ್ಞಾನಮುಪಾಶ್ರಿತ್ಯ ಮಮ ಸಾಧರ್ಮ್ಯಮಾಗತಾ:/*

*ಸರ್ಗೇಪಿ ನೋಪಜಾಯಂತೇ ಪ್ರಲಯೇ ನ ವ್ಯಥಂತಿ ಚ//೨//*

ಈ ಜ್ಞಾನವನ್ನಾಶ್ರಯಿಸಿ ಅರ್ಥಾತ್ ಧಾರಣೆಮಾಡಿ ನನ್ನ ಸ್ವರೂಪವನ್ನು ಪ್ರಾಪ್ತಿಮಾಡಿಕೊಂಡ ಪುರುಷರು ಸೃಷ್ಟಿ ಯ ಆದಿಯಲ್ಲಿ ಪುನ: ಹುಟ್ಟುವುದಿಲ್ಲ ಮತ್ತು ಪ್ರಳಯಕಾಲದಲ್ಲಿಯೂ ಸಹ ದು:ಖಿತನಾಗುವುದಿಲ್ಲ.

***

*ಮಮ ಯೋನಿರ್ಮಹದ್ಬ್ರಹ್ಮತಸ್ಮಿನ್ ಗರ್ಭಂ  ದಧಾಮ್ಯಹಮ್/*

*ಸಂಭವ: ಸರ್ವಭೂತಾನಾಂ ತತೋ ಭವತಿ ಭಾರತ//೩//*

     ಹೇ ಅರ್ಜುನಾ! ನನ್ನ ಮಹತ್ ಬ್ರಹ್ಮರೂಪೀ  ಮೂಲಪ್ರಕೃತಿಯು ಸಮಸ್ತ ಪ್ರಾಣಿಗಳ ಯೋನಿಯಾಗಿದೆ ಅರ್ಥಾತ್ ಗರ್ಭಾಧಾನದ  ಸ್ಥಾನವಾಗಿದೆ ಮತ್ತು ನಾನು ಆ ಯೋನಿಯಲ್ಲಿ ಚೇತನ ಸಮುದಾಯರೂಪೀ ಗರ್ಭವನ್ನು ಸ್ಥಾಪಿಸುತ್ತೇನೆ.ಆ ಜಡ ಚೇತನದ ಸಂಯೋಗದಿಂದ ಎಲ್ಲ ಪ್ರಾಣಿಗಳ ಉತ್ಪತ್ತಿಯಾಗುತ್ತದೆ.

*ಸರ್ವಯೋನೀಷು ಕೌಂತೇಯ ಮೂರ್ತೇಯ: ಸಂಭವಂತಿ ಯಾ:/*  *ತಾಸಾಂ ಬ್ರಹ್ಮ ಮಹದ್ಯೋನಿರಹಂ  ಬೀಜಪ್ರದ: ಪಿತಾ//೪//*

ಹೇ ಅರ್ಜುನಾ! ನಾನಾ ಪ್ರಕಾರದ ಎಲ್ಲಾ ಯೋನಿಗಳಲ್ಲಿ ಎಷ್ಟು ಮೂರ್ತಿಗಳು ಅರ್ಥಾತ್ ಶರೀರಧಾರಿ ಪ್ರಾಣಿಗಳು ಹುಟ್ಟುತ್ತವೆಯೋ, ಪ್ರಕೃತಿಯಾದರೋ ಅವೆಲ್ಲದರ ಗರ್ಭಧಾರಣೆ ಮಾಡುವ ತಾಯಿಯಾಗಿದ್ದಾಳೆ ಮತ್ತು ನಾನು ಬೀಜವನ್ನು ಸ್ಥಾಪಿಸುವ ತಂದೆಯಾಗಿದ್ದೇನೆ.

***

*ಸತ್ತ್ವಂ ರಜಸ್ತಮ ಇತಿ ಗುಣಾ: ಪ್ರಕೃತಿಸಂಭವಾ:/*

*ನಿಬಧ್ನಂತಿ ಮಹಾಬಾಹೋ ದೇಹೇ ದೇಹಿನಮವ್ಯಯಮ್//೫//*

ಹೇ ಅರ್ಜುನಾ! ಸತ್ವಗುಣ,ರಜೋಗುಣ ಮತ್ತು ತಮೋಗುಣಗಳೆಂಬ ಈ ಮೂರೂ ಗುಣಗಳು ಪ್ರಕೃತಿಯಿಂದ ಉತ್ಪನ್ನವಾಗಿ ಅವಿನಾಶಿಯಾದ ಜೀವಾತ್ಮನನ್ನು ದೇಹದಲ್ಲಿ ಬಂಧಿಸುತ್ತದೆ.

*ತತ್ರ ಸತ್ತ್ವಂ ನಿರ್ಮಲತ್ವಾತ್ಪ್ರಕಾಶಕಮನಾಮಯಮ್/*

*ಸುಖಸಂಗೇನ ಬಧ್ನಾತಿ ಜ್ಞಾನಸಂಗೇನ ಚಾನಘ//೬//*

ಹೇ ಪಾಪರಹಿತನೇ! ಆ ಮೂರೂ ಗುಣಗಳಲ್ಲಿ ಸತ್ವಗುಣವಾದರೋ ನಿರ್ಮಲವಾದ ಕಾರಣ ಪ್ರಕಾಶಗೊಳಿಸುವಂತಹುದು ಮತ್ತು ವಿಕಾರರಹಿತವಾಗಿದೆ,ಆದರೆ ಅದು ಸುಖದ ಸಂಬಂಧದಿಂದ ಮತ್ತು ಜ್ಞಾನದ  ಸಂಬಂಧದಿಂದ ಅರ್ಥಾತ್ ಅದರ ಅಭಿಮಾನದಿಂದ ಬಂಧಿಸುತ್ತದೆ.

***

-ವಿಜಯಾ ಶೆಟ್ಟಿ ಸಾಲೆತ್ತೂರು (ಸಾರ ಸಂಗ್ರಹ)

ಚಿತ್ರ ಕೃಪೆ: ಇಂಟರ್ನೆಟ್ ತಾಣ