ಛಲದಿಂದ ಕನಸು ನನಸು ಆಗಬೇಕು

ಛಲದಿಂದ ಕನಸು ನನಸು ಆಗಬೇಕು

ಕವನ

ಕನಸು ಕಾಣಬೇಕು

ಕನಸಿನಿಂದ ಛಲ ಹುಟ್ಟಬೇಕು 

ಛಲದಿಂದ ಕನಸು ನನಸು ಆಗಬೇಕು

ನನಸಿನಿಂದ ಮನಸು ಹರ್ಷ ಆಗಬೇಕು 

 

ಹರ್ಷದಿಂದ ಮುಂದೆ ಸಾಗಬೇಕು

ಸಾಗುವದರ ಮೂಲಕ ಗುರಿ ಮುಟ್ಟಬೇಕು

ಗುರಿಯಿಂದ ಅಂದುಕೊಂಡಂತೆ ಸಾಧಿಸಬೇಕು

ಸಾಧಿಸಿದ ಮೇಲೆ ವಿನಯ ಬರಬೇಕು 

 

ವಿನಯದಿಂದ ತಲೆ ಬಾಗಬೇಕು

ತಲೆ ಬಾಗುದರ ಮೂಲಕ ಗೆಲ್ಲಬೇಕು

ಗೆದ್ದ ಮೇಲೆ ಸೌಜನ್ಯ ತೋರಿಸಬೇಕು

ಸೌಜನ್ಯದಿಂದ ಎಲ್ಲರೊಂದಿಗೆ ವರ್ತಿಸಬೇಕು

 

 ಮಾತಿನೊಳಗೆ ಪ್ರೀತಿ ಇರಬೇಕು

ಪ್ರೀತಿಯೊಳಗೆ ಪ್ರೇಮ ಇರಬೇಕು

ಪ್ರೇಮದೊಳಗೆ ಮಮಕಾರ ಇರಬೇಕು

ಮಮಕಾರ ದೊಳಗೆ ಸಹಕಾರ ಇರಬೇಕು

 

ಸಹಕಾರದಿಂದ ಭರವಸೆ ಬರಬೇಕು 

ಭರವಸೆಯಿಂದ ಧೈರ್ಯ ತುಂಬಬೇಕು 

ಧೈರ್ಯದಿಂದ ದೊಡ್ಡ ಸಾಧನೆ ಮಾಡಬೇಕು

ಸಾಧನೆಯಿಂದ ಚರಿತ್ರೆ ಆಗಬೇಕು

 

-ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ, ಶಿಕ್ಷಕರು, ಸಾ ನರೇಗಲ್ಲ,ಜಿಲ್ಲಾ ಗದಗ.

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್