ತತ್ವಜ್ಞನ ಪದಗಳು

ತತ್ವಜ್ಞನ ಪದಗಳು

ಕವನ

ಕರೆಯದೇ ಹೋಗಿ, ಇರುವ ಮಾನವ ಕಳೆದು 

ಕೊಳ್ಳುವ ಬದಲು ತನ್ನ ಗುಡಿಸಲಲೇ ಗಂಜಿ 

ಕುಡಿದು ಮಲಗುವುದೇ ಲೇಸೆಂದ ತತ್ವಜ್ಞ॥

                    *     *      *  

ಶ್ರೀಮಂತನಾಗಿ ಸಂಪತ್ತು ಸಿರಿಯ ಗಂಟನು 

ಕಾಯುವ ಬದಲು, ನೆಮ್ಮದಿಯ ಕಾವಲುಗಾರ

ನಾಗಿರುವುದೇ ಲೇಸೆಂದ ತತ್ವಜ್ಞ॥

                    *      *       *

ಜ್ಞಾನಿಯಾಗಿ  ಶ್ರಮದಲಿ ಗ್ರಂಥಗಳ ಬರೆದು

ತಣಿವುದಕಿಂತ, ಇತರೇ ಗ್ರಂಥಗಳ ಓದುಗನಾಗಿ                      

ಮೆರೆವುದೇ ಲೇಸೆಂದ ತತ್ವಜ್ಞ॥

                     *      *      *

ಕಛೇರಿಯ ಮುಖ್ಯಸ್ಥನಾಗಿ ಸ್ವಯಂ ಬಂದಿ

ಆಗುವ ಬದಲು, ಜವಾನನಾಗಿ ಕುರ್ಚಿಲಿ ಕೂತು

ನಿದ್ದೆ ಹೊಡಿವುದೇ ಲೇಸೆಂದ ತತ್ವಜ್ಞ॥

                     *      *      *

ಇನ್ನೊಬ್ಬರನು ಕಾಡೀ ಬೇಡಿ ಸ್ವರ್ಗವ

ಕಾಣುವ ಬದಲು, ಕಾಸಿಲ್ಲದ ಕೈಲಾಸದಲಿ                        

ವಿಹರಿಸುವುದೇ ಲೇಸೆಂದ ತತ್ವಜ್ಞ ॥

                  *      *      *

ಸ್ವಂತ ನಾಯಿಯ ಸಾಕಿ ಬೆಲೆ, ಶ್ರಮವನು

ತೆರುವ ಬದಲು ಬೀದಿ ನಾಯಿಗೆ ತುತ್ತು 

ಅನ್ನ ಹಾಕುವುದೇ ಲೇಸೆಂದ ತತ್ವಜ್ಞ॥

                   *      *      *

ಬಣ್ಣ ಹಚ್ಚಿ ಶ್ರಮ ಸ್ಪರ್ಧೆಯಲಿ ಬೀಗಿ ದೊಡ್ಡ 

ನಟನಾಗುವ ಬದಲು ಪ್ರೇಕ್ಷಕನಾಗಿ ನೋಡಿ 

ಆನಂದಿಸುವುದೇ ಲೇಸೆಂದ ತತ್ವಜ್ಞ॥

                    *      *      *

ಗಾಯಕನಾಗಿ ಸದಾ ಒಂದೇ ಪ್ರಾಕಾರದಲಿ

ಹಾಡುವುದಕಿಂತ ಶ್ರೋತೃವಾಗಿ ಭಿನ್ನ ಪ್ರಾಕಾರಗಳ                    

ಕೇಳುವುದೇ ಲೇಸೆಂದ ತತ್ವಜ್ಞ॥

                    *      *      *

ಬಿಗುಮಾನದಿ ಇನ್ನೊಬ್ಬರ ಕಾರಲಿ ತಗ್ಗಿ ಬಗ್ಗಿ

ಕೂರುವುದಕಿಂತ ತನ್ನ ಬಾಡಿಗೇ ಕಾರಿನಲಿ                     

ಹಾರಾಡುವುದೇ ಲೇಸೆಂದ ತತ್ವಜ್ಞ॥

                    *      *      *

ಹವಾನಿಯಂತ್ರಣದಲಿ ಕೂತು ಬವಣೆ 

ಪಡುವದಕಿಂತ ಪಕೃತಿಯ ಮಂದ ಗಾಳಿಯಲಿ                       

ತೇಲುವುದೇ ಲೇಸೆಂದ ತತ್ವಜ್ಞ॥

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್