ತರಗೆಲೆಯಲ್ಲಿ ಬರೆದಿದೆ

ತರಗೆಲೆಯಲ್ಲಿ ಬರೆದಿದೆ

ಕವನ

ಉದುರಿದ ಹಸಿರೆಲೆ ಒಣಗಿದೆ ಬಿಸಿಲಲಿ

ಸಾರಿದೆ ನೋವನು ಮೌನದಲಿ

ಮರಗಳ ವೇದನೆ ಅಡಗಿದೆ ಅದರಲಿ

ಬರೆದಿದೆ ಒಣಗಿದ ಎಲೆಯಲ್ಲಿ

 

ತನ್ನಯ ಪಾಡಿಗೆ ಮೊಳೆತಿಹ ಗಿಡವದು

ಬೆಳೆದಿರೆ ಸುಂದರ ಮರವಾಗಿ

ಬೆಲೆಯನು ಕಟ್ಟುತ ಕೊಳ್ಳಲು ಬಂದರೆ

ನೀಡುವೆ ತಕ್ಷಣ ನೀ ಹೋಗಿ

 

ಜೀವಿಗೆ ಉಸಿರನು ನೀಡಿದ ವೃಕ್ಷವು

ಉಸಿರನು ನಿಲ್ಲಿಸಿ ಧರೆಶಾಹಿ

ಮಾಡಿದ ನೆರವನು ಮರೆಯುವ ಮಾನವ

ಮನವದು ಧನದಲಿ  ವ್ಯಾಮೋಹಿ||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್