ತರ್ಲೆ ಥಾಟ್ಸ್

ತರ್ಲೆ ಥಾಟ್ಸ್

ಬರಹ

1.ಸಾಯೋವರೆಗು ಮನುಷ್ಯ್ಂಗೆ ಕಾಡೋದು ಒಂದೆ ವಸ್ತು .."ಅರ್ಥ".. ಜೊತೆಗೆ ಇದ್ದಾಗ ಸುಮ್ನೆ ಇರಲ್ಲ ... ಇಲ್ದೆ ಇದ್ದಾಗ ಸುಮ್ನೆ ಇರಕ್ಕೆ ಬಿಡಲ್ಲ ... !!!!

 

2. ಜ್ಯೋತಿಷ್ಯ ಎನ್ನುವುದು ಕಟ್ಟುಕಥೆ... ಹೇಳುವವನು ದಡ್ದ .... ಕೇಳುವವನು ಶತದಡ್ಡ

 

3. ಏನು ಮಾಡುವುದು ಈಗಿನ ಕಾಲದಲ್ಲಿ ಸತ್ಯ ಹೇಳುವುದೆಂದರೆ - ಚರಂಡಿ ಅಲ್ಲಿಯ ಕಸವನ್ನು ನಮ್ಮ ಕೈಯಲ್ಲಿ ಎತ್ತಿ ಬೇರೆಯವರ ಮುಖಕ್ಕೆ ಎಸೆದ ಹಾಗೆ

 

4. ನೈಸರ್ಗಿಕವಾಗಿ ಹುಟ್ಟುವ ಪ್ರೀತಿಗೆ ಎಲ್ಲವನ್ನು ಎದುರಿಸುವ ಶಕ್ತಿ ಇರುತ್ತೆ ... ವಾಸ್ತವತೆಯ ವಿಷಯಗಳ ಅಡಿಯಲ್ಲಿ ಹುಟ್ಟುವ ಪ್ರೀತಿಗೆ ಆ ಶಕ್ತಿ ಇರಲ್ಲ !!!

 

5. ನಾವು ಮಾಡಿದ ತಪ್ಪುಗಳನ್ನು ಒಪ್ಪಿಕೊಂಡಾಗ , ಪಶ್ಚಾತ್ತಾಪದ ನೆಮ್ಮದಿ ಅದರಿಂದ ಹುಟ್ಟುವ ಸಂತೋಷ ಹಾಗು ವಾಸ್ತವತೆಗೆ ಹತ್ತಿರವಾದ ಆಪ್ತತೆ ನಮ್ಮಲ್ಲಿರುತ್ತದೆ ... ಅದೆ ಮರೆಮಾಡಿದಾಗ ಭಯಭಾವಕೆ ಶರಣಾದ ನಮ್ಮ ದೌರ್ಬಲ್ಯದ ಒಂಟಿತನವೆ ಆವರಿಸಿರುತ್ತದೆ ....