ತ್ರಿಪದಿ ೧೪-೧೫-೧೬

ತ್ರಿಪದಿ ೧೪-೧೫-೧೬

ಬರಹ

ಬಾಳ್ವೆದೀಪ ನೀನಾಗಿ ಬಾಳು ಎನದಿದ್ದು
ಬೆಳಗುದೀಪ ನೀನಾಗಿ ಬೆಳಕು ಎನಗಿದ್ದು
ಸ್ಮರಣ ದೀಪ ನೀನಾಗಿ ಮರಣ ಎನದಿರಲಿ ಪ್ರಭುಶಂಕರ

ಕನ್ನಡದ ನುಡಿ ನುಡಿಯು ಸುರಿದು
ಕನ್ನಡಿಗರ ನರ ನಾಡಿಯಲಿ ಹರಿದು
ಕನ್ನಡದೀಪ ಮನೆ ಮನೆಯಲುರಿದು ಮೆರೆಯಲಿ ಪ್ರಭುಶಂಕರ

ನಾರಿ ಚಟವಿಟ್ಟವನು ಮತಿಗೆಟ್ಟು ಬಾಳ್
ದಾರಿ ಬಿಟ್ಟು ಕಡೆಯಲ್ಲಿ ಹಾಳ್
ಮೋರಿ ಮೆಟ್ಟುವನು ಪ್ರಭುಶಂಕರ