ತ್ರಿಶಂಕು
ಕವನ
ಹಿಂದಿನ
ಅವರು
ಏನು
ಮಾಡಿಟ್ಟು
ಹೋದುದನ್ನು
ಇಂದಿನವರು
ಪ್ರಶ್ನಿಸದೇ
ಸ್ವೀಕರಿಸಿ
ಅದರಂತೆ
ಇರಬೇಕು
ಬರೆಯಬೇಕು
ಕೊನೆಗೆ
ಅಲ್ಲಿಯು
ಇಲ್ಲಿಯೂ
ಗತಿ
ಇಲ್ಲದೇ
ಸಾಯಬೇಕು !
***
ದಾರಿ ಬಿಡಿ
ನುಂಗಣ್ಣರು ಬಂದಿದ್ದಾರೆ
ದಾರಿ ಬಿಡಿ
ರಸ್ತೆಯ ಅಗಲೀಕರಣ ,
ಚರಂಡಿ ರಿಪೇರಿ ,
ರಸ್ತೆ ಹೊಂಡ
ಮುಚ್ಚಿಸುವುದು , ಸರಕಾರಕ್ಕೆ
ಸೇರಿದ ಸ್ಥಳ
ಮಾರಾಟ ,
ನಗರ ನಿರ್ಮಲೀಕರಣ ,
ಆರೋಗ್ಯ ಭಾಗ್ಯ
ಆಹಾರ ವಸ್ತುಗಳ
ಮಾರಾಟ , ಸಬ್ಸೀಡಿ ,
ಶಿಕ್ಷಣ ವ್ಯವಸ್ಥೆ
ಯಾವುದೂ
ಜನರಿಗಾಗಿಯಲ್ಲ .
ಜನರ ಹೆಸರಲ್ಲಿ
ಅಧಿಕಾರಿಗಳಿಗೆ
ಐಷರಾಮ ಬದುಕಲ್ಲಿ
ಬದುಕಲು
ಸರಕಾರಗಳು
ಕಲ್ಪಿಸಿರುವ
ಯೋಜನೆಗಳು
ಮೇರಾ ಭಾರತ್
ಮಹಾನ್ !
-ಹಾ. ಮ ಸತೀಶ ಬೆಂಗಳೂರು
ಚಿತ್ರ್
