ದಿನಕರ ದೇಸಾಯಿಯವರ ಐದು ಚುಟುಕುಗಳು

ದಿನಕರ ದೇಸಾಯಿಯವರ ಐದು ಚುಟುಕುಗಳು

ಕವನ

ವಿಶ್ವ ಪರಿಷತ್ತು ಸೇರಲು ನಿನ್ನೆ ಸಂಜೆ

ಮಾತಾಡಿ ಮಾತಾಡಿ ಭೂವಲಯ ಬಂಜೆ

ಮುಂಜಾನೆ ಗದ್ದೆ ಹೂಡಲು ಎರಡು ಎತ್ತು

ಸಂಜೆಯಾಗುವತನಕ ಬಾಯೊಳಗೆ ತುತ್ತು.

ಮಂತ್ರಿಗಳು ನಮಗಿತ್ತ ಭರವಸೆಯ ನಂಬಿ

ಒಡೆದು ನೋಡಿದೆವು ಪ್ರತಿಯೊಂದು ಗೋಡಂಬಿ

ಒಂದರಲ್ಲೂ ಬೀಜ ಸಿಗಲಿಲ್ಲ ಪಾಪ !

ಎಲ್ಲವೂ ಒಣಬಾಯಿ ಮಾತಿನ ಪ್ರಲಾಪ.

ಮನೆಯೊಳಗೆ ಖಾಲಿ ಇದ್ದರೆ ನಿಮ್ಮ ದುಡ್ಡು

ವೃದ್ಧನಾರಿಯ ಹಾಗೆ ಸಂಪೂರ್ಣ ಗೊಡ್ಡು

ಬ್ಯಾಂಕಿನಲಿ ತುಂಬಿದರೆ ಯೌವನದ ಪ್ರಾಯ

ಪ್ರತಿವರ್ಷ ಮರಿ ಹಾಕಿ ಭರ್ತಿ ಆದಾಯ.

ಭಾಷಣಕೆ ನಿತ್ಯವೂ ಹಾಕಿದರೆ ಬಣ್ಣ

ನೀನೊಂದು ದಿನ ಮಂತ್ರಿಯಾಗಬಹುದಣ್ಣ

ಹಾಕಿದರೆ ಬಣ್ಣ ಬದಲಾಯಿಸಿದ ಕೋಟು

ನಿನ್ನ ಪೆಟ್ಟಿಗೆಯೊಳಗೆ ಸಾಕಷ್ಡು ಓಟು.

ಮಂಗಳವ ಹಾಡಲಿಕೆ ನನಗಿಲ್ಲ ಬಾಯಿ

ಯಾವಾಗಲೂ ಕಾವಲಿಡಬೇಕು ನಾಯಿ

ಸ್ತುತಿಪಾಠ ಅತಿಯಾಗಿ ಹಾಳಾಯ್ತು ದೇಶ

ಬೊಗಳಬೇಕೆನ್ನುವುದೆ ನನ್ನ ಉದ್ಧೇಶ.

(ಸಂಗ್ರಹ)

ಚಿತ್ರ್