*ದುಡ್ಡಿಗೆ ಓಟು ಬದುಕಿಗೆ ಏಟು*

*ದುಡ್ಡಿಗೆ ಓಟು ಬದುಕಿಗೆ ಏಟು*

ಕವನ

ಗ್ರಾಮದ ಏಳ್ಗೆ ದೇಶದ ಏಳ್ಗೆ

ಎಂದರು  ಬಾಪೂಜಿಯು 

ಸ್ವಾರ್ಥವೆ  ರಾಜಕೀಯದ ಸೂತ್ರ

ಎಂದರು ಭ್ರಷ್ಟದೊರೆಯು ||

 

ಮೋಜಿನ  ಸುಳಿಗೆ ಯುವಕರು ಸಿಲುಕಿ

ಜೀವನವೆ ಕಳಕೊಂಡರು

ಅಮಲಲಿ ಕಳ್ಳ ಖದಿಮರ ಕೈಗೆ

ಗ್ರಾಮವ ಕೊಟ್ಟುಕೆಟ್ಟರು ||

 

ದುಡ್ಡಿಗೆ ಓಟು ಬದುಕಿಗೆ ಏಟು

ಸತ್ಯವ ಮರೆತೆ ಬಿಟ್ಟರು

ಹೆಂಡಕೆ ಓಟು ನೋಟಿಗೆ ಓಟು

ಮಾರುತ ಕುಲಗೆಟ್ಟರು ||

 

ಗ್ರಾಮದ ಚುನಾವಣೆಯಲಿ ರಕ್ತ

ಸಂಬಂಧ ಕಳಚಿಬಿದ್ದಿತು

ಊರಲಿ ಗೆದ್ದು ಬರುತಲಿ  ನಾಯ್ಕ

ಕೋಮಲಿ ಗಲಭೆವೆದ್ದಿತು ||

 

ಹಳ್ಳಿಯೆ ನಮ್ಮ ದೇಶದ ಬಳ್ಳಿ

ಸುಂದರ ಮಧುರ ತಾಣವು

ಹಳ್ಳಿಯ ಜಗವು ಸಂಸ್ಕೃತಿ ನೆಲವು

ಕಾಪಾಡಿ ದೇಶದ ಪ್ರಾಣವು ||

 

-*ಶ್ರೀ ಈರಪ್ಪ ಬಿಜಲಿ*

 

ಚಿತ್ರ್