ದೇವರಿಗೊಂದು ಪ್ರಶ್ನೆ

ದೇವರಿಗೊಂದು ಪ್ರಶ್ನೆ

ಬರಹ

ಮುಂಬೈ ನಗರಿಯಲಿ
ಉಗ್ರರು ಅಟ್ಟಹಾಸ ಮೆರೆದು
ನೂರಾರು ಜನರು ಮಡಿದಾಗ
ದು:ಖದ ಅರಿವಾಗಲಿಲ್ಲವೇ ದೇವರಿಗೆ?

ಅಮಾಯಕರ ಹೆಣಗಳು
ರಾಶಿರಾಶಿ ಬಿದ್ದು
ನೊಂದವರ ಅಳಲು ಮುಗಿಲು ಮುಟ್ಟಿದ್ದಾಗ
ಕೂಗು ಕೇಳದೇ ದೇವರಿಗೆ?

ನವಯುಗದ ನವಕನಸ
ಹೊತ್ತಿದ್ದ ಕಣ್ಗಳು
ಕ್ಷಣಾರ್ಧದಲ್ಲಿಯೇ ಮುಚ್ಚಿದಾಗ
ಕಣ್ ಕಾಣಲಿಲ್ಲವೇ ದೇವರಿಗೆ?

ಸಿಕ್ಕವರಿಗೆ ಗುಂಡು ಹಾರಿಸುತ್ತ
ರಾಜದರ್ಪದಲಿ
ಉಗ್ರರು ಮೆರೆಯುತ್ತಿದ್ದಾಗ
ತಪ್ಪು ಕಾಣಲಿಲ್ಲವೇ ದೇವರಿಗೆ?

ನೂರು ವರ್ಷ
ಇರಬೇಕಿದ್ದ ಎದೆಯುಸಿರು
ಅರ್ಧಕ್ಕೆ ನಿಂತಾಗ
ಕರುಣೆ ಬರಲಿಲ್ಲವೇ ದೇವರಿಗೆ?

ಅನ್ಯರ ಪ್ರಾಣ
ಉಳಿಸಲು ಹೋದ ಯೋಧರು
ತಮ್ಮ ಪ್ರಾಣ ತೆತ್ತಾಗ
ನೋವು ತಾಕಲಿಲ್ಲವೇ ದೇವರಿಗೆ?

-ಆಕಾಶ್ ಹಿರೇಮಠ (೯ನೇ ತರಗತಿ), ಕೂಡ್ಲಿಗಿ