ದೇವರು ಹಾಗೂ ದೇಗುಲ ಎಂದರೆ?

ದೇವರು ಹಾಗೂ ದೇಗುಲ ಎಂದರೆ?

ಹಲವರ ಮನದಲ್ಲಿ ಮೂಡುವ ಪ್ರಶ್ನೆ ದೇವರು ಎಂದರೆ ಯಾರು? ಮತ್ತು ದೇಗುಲ ಎಂದರೆ ಏನು? ಎಂಬುದು ಅದೇ ರೀತಿ ನನ್ನ ಮನಸ್ಸಿನಲ್ಲಿಯೂ ಕೂಡ ಈ ಪ್ರಶ್ನೆಗಳು ಮೂಡಿದವು, ನಂತರ ನನ್ನಮನಸ್ಸಿನ ಪ್ರಶ್ನೆಗೆ ನಾನೇ ಸಮಾಧಾನಕರವಾದ ಉತ್ತರಗಳನ್ನು ಧ್ಯಾನ, ಮೌನ ಮತ್ತು ಆಲೋಚನೆಗಳಿಂದ ಕಂಡುಕೊಂಡೆ, ನನ್ನ ಮನಸ್ಥಿತಿಯ ಪ್ರಕಾರ ದೇವರು ಎಂದರೆ 'ನಂಬಿಕೆ' ಎಂಬುದು ನನ್ನ ಭಾವನೆ, ಏಕೆಂದರೆ ನಾವು ಯಾರ ಮೇಲೆ ನಂಬಿಕೆ ಇಟ್ಟುಕೊಂಡು ಇರುತ್ತೇವೆಯೂ, ಅವರೆಲ್ಲರೂ ನಮ್ಮ ಪಾಲಿಗೆ ದೇವರಾಗಿ ಕಾಣುತ್ತಾರೆ, ಉದಾಹರಣೆಗೆ ನಮ್ಮ ಮಾತಾಪಿತರು ಸದಾಕಾಲವೂ ನಮ್ಮ ಶ್ರೇಯಸ್ಸನ್ನು ಬಯಸುತ್ತಾರೆ, ನಮಗೆ ಅವರ ಮೇಲೆ ಇರುವ ನಂಬಿಕೆ ಅವರನ್ನು ದೇವರ ಸ್ಥಾನದಲ್ಲಿ ಇಡುವಂತೆ ಮಾಡಿದೆ, ಮತ್ತು ಮಾತಾಪಿತರು ನಮ್ಮ ಮೊದಲ ದೇವರು ಎಂಬುದನ್ನು ಎಲ್ಲರೂ ನೆನೆಯಬೇಕು, ತದ ನಂತರ ನಾವು ನಮಗೆ ವಿದ್ಯೆ ಕಲಿಸುವ ಗುರುಗಳಿಗೆ ದೇವರ ಸ್ಥಾನವನ್ನು ನೀಡುತ್ತೇವೆ, ಏಕೆಂದರೆ ಗುರುಗಳು ಸರ್ವಕಾಲಕ್ಕೂ ಶಿಷ್ಯರ ಒಳಿತನ್ನು ಬಯಸುತ್ತಾರೆ, ಎಂದು ನಂಬಿಕೆ ಗುರುಗಳಿಗೆ ದೇವರ ಸ್ಥಾನವನ್ನು ನೀಡುತ್ತದೆ, ನಾವು ಯಾವುದೇ ಸಾಧನೆ ಮಾಡಲು ನಮ್ಮ ಗುರಿಯನ್ನು ತಲುಪಲು ಸಹಾಯ ಮಾಡುವವರು ನಮ್ಮ ಗುರುಗಳಾಗಿರುತ್ತಾರೆ, ನಮ್ಮ ಮತ್ತು ನಮ್ಮದೇಶದ ರಕ್ಷಣೆಗಾಗಿ ತಮ್ಮ ಜೀವವನ್ನು ಮುಡಿಪು ಇಟ್ಟುಕೊಂಡು ಇರುವ ನಮ್ಮ ಯೋಧರು ನಮಗೆ ದೇವರಾಗಿದ್ದಾರೆ, ಇಡೀ ದೇಶಕ್ಕೆ ಬೆನ್ನೆಲುಬಾಗಿ ಅನ್ನವನ್ನು ನೀಡುವ ರೈತರು ಕೂಡ ದೇವರು, ಇಷ್ಟೇ ಅಲ್ಲದೆ ನಮ್ಮ ಕಷ್ಟದ ಸಮಯದಲ್ಲಿ ಬಂದು ನಮಗೆ ಸಹಾಯ ಮಾಡುವವರು ದೇವರಾಗಿರುತ್ತಾರೆ, ಏಕೆಂದರೆ ಕಷ್ಟ ಕಾಲದಲ್ಲಿ ಯಾವುದೂ ಒಂದು ಕಾಣದ ಕೈ ನಮಗೆ ಸಹಾಯ ಮಾಡುತ್ತದೆ, ಎಂಬ ನಂಬಿಕೆ ನಮ್ಮ ಮನದಲ್ಲಿರುತ್ತದೆ, ದೇವರನ್ನು ನಾವು ಬರೀ ವ್ಯಕ್ತಿಯ ರೂಪದಲ್ಲಿ ಮಾತ್ರ ನೋಡಬಯಸುವುದು, ತಪ್ಪು ಸಕಲ ಜೀವರಾಶಿಗಳು ಮತ್ತು ನಿರ್ಜೀವ ವಸ್ತುಗಳಲ್ಲಿಯೂ ನಾವು ದೇವರನ್ನು ಕಾಣಬಹುದು, ನಂಬಿಕೆ ಇದ್ದರೆ ಮಾತ್ರ ಸಾಧ್ಯ ಆಗುತ್ತದೆ, ಕೆಲವರು ಕಲ್ಲಿನಲ್ಲಿ ದೇವರನ್ನು ಕಾಣಬಹುದು, ಕೆಲವರು ನೀರಿನಲ್ಲಿ ದೇವರನ್ನು ಕಾಣಬಹುದು, ಮತ್ತೆ ಕೆಲವರು ಮರದಲ್ಲಿ ದೇವರನ್ನು ಕಾಣಬಹುದು, ಅವರವರ ನಂಬಿಕೆ ಅವರಿಗೆ ದೇವರ ರೂಪದಲ್ಲಿ ಕಾಣುತ್ತದೆ, ಹಾಗಂತ ನಾವು ನಮ್ಮ ನಂಬಿಕೆಯನ್ನು ಪರರ ಮೇಲೆ ಏರುವುದು ಮತ್ತು ನಮ್ಮ ನಂಬಿಕೆ ಇದೇ ದೇವರು ನೀವು ಇದ್ದನ್ನೇ ನಂಬಬೇಕು ಎನ್ನುವುದು, ತಪ್ಪು ಅವರವರ ನಂಬಿಕೆ ಅವರಿಗೆ ದೊಡ್ಡದಾಗಿರುತ್ತದೆ ಮತ್ತೆ ಕೆಲವರು ಮೂಢನಂಬಿಕೆ ಹೊಂದಿರುತ್ತಾರೆ, ನಾವು ಅದನ್ನು ವಿರೋಧಿಸಲು ಹೋದರೆ ನಾವು ಅವರಿಗೆ ವಿರೋಧಿಗಳಾಗುತ್ತೇವೆ. ಅವರ ಮೂಢನಂಬಿಕೆ ಅವರಿಗೆ ಮುಳ್ಳಾಗಿ ಚುಚ್ಚುವವರೆಗೂ ಅವರಿಗೆ ಅರಿವು ಬರುವುದಿಲ್ಲ.   

ಇನ್ನೂ ದೇಗುಲ ಎಂದರೆ? ಎಂಬ ಪ್ರಶ್ನೆಗೆ ನನ್ನ ಮನಸ್ಸಿನ ಉತ್ತರ, ನಾವು ನಂಬಿಕೆ ಇಟ್ಟ ವಸ್ತು ಅಥವಾ ವ್ಯಕ್ತಿ ಇರುವ ಸ್ಥಳವೇ ದೇಗುಲ, ನಮಗೆ ನಮ್ಮ ಮನವೇ ದೇಗುಲ ಎಂಬುದು ನನ್ನ ಅಭಿಪ್ರಾಯ. ಒಟ್ಟಿನಲ್ಲಿ ನಂಬಿಕೆಯೇ ದೇವರು ಎಂಬುದು ನನ್ನ ಅಭಿಪ್ರಾಯ.  

(ತಪ್ಪಿದ್ದರೆ ಮನ್ನಿಸಿ)

-ತುಂಬೇನಹಳ್ಳಿ ಕಿರಣ್ ರಾಜು ಎನ್. 

ಚಿತ್ರ ಕೃಪೆ: ಇಂಟರ್ನೆಟ್ ತಾಣ