ದೊಡ್ಡವರು ನಾವೆಂಬ
ಶ್ವಾನಗಳು ತಮ್ಮ ಮಾತನ್ನೇ
ಸಮರ್ಥಿಸಿಕೊಳ್ಳುತ್ತವೆ
ಬಾಲ ಡೊಂಕಾದರೂ
ದೊಡ್ಡವರು ನಾವೆಂಬ ಅಹಂನಲ್ಲಿ
ಕತ್ತೆಗಾದಷ್ಟೂ ಪ್ರಾಯವಾದರೂ ಸಹ !
ಊಟವಾಯ್ತೇಯೆಂದು ಕೇಳಿದರೆ
ಮುಂಡಾಸು ಮೂವತ್ತು ಮಳ
ಎನ್ನುವ ನೀರು ಶುನಕಗಳು !
ಅಪ್ಪ ನೆಟ್ಟಿರುವ ಆಲದ ಮರಕ್ಕೇ
ಸುತ್ತು ಹೊಡೆಯುವ
ಮಗನಂತೆ ,ಕೊನೆಗೆ ಮಂಗನಂತೆ
ಹಳೆಯಕಾಲದ ಗೆಲ್ಲನ್ನೇ ಹಿಡಿದು
ಜೋಕಾಲಿ ಹೊಡೆಯುತ್ತೇನೆ
ಎನ್ನುವ ಹಳೆ ಕಬ್ಬಿಣ ತಾಮ್ರಗಳಿಗೆ
ಎನೆನ್ನೋಣ ?
ಬದಲಾವಣೆಗೆ ತಮ್ಮನ್ನು
ತೆರೆದುಕೊಳ್ಳದವರನ್ನು
ಯಾವುದೇ ಮೇನೆಯಲ್ಲಿ
ಕೂರಿಸಿದರೂ ನೆಲದಲ್ಲೇ
ಎಲ್ಲವನ್ನೂ ಮಾಡುವುದ
ಬಿಡುವುದೂ ಇಲ್ಲ !
ಈ ಕಂಪ್ಯೂಟರ್ ಯುಗದಲ್ಲಿ
ನಿಮ್ಮ ಲಾಟುಪೋಟ್ ಉಪದೇಶ
ಯಾರಿಗೆ ಬೇಕಯ್ಯಾ
ಸೃಜನಶೀಲತೆ ಇಲ್ಲದ ನಿಮ್ಮ
ಬರಹಗಳ ನಾಯಿಗಳೂ
ಮೂಸವು, ಇನ್ನು
ಮನುಷ್ಯರೆಲ್ಲಿಂದ
ಮೂಸಿಯಾವು ? ಅದಕ್ಕೆಂದು
ತೋರುತ್ತದೆ ಬರೆದ ಸಾಹಿತ್ಯಗಳೆಲ್ಲ
ರಾಶಿ ರಾಶಿ ಪುಸ್ತಕದ ರೂಪದಲ್ಲಿ
ಮನೆಯಲ್ಲೇ ಕೊಳೆಯುತ್ತಾ
ಬಿದ್ದಿದೆ !
ದ್ವೇಷ ಭಾವನೆಯಿರುವ ಜನರು
ಕವಿಗಳಾಗಲು ಸಾಧ್ಯವೇ?
ಕವಿಗಳ ಜೊತೆಗೇ
ಹೊಂದಾಣಿಕೆಯಿಲ್ಲದವರನ್ನು
ಇನ್ನೇನೆಂದು ಕರೆಯಲಿ ?
ಗಣ ವಿಂಗಡಣೆಯ ಮಾಡುತ್ತಾ
ಗುಣವಿಲ್ಲದವರಂತೆ
ತೋರುತ್ತಾ ಮಾತೆತ್ತಿದರೆ
ಮರ್ಯಾದೆ ತನಗೊಬ್ಬಗೆ
ಎನ್ನುವ ಪಂಡಿತರಿಂದ ಸಾಹಿತ್ಯ
ಬೆಳೆವುದೇ? ಎಂದರೆ ಗೋರ್ಕಲ್ಲ
ಮೇಲೆ ಮಳೆ ಸುರಿದಂತೆ !
ತಪ್ಪು ಹುಳುಕುಗಳು ಎಲ್ಲರಲ್ಲೂ
ಇವೆ, ಅದು ತಪ್ಪಲ್ಲ ! ಪ್ರಮಾಣ
ಜಾಸ್ತಿಯಾದರೆ ಸಾಹಿತ್ಯ
ಬಾಂಧವ್ಯಕ್ಕೆ ಸೋಲು, ಪರಿಜ್ಞಾನ
ಇರಬೇಕು ; ಇಡುತ ಬರೆಯಬೇಕು
ಬೆರೆಯಬೇಕು ಬಾಳಬೇಕು !
ನಮ್ಮ ಮನೆಗೆ ಭದ್ರತೆ ಮಾಡಿದಂತೆ
ಮನಕೂ ಮಾಡೋಣ
ಜೊತೆಯಾಗಿ ಬೆರೆಯೋಣ
ಜೊತೆಯಲ್ಲಿ ಸಾಹಿತ್ಯ ಸೇವೆ
ಮಾಡೋಣವೆನುತ ಈ
ಗೀತೆಗೆ ಮಂಗಳವ ಹಾಡುತ
ವಿರಮಿಸುವೆ !
ಜಯ ಜಯ ಜಯ ಹೋ ಭಾರತ
ಮಾತೆ, ಮಂಗಳ ದಾತೆ
ಸೌಖ್ಯ ಪ್ರಧಾತೆ ಜಯ ಹೋ
ಜಯ ಹೋ ಜಯ ಹೋ !
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ