ದೊಡ್ಡವರು ನಾವೆಂಬ

ದೊಡ್ಡವರು ನಾವೆಂಬ

ಕವನ

ಶ್ವಾನಗಳು ತಮ್ಮ ಮಾತನ್ನೇ

ಸಮರ್ಥಿಸಿಕೊಳ್ಳುತ್ತವೆ

ಬಾಲ ಡೊಂಕಾದರೂ

ದೊಡ್ಡವರು ನಾವೆಂಬ ಅಹಂನಲ್ಲಿ 

ಕತ್ತೆಗಾದಷ್ಟೂ ಪ್ರಾಯವಾದರೂ ಸಹ !

ಊಟವಾಯ್ತೇಯೆಂದು ಕೇಳಿದರೆ

ಮುಂಡಾಸು ಮೂವತ್ತು ಮಳ

ಎನ್ನುವ ನೀರು ಶುನಕಗಳು !

 

ಅಪ್ಪ ನೆಟ್ಟಿರುವ ಆಲದ ಮರಕ್ಕೇ

ಸುತ್ತು ಹೊಡೆಯುವ 

ಮಗನಂತೆ ,ಕೊನೆಗೆ ಮಂಗನಂತೆ 

ಹಳೆಯಕಾಲದ ಗೆಲ್ಲನ್ನೇ ಹಿಡಿದು

ಜೋಕಾಲಿ ಹೊಡೆಯುತ್ತೇನೆ 

ಎನ್ನುವ ಹಳೆ ಕಬ್ಬಿಣ ತಾಮ್ರಗಳಿಗೆ 

ಎನೆನ್ನೋಣ ?

ಬದಲಾವಣೆಗೆ ತಮ್ಮನ್ನು 

ತೆರೆದುಕೊಳ್ಳದವರನ್ನು 

ಯಾವುದೇ ಮೇನೆಯಲ್ಲಿ 

ಕೂರಿಸಿದರೂ ನೆಲದಲ್ಲೇ 

ಎಲ್ಲವನ್ನೂ ಮಾಡುವುದ

ಬಿಡುವುದೂ ಇಲ್ಲ !

 

ಈ ಕಂಪ್ಯೂಟರ್ ಯುಗದಲ್ಲಿ 

ನಿಮ್ಮ ಲಾಟುಪೋಟ್ ಉಪದೇಶ 

ಯಾರಿಗೆ ಬೇಕಯ್ಯಾ

ಸೃಜನಶೀಲತೆ ಇಲ್ಲದ ನಿಮ್ಮ 

ಬರಹಗಳ ನಾಯಿಗಳೂ 

ಮೂಸವು, ಇನ್ನು 

ಮನುಷ್ಯರೆಲ್ಲಿಂದ 

ಮೂಸಿಯಾವು ? ಅದಕ್ಕೆಂದು 

ತೋರುತ್ತದೆ ಬರೆದ ಸಾಹಿತ್ಯಗಳೆಲ್ಲ 

ರಾಶಿ ರಾಶಿ ಪುಸ್ತಕದ ರೂಪದಲ್ಲಿ 

ಮನೆಯಲ್ಲೇ ಕೊಳೆಯುತ್ತಾ 

ಬಿದ್ದಿದೆ !

 

ದ್ವೇಷ ಭಾವನೆಯಿರುವ ಜನರು

ಕವಿಗಳಾಗಲು ಸಾಧ್ಯವೇ? 

ಕವಿಗಳ ಜೊತೆಗೇ  

ಹೊಂದಾಣಿಕೆಯಿಲ್ಲದವರನ್ನು 

ಇನ್ನೇನೆಂದು ಕರೆಯಲಿ ? 

 

ಗಣ ವಿಂಗಡಣೆಯ ಮಾಡುತ್ತಾ 

ಗುಣವಿಲ್ಲದವರಂತೆ 

ತೋರುತ್ತಾ ಮಾತೆತ್ತಿದರೆ 

ಮರ್ಯಾದೆ ತನಗೊಬ್ಬಗೆ 

ಎನ್ನುವ ಪಂಡಿತರಿಂದ ಸಾಹಿತ್ಯ 

ಬೆಳೆವುದೇ? ಎಂದರೆ ಗೋರ್ಕಲ್ಲ 

ಮೇಲೆ ಮಳೆ ಸುರಿದಂತೆ !

 

ತಪ್ಪು ಹುಳುಕುಗಳು ಎಲ್ಲರಲ್ಲೂ 

ಇವೆ, ಅದು ತಪ್ಪಲ್ಲ ! ಪ್ರಮಾಣ 

ಜಾಸ್ತಿಯಾದರೆ ಸಾಹಿತ್ಯ 

ಬಾಂಧವ್ಯಕ್ಕೆ ಸೋಲು, ಪರಿಜ್ಞಾನ 

ಇರಬೇಕು ; ಇಡುತ ಬರೆಯಬೇಕು 

ಬೆರೆಯಬೇಕು ಬಾಳಬೇಕು !

 

ನಮ್ಮ ಮನೆಗೆ ಭದ್ರತೆ ಮಾಡಿದಂತೆ 

ಮನಕೂ ಮಾಡೋಣ 

ಜೊತೆಯಾಗಿ ಬೆರೆಯೋಣ 

ಜೊತೆಯಲ್ಲಿ ಸಾಹಿತ್ಯ ಸೇವೆ 

ಮಾಡೋಣವೆನುತ ಈ 

ಗೀತೆಗೆ ಮಂಗಳವ ಹಾಡುತ 

ವಿರಮಿಸುವೆ !

 

ಜಯ ಜಯ ಜಯ ಹೋ ಭಾರತ 

ಮಾತೆ, ಮಂಗಳ ದಾತೆ

ಸೌಖ್ಯ ಪ್ರಧಾತೆ ಜಯ ಹೋ 

 ಜಯ ಹೋ ಜಯ ಹೋ !

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್