ದ್ವೇಷದ ಪರಿಣಾಮ...!

ದ್ವೇಷದ ಪರಿಣಾಮ...!

ಕವನ

ದ್ವೇಷದ ಪರಿಣಾಮ ನೋಡು

ಪ್ರಾಣಿಗಳ ವಿಭಜನೆಯಾಗಿದೆ

ಆಕಳು ಹಿಂದೂವಾಗಿ

ಕುರಿ ಮುಸಲ್ಮಾನವಾಗಿದೆ

 

ಈ ಮರ ಗಿಡ ಎಲೆಗಳೂ

ಗಾಭರಿಯಾಗಿಬಿಟ್ಟಾವೂ 

ಹಕ್ಕಿಗಳೂ ಹಿಂದೂ 

ಮುಸಲ್ಮಾನರಾಗಿ ಬಿಟ್ಟರೇ

 

ಒಣ ಖಾದ್ಯಗಳೂ ಇದ ನೋಡಿ

ಹೈರಾಣಾಗಿ ಬಿಟ್ಟಿವೆ

ಯಾವಾಗ ತೆಂಗು ಹಿಂದೂವಾಗಿ

ಖರ್ಜೂರ ಮುಸಲ್ಮಾನವಾಯಿತೆಂದು

 

ಈ ತರಹ ಧರ್ಮ ಧರ್ಮಗಳ ಹೆಸರಲಿ

ಬಣ್ಣಗಳನು ಹಂಚುತ್ತಿದ್ದೇವೆ

ಹಸಿರು ಮುಸಲ್ಮಾನನದ್ದು

ಕೆಂಪು ಹಿಂದೂವಿನ ರಂಗೆಂದು

 

ಹೀಗಾದ್ರೆ ಆ ದಿನ ದೂರವಿಲ್ಲ

ಪ್ರತಿ ಹಸಿರು ತರಕಾರಿಗಳು

ಮುಸಲ್ಮಾನರಾಗಿ

ಹಿಂದೂವಿನ ಪಾಲಿಗೆ 

ಟಮಾಟೋ ಗಜ್ಜರಿ ಮಾತ್ರ ಉಳಿದಾವೂ

 

ಈಗ ಇದು ಅರ್ಥವಾಗುತ್ತಿಲ್ಲ

ಕಲ್ಲಂಗಡಿ ಯಾರ ಪಾಲಿಗೆಂದು

ಈ ಅಮಾಯಕ ಮೇಲಿಂದ ಮುಸಲ್ಮಾನನಾಗಿ

ಒಳಗಿಂದ ಹಿಂದೂವಾಗಿದ್ದಾನೆ.

 

ಉರ್ದು ಮೂಲ: ಅನಾಮಿಕ ಕವಿ

ಕನ್ನಡಕ್ಕೆ: ಸಿಕಂದರ್ ಅಲಿ, ತೋರಣಗಲ್ಲು

 

ಚಿತ್ರ್