ನವೀಕರಿಸು ಮನ ಚಾಲನೆ ಪರವಾನಗಿ
ಕವನ
ನವೀಕರಿಸು ಮತ್ತೆ ಮನಚಾಲನೆ ಪರವಾನಗಿ
ನಕಾರಾತ್ಮಕ ಚಿಂತನೆ ಛಾಪು ಅಳಿಸಿ
ವಿಷಯಾತ್ಮಕ ಅಹಂ ತೃಷ್ಣೆ ದೂರವಿರಸಿ
ಆತ್ಮ ಪ್ರಜ್ಞೆಯ ಪ್ರಜ್ವಲ ಜ್ಯೋತಿಯಲಿ
ಶೋಧಿಸು ವಿಶಾಲ ಆತ್ಮ ಕ್ಷೇತ್ರದಲಿ
ದಹಿಸು ರಾಗ -ದ್ವೇಷ ಜ್ಞಾನದ ಅರಿವಿನಲಿ
ಸಿಲುಕದೆ ಫಲಾಸಕ್ತಿಯ ಮೋಹ ಸುಳಿಯಲಿ
ಸಂಸ್ಕರಿಸು ಚಿತ್ತ ಅನನ್ಯ ಭಕ್ತಿಯಲಿ
ಅನಿಯಂತ್ರಿತ ಈ ಜನ್ಮದ ಬವಣೆಯಲಿ
ನಿರಂತರ ಸವೆಯುತ್ತಿರುವ ದೇಹ ಆಯುಷ್ಯದಲಿ
ಭಗವಚ್ಚಿನ್ತನ ಮನ ಮಂದಿರದ ಜಲಚಿಹ್ನೆಯಾಗಲಿ
ಜೀವನ್ಮುಕ್ತಿಯ ವಿರಾಟ ಸಾಧನವಾಗಲಿ
ಶ್ರೀ ನಾಗರಾಜ್
7/4/21
- Log in to post comments