ನವ ಸಾಲು
ಕವನ
ಹೊಸ ವರುಷ ಬಂದಿತು...
ನವ ಹರುಷವ ತಂದಿತು...
ಸಕಲ ಜೀವರಾಶಿಗೆಲ್ಲಾ...
ನವ ಚೇತನ ಹರಡಿತಲ್ಲಿ.
ಉರುಳಿ, ಉರುಳಿ ಸಾಗಿತು
ತನ್ನ ಕಾಯಕವನು ಮಾಡಿತು...
ರಭಸದಿಂದ ಕಾಲ ಚಕ್ರದಾಟದಲ್ಲಿ
ಮೇಲೆ, ಕೆಳಗೆ ಸಾಗಿ ಸರಿಯಿತಲ್ಲಿ.
ಕಪ್ಪು- ಬಿಳುಪು ಆಗದಿರದೆ ?
ಹಸಿರು- ಹಳದಿ ತೋರದಿರದೆ ?
ನಿಸರ್ಗದ ನವ್ಯ ಸೊಬಗಿನಲ್ಲಿ
ಒಲವು- ಚೆಲುವು ಬೆಳಕಿನಲ್ಲಿ.
ಹಿಂದೆ- ಮುಂದೆ ಆಗದಿರದೇ?
ಮುಂದೆ- ಹಿಂದೆ ಆಗಲಿಹುದು !
ನಾವಿನ್ಯತೆಯ ಹೊಂಗಿರಣದಲ್ಲಿ
ಜಗಮಗಿಸುವ ಜಗವು ಇಲ್ಲಿ.....
ಹೊಸತು,ಹೊಸತು ಭಾವದಲ್ಲಿ
ವಿಶ್ವ ಶಾಂತಿ ಕನಸು- ನನಸಿನಲ್ಲಿ
ಕಟ್ಟೋಣ ಸಮೃದ್ಧಿಯ ಮನಸ್ಸನ್ನು
ಬೆಸೆಯೋಣ ಭಾವೈಕ್ಯತೆಯ ನಾಡನ್ನು.
-ವೀಣಾ ಕೃಷ್ಣಮೂರ್ತಿ, ದಾವಣಗೆರೆ.
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
